‘ಬಾಬರಿ ಮಸೀದಿ ಕಟ್ಟುವುದನ್ನು ತಡೆಯಲು ಯತ್ನಿಸಿದರೆ ಶಿರಚ್ಛೇದ ಮಾಡುತ್ತೇವೆ!’ – ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯೂನ್ ಕಬೀರ್

  • ಮುರ್ಷಿದಾಬಾದ್(ಪ.ಬಂಗಾಳ): ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯೂನ್ ಕಬೀರ್ ಅವರ ಬೆದರಿಕೆ

  • ‘ನಮ್ಮ 100 ಜನರು ಸತ್ತರೆ, ನಾವು 500 ಜನರನ್ನು ಕೊಲ್ಲುತ್ತೇವೆ’ ಎಂಬ ಬೆದರಿಕೆ

ಮುರ್ಷಿದಾಬಾದ್ (ಪ.ಬಂಗಾಳ) – ಬೆಲಡಾಂಗಾ ಪ್ರದೇಶದಲ್ಲಿ ಮುಂಬರುವ ಡಿಸೆಂಬರ್ 6 ರಂದು ‘ಬಾಬರಿ’ ಹೆಸರಿನ ಮಸೀದಿಗೆ ಅಡಿಗಲ್ಲು ಹಾಕಲಾಗುವುದೆಂದು ತೃಣಮೂಲ ಕಾಂಗ್ರೆಸ್ಸಿನ ಸ್ಥಳೀಯ ಶಾಸಕ ಹುಮಾಯೂನ್ ಕಬೀರ್ ಘೋಷಿಸಿದ್ದರು, ಈಗ ಆ ಬಗ್ಗೆ ಬೆದರಿಕೆಯನ್ನೂ ಸಹ ಹಾಕಿದ್ದಾರೆ. “ಯಾರಾದರೂ ಈ ಮಸೀದಿಯ ನಿರ್ಮಾಣಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿದರೆ, ರಕ್ತಪಾತವಾಗುತ್ತದೆ. ನನ್ನ ವಿರುದ್ಧ ಯಾರಾದರೂ ಏನಾದರೂ ಮಾಡಲು ಯತ್ನಿಸಿದರೆ, ನಾನು ಶಿರಚ್ಛೇದ ಮಾಡುತ್ತೇನೆ,” ಎಂದು ಬೆದರಿಕೆ ಹಾಕುವ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಮುರ್ಷಿದಾಬಾದ್ ಜಿಲ್ಲೆಯಲ್ಲಿ ಮುಸಲ್ಮಾನರ ಜನಸಂಖ್ಯೆ ಸುಮಾರು ಶೇ.70% ರಷ್ಟಿದೆ. ಈ ಹಿನ್ನೆಲೆಯಲ್ಲಿ ಕಬೀರ್ ಈ ಬೆದರಿಕೆ ನೀಡಿದ್ದಾರೆ.

ಈ ವಿಡಿಯೋದಲ್ಲಿ ಕಬೀರ್ ಮಾತು ಮುಂದುವರೆಸಿ,

ಈಗ ನಾವು (ಮುಸಲ್ಮಾನರು) ಶೇ.27% ರಷ್ಟಿದ್ದೇವೆ, ಬಾಬರಿ ಮಸೀದಿ ನಿಲ್ಲುವ ಹೊತ್ತಿಗೆ ಶೇ.40% ಆಗುತ್ತೇವೆ. ಯಾವ ಶಕ್ತಿ ನಮ್ಮನ್ನು ತಡೆಯುತ್ತದೆ ನೋಡೋಣ? ಈ ನಿರ್ಮಾಣದ ಸಮಯದಲ್ಲಿ ನಮ್ಮ 100 ಜನರು ಸತ್ತರೆ, ಆ ಕಡೆಯ 500 ಜನರನ್ನು ಕೊಲ್ಲುತ್ತೇವೆ ಎಂದು ನಾವೇ ನಿರ್ಧರಿಸುತ್ತೇವೆ. ಇದು ನಮ್ಮ ಎಚ್ಚರಿಕೆಯಾಗಿದೆ. ಇದು ಅಯೋಧ್ಯೆಯಲ್ಲ, ಇದು ಮುರ್ಷಿದಾಬಾದ್. ಯಾರಾದರೂ ಈ ಮಸೀದಿಯನ್ನು ಮುಟ್ಟಲು ಪ್ರಯತ್ನಿಸಿದರೆ, ನಾವು ಏನು ಮಾಡಬಹುದು ಎಂಬುದನ್ನು ತೋರಿಸುತ್ತೇವೆ.

ಕಬೀರ್ ಅವರ ಈ ಹೇಳಿಕೆಯನ್ನು ಟೀಕಿಸಿದ ಭಾಜಪ, ತೃಣಮೂಲ ಕಾಂಗ್ರೆಸ್ ಧಾರ್ಮಿಕ ಪ್ರಚೋದನೆ ನೀಡಿ ಮತಗಳ ಧ್ರುವೀಕರಣ ಮಾಡಲು ಬಯಸುತ್ತಿದೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

  • ಈ ಬೆದರಿಕೆಯಿಂದ, ತೃಣಮೂಲ ಕಾಂಗ್ರೆಸ್ ಪ.ಬಂಗಾಳವನ್ನು ‘ಎರಡನೇ ಬಾಂಗ್ಲಾದೇಶ’ ಮಾಡಲು ಸಿದ್ಧತೆ ನಡೆಸುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಇಂತಹ ಬೆದರಿಕೆ ನೀಡಿದರೂ ಕಬೀರ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಅಥವಾ ಪ್ರಕರಣ ದಾಖಲಿಸಿಲ್ಲ ಎಂದರೆ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅಸ್ತಿತ್ವದಲ್ಲಿಲ್ಲ ಎಂಬುದು ಗಮನಕ್ಕೆ ಬರುತ್ತದೆ.
  • ‘ಜೈ ಶ್ರೀರಾಮ್’ ಘೋಷಣೆ ಕೇಳಿದರೆ ಆಕ್ಷೇಪ ವ್ಯಕ್ತಪಡಿಸುವವರು, ಬಾಬರಿಗಾಗಿ ಶಿರಚ್ಛೇದ ಮಾಡುತ್ತೇವೆ ಎನ್ನುವವರ ಬಗ್ಗೆ ಏನೂ ಹೇಳುವುದಿಲ್ಲ.
  • ಮುರ್ಷಿದಾಬಾದ್ ನಲ್ಲಿ ಶೇಕಡಾ 70%ರಷ್ಟು ಮುಸಲ್ಮಾನರಿದ್ದಾರೆ. ಆದುದರಿಂದ, ಮುಸಲ್ಮಾನರು ಬಹುಸಂಖ್ಯಾತರಾದಾಗ ಏನಾಗುತ್ತದೆ ಎಂಬುದನ್ನು ಹಿಂದೂಗಳು ಅರಿತು, ಭಾರತವನ್ನು ಶೀಘ್ರವಾಗಿ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಿದ್ಧರಾಗಬೇಕು.
  • ಹಿಂದುತ್ವವಾದಿಗಳ ವಿರುದ್ಧ ತಥಾಕಥಿತ ‘ದ್ವೇಷ ಭಾಷಣ’ದ (ಪ್ರಚೋದನಕಾರಿ ಭಾಷಣ ಮಾಡಿರುವ) ದೂರು ನೀಡುವವರು ಈಗ ಶಾಸಕ ಹುಮಾಯೂನ್ ಕಬೀರ್ ಅವರ ಪ್ರಚೋದನಕಾರಿ ಹೇಳಿಕೆಯ ಬಗ್ಗೆ ಯಾಕೆ ಮೌನವಾಗಿದ್ದಾರೆ?