ಮಸೀದಿಯ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ವದಂತಿ ಹಬ್ಬಿಸಿ ಮುಸಲ್ಮಾನರಿಂದ ಕಲ್ಲುತೂರಾಟ! – Delhi Turkman Gate Stone Pelting

  • ದೆಹಲಿಯ ಮುಸಲ್ಮಾನ ಬಹುಸಂಖ್ಯಾತ ತುರ್ಕಮನ್ ಗೇಟ್ ಪ್ರದೇಶದಲ್ಲಿ ಮಹಾನಗರ ಪಾಲಿಕೆಯಿಂದ ಅನಧಿಕೃತ ನಿರ್ಮಾಣಗಳ ಮೇಲೆ ಕ್ರಮ

  • ೫ ಪೊಲೀಸರಿಗೆ ಗಾಯ

ನವದೆಹಲಿ – ದೆಹಲಿಯ ಹಳೆಯ ದೆಹಲಿ ಪ್ರದೇಶದ ಮುಸಲ್ಮಾನ ಬಹುಸಂಖ್ಯಾತ ತುರ್ಕಮನ್ ಗೇಟ್ ಸಮೀಪದ ಫೈಜ್-ಎ-ಇಲಾಹಿ ಮಸೀದಿ ಪರಿಸರದಲ್ಲಿ ಜನವರಿ ೬ರ ಮಧ್ಯರಾತ್ರಿ ಪುರಸಭೆಯು ಬುಲ್ಡೋಜರ್ ಮೂಲಕ ಕ್ರಮ ಕೈಗೊಂಡಿದೆ. ದೆಹಲಿ ಉಚ್ಚ ನ್ಯಾಯಾಲಯದ ಆದೇಶದಂತೆ ಈ ಸಂಪೂರ್ಣ ಪ್ರದೇಶದಲ್ಲಿನ ಅಕ್ರಮ ನಿರ್ಮಾಣಗಳನ್ನು ಧ್ವಂಸಗೊಳಿಸಲಾಯಿತು. ಈ ಪ್ರದೇಶವು ಪ್ರಸಿದ್ಧ ರಾಮಲೀಲಾ ಮೈದಾನದ ಹತ್ತಿರದಲ್ಲಿದೆ. ಈ ಕಾರ್ಯಾಚರಣೆಯ ಸಮಯದಲ್ಲಿ ಮತಾಂಧ ಮುಸಲ್ಮಾನರು ಪಾಲಿಕೆ ಸಿಬ್ಬಂದಿ ಮತ್ತು ದೆಹಲಿ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದರು. ಇದರಲ್ಲಿ ೫ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಮೊದಲು ಲಾಠಿ ಪ್ರಹಾರ ನಡೆಸಿದರು ಮತ್ತು ನಂತರ ಅಶ್ರುವಾಯು ಪ್ರಯೋಗಿಸಿದರು.

ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆದಿಲ್ ಕಾಸಿಫ್, ಮಹಮ್ಮದ್ ಕೈಫ್, ಮಹಮ್ಮದ್ ಆರಿಬ್, ಉಜೈಫ್, ಅಜೀಮ್ ಮತ್ತು ಇರ್ಫಾನ್ ಎಂಬುವವರನ್ನು ಬಂಧಿಸಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ‘ಮಸೀದಿಯ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂಬ ವದಂತಿ ಹಬ್ಬಿಸಿದವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಅದ್ನಾನ ಮತ್ತು ಸಮೀರ ಎಂಬ ಇಬ್ಬರು ವ್ಯಕ್ತಿಗಳು ವಿಡಿಯೋ ಮತ್ತು ಧ್ವನಿಮುದ್ರಣಗಳನ್ನು ಪ್ರಸಾರ ಮಾಡಿರುವುದು ತಿಳಿದುಬಂದಿದೆ. ಇವರೆಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸುವ ಪ್ರಕ್ರಿಯೆ ನಡೆಯುತ್ತಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಜನವರಿ ೭ರ ಮಧ್ಯಾಹ್ನ ಪೊಲೀಸರು ಧ್ವಜ ಮೆರವಣಿಗೆಯನ್ನು ನಡೆಸಿದರು.

೧. ಪುರಸಭೆಯು ಮಧ್ಯರಾತ್ರಿ ೩೦ ಬುಲ್ಡೋಜರ್‌ಗಳ ಸಹಾಯದಿಂದ ಈ ಅತಿಕ್ರಮಣವನ್ನು ತೆರವುಗೊಳಿಸಿದೆ. ಸುಮಾರು ೨೦೦ ಟ್ರಕ್‌ಗಳ ಮೂಲಕ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಪೊಲೀಸರು ಈ ಭಾಗದ ಎಲ್ಲಾ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ಸಂಚಾರ ಸ್ಥಗಿತಗೊಳಿಸಿದ್ದಾರೆ.

೨. ಜನವರಿ ೬ರಂದು ದೆಹಲಿ ಉಚ್ಚ ನ್ಯಾಯಾಲಯವು ಇಲ್ಲಿನ ಮಸೀದಿ ಮತ್ತು ಸ್ಮಶಾನಕ್ಕೆ ಹೊಂದಿಕೊಂಡಿರುವ ಭೂಮಿಯ ಮೇಲಿನ ಅತಿಕ್ರಮಣವನ್ನು ತೆರವುಗೊಳಿಸಲು ನೋಟಿಸ್ ನೀಡಿತ್ತು. ಇದು ‘ವಕ್ಫ್’ ಸ್ವತ್ತು ಎಂದು ಅರ್ಜಿದಾರ ಸಮಿತಿಯು ವಾದಿಸಿತ್ತು.

೩. ಆದರೆ, ಈ ಹೆಚ್ಚುವರಿ ಭೂಮಿಯ ಮೇಲೆ ಮಾಲೀಕತ್ವ ಅಥವಾ ಕಾನೂನುಬದ್ಧ ನಿಯಂತ್ರಣ ಹೊಂದಿರುವ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಪಾಲಿಕೆಯು ಸ್ಪಷ್ಟಪಡಿಸಿದೆ. ಇದೇ ಅಂಶವನ್ನು ನ್ಯಾಯಾಲಯದಲ್ಲಿ ಸವಾಲು ಮಾಡಲಾಗಿತ್ತು. ಅಂತಿಮವಾಗಿ ಅತಿಕ್ರಮಣ ತೆರವುಗೊಳಿಸಲು ನಮಗೆ ಯಾವುದೇ ಆಕ್ಷೇಪವಿಲ್ಲ ಎಂದು ಮುಸ್ಲಿಂ ಪಕ್ಷದ ಸಮಿತಿಯು ನ್ಯಾಯಾಲಯದಲ್ಲಿ ತಿಳಿಸಿದ ನಂತರವೇ ಈ ಕ್ರಮ ಕೈಗೊಳ್ಳಲಾಗಿದೆ.

ಅರ್ಜಿದಾರ ಪ್ರೀತ್ ಸರೋಹಿ ಅವರಿಂದ ಭೀತಿ ವ್ಯಕ್ತ

ಪೊಲೀಸರ ಮೇಲೆ ದಾಳಿ ಮಾಡುವ ಗುಂಪು ನನ್ನನ್ನು ಕೊಲ್ಲಬಹುದು!

ಯಾವ ಅರ್ಜಿಯ ಆಧಾರದ ಮೇಲೆ ದೆಹಲಿ ಉಚ್ಚ ನ್ಯಾಯಾಲಯವು ತುರ್ಕಮನ್ ಗೇಟ್ ಬಳಿಯ ಅತಿಕ್ರಮಣವನ್ನು ತೆರವುಗೊಳಿಸಲು ಆದೇಶ ನೀಡಿತ್ತೋ, ಆ ಅರ್ಜಿಯನ್ನು ಪ್ರೀತ್ ಸರೋಹಿ ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದ ನಂತರ ಕ್ರಮ ಕೈಗೊಳ್ಳುತ್ತಿದ್ದ ಪೊಲೀಸರ ಮೇಲೆ ಮುಸ್ಲಿಂ ಮೂಲಭೂತವಾದಿಗಳು ಕಲ್ಲು ತೂರಾಟ ನಡೆಸಿದರು.

ಇದರ ಬಗ್ಗೆ ಪ್ರೀತ್ ಸರೋಹಿ ಅವರು ‘ಎಕ್ಸ್’ (ಟ್ವಿಟರ್) ನಲ್ಲಿ ಹೀಗೆ ಬರೆದುಕೊಂಡಿದ್ದಾರೆ: “ಹನುಮಾನ್ ಜೀ, ನನ್ನನ್ನು ರಕ್ಷಿಸು. ಪೊಲೀಸರ ಮೇಲೆಯೇ ದಾಳಿ ಮಾಡುವವರು ನನ್ನನ್ನು ಬಿಡುತ್ತಾರೆಯೇ? ಈ ಗುಂಪು ನನ್ನನ್ನು ಕೊಂದು ಹಾಕುತ್ತದೆ ಎಂದು ನನಗನ್ನಿಸುತ್ತಿದೆ.”

 

ಸಂಪಾದಕೀಯ ನಿಲುವು

  • ದೆಹಲಿ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಕೈಗೊಳ್ಳಲಾಗುತ್ತಿರುವ ಕ್ರಮದ ವಿರುದ್ಧ ಮುಸಲ್ಮಾನರು ಕಲ್ಲುತೂರಾಟ ನಡೆಸುತ್ತಾರೆ ಎಂದರೆ, ಅವರು ನ್ಯಾಯಾಲಯವನ್ನೂ ಗೌರವಿಸುವುದಿಲ್ಲ ಎಂಬುದನ್ನು ಗಮನಿಸಬೇಕು!
  • ದೇಶದ ಯಾವುದೇ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಪೊಲೀಸ್ ಅಥವಾ ಆಡಳಿತ ವರ್ಗದವರು ಕ್ರಮ ಕೈಗೊಳ್ಳಲು ಹೋದರೆ ಇಂತಹ ಪರಿಸ್ಥಿತಿ ಯಾವಾಗಲೂ ಏಕೆ ನಿರ್ಮಾಣವಾಗುತ್ತದೆ? ಇದಕ್ಕೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷದಂತಹ ಕಪಟ ಜಾತ್ಯತೀತ ರಾಜಕೀಯ ಪಕ್ಷಗಳು ಉತ್ತರಿಸುವರೇ?