ಸೋನಭದ್ರ (ಉತ್ತರಪ್ರದೇಶ): ಶಿವಮಂದಿರದ ಗೋಡೆಗಳ ಮೇಲೆ 5 ಮುಸಲ್ಮಾನ ಹುಡುಗರಿಂದ ಮೂತ್ರ ವಿಸರ್ಜನೆ

ಹಿಂದೂಗಳನ್ನು ಕೊಂದು ಶವಗಳನ್ನು ನಾಪತ್ತೆ ಮಾಡುವುದಾಗಿಯೂ ಬೆದರಿಕೆ

ಸೋನಭದ್ರ (ಉತ್ತರಪ್ರದೇಶ) – ಇಲ್ಲಿನ ಬಹೇರಾ ಗ್ರಾಮದಲ್ಲಿ ೫ ಅಪ್ರಾಪ್ತ ವಯಸ್ಕ ಮುಸಲ್ಮಾನ ಹುಡುಗರು ಭಗವಾನ ಶಿವನ ಮಂದಿರದ ಗೋಡೆಗಳ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಲ್ಲದೆ, ಮೂರ್ತಿಯೊಂದಿಗೂ ಆಕ್ಷೇಪಾರ್ಹ ಕೃತ್ಯ ಎಸಗಿದ್ದಾರೆ. ಅರ್ಚಕನ ಮಗ ಅವರನ್ನು ಹಿಡಿಯಲು ಪ್ರಯತ್ನಿಸಿದಾಗ ಅವರು ಅಲ್ಲಿಂದ ಓಡಿಹೋದರು. ಓಡಿಹೋಗುವಾಗ ಅವರು ಕೊಲೆ ಮಾಡುವ ಮತ್ತು ಶವಗಳನ್ನು ನಾಪತ್ತೆ ಮಾಡುವ ಬೆದರಿಕೆಯನ್ನೂ ಹಾಕಿದ್ದಾರೆ. ಈ ಘಟನೆಯ ವಿಷಯ ಹರಡುತ್ತಿದ್ದಂತೆ ಇಡೀ ಪ್ರದೇಶದಲ್ಲಿ ಉದ್ವಿಗ್ನತೆ ನಿರ್ಮಾಣವಾಯಿತು. ಹಿಂದೂ ಸಂಘಟನೆಗಳು ಮತ್ತು ಬಜರಂಗದಳದ ಕಾರ್ಯಕರ್ತರು ಕರ್ಮಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ಪ್ರಕರಣದ ಗಾಂಭೀರ್ಯವನ್ನು ಅರಿತ ಪೊಲೀಸರು ೫ ಅಪ್ರಾಪ್ತ ಹುಡುಗರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ನಂತರ ಗ್ರಾಮದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

೧. ಸ್ಥಳೀಯ ನಾಗರಿಕರು ಹೇಳಿರುವಂತೆ, ಇದು ಕೇವಲ ಮಕ್ಕಳ ತುಂಟಾಟವಲ್ಲ, ಬದಲಿಗೆ ಹಿಂದೂಗಳ ಶ್ರದ್ಧೆಯನ್ನು ಉದ್ದೇಶಪೂರ್ವಕವಾಗಿ ನೋಯಿಸುವ ಪಿತೂರಿಯಾಗಿದೆ. ಜಲಾಲುದ್ದೀನ್, ಅಬ್ರಾರ್ ಹುಸೇನ್, ಬಬ್ಲು ಮತ್ತು ಬೋಡರ್ ಎಂಬುವವರ ಪ್ರಚೋದನೆಯಿಂದಲೇ ಈ ಮಕ್ಕಳು ಇಂತಹ ಕೆಲಸ ಮಾಡಿದ್ದಾರೆ.

೨. ಮುಸ್ಲಿಂ ಸಮುದಾಯದ ಕೆಲವು ಜನರು ಈ ದೇವಾಲಯದ ಕೆರೆಯ ದಡವನ್ನು ಅತಿಕ್ರಮಿಸಿದ್ದಾರೆ.

(ಈ ಚಿತ್ರಗಳನ್ನು ಪ್ರಕಟಿಸುವ ಹಿಂದೆ ಯಾರದ್ದೇ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶ ನಮಗಿಲ್ಲ. ಹಿಂದೂ ವಿರೋಧಿಗಳು ಮಾಡಿರುವ ಅಪಹಾಸ್ಯವನ್ನು ಸಾರ್ವಜನಿಕರ ಗಮನಕ್ಕೆ ತರುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ. – ಸಂಪಾದಕರು)

ಸಂಪಾದಕೀಯ ನಿಲುವು

ಮುಸಲ್ಮಾನ ಮಕ್ಕಳಲ್ಲಿ ಇಂತಹ ಹಿಂದೂದ್ವೇಷ ಮತ್ತು ಅಪರಾಧಿ ಮನೋವೃತ್ತಿ ಎಲ್ಲಿಂದ ಮತ್ತು ಹೇಗೆ ಹುಟ್ಟಿಕೊಂಡಿತು? ಜಾತ್ಯತೀತವಾದಿಗಳು ಮತ್ತು ಸರ್ವಧರ್ಮ ಸಮಭಾವ ಎಂದು ಜಪಿಸುವವರು ಇದಕ್ಕೆ ಉತ್ತರ ನೀಡುವರೇ?