
‘ಸದ್ಯದ ಕಾಲದಲ್ಲಿ ಕೆಲವು ಸಾಧಕರು ಸಾಧನೆಯನ್ನು ಬಿಟ್ಟು ಪುನಃ ವ್ಯವಹಾರಕ್ಕೆ ಹೋಗುತ್ತಿದ್ದಾರೆ. ಇದರ ಮುಖ್ಯ ೨ ಕಾರಣಗಳೆಂದರೆ ೧. ಕಾಲಮಹಾತ್ಮೆ ಮತ್ತು ೨. ಸಾಧನೆ ಯೋಗ್ಯ ರೀತಿಯಲ್ಲಿ ಆಗದಿರುವುದು.
೧. ಕಾಲಮಹಾತ್ಮೆ
ಮನೆಯಲ್ಲಿ ಆರ್ಥಿಕ ಅಡಚಣೆಗಳು ಬರುವುದು ಅಥವಾ ತಂದೆ-ತಾಯಂದಿರು ಅಥವಾ ಮನೆಯ ಇತರರು ಅನಾರೋಗ್ಯ ಪೀಡಿತರಾಗುವುದು, ಇಂತಹ ಸಾಧನೆಗೆ ಬಾಧಕ ವಾಗುವಂತಹ ತೊಂದರೆಗಳು ಕಾಲಮಹಾತ್ಮೆಯಿಂದಾಗಿ ಬರುತ್ತವೆ; ಆದರೆ ಇಂತಹ ಪರಿಸ್ಥಿತಿಯಲ್ಲಿ ಆ ಸಾಧಕನು ತನ್ನ ಸಾಧನೆಯನ್ನು ಮುಂದುವರೆಸಿಕೊಂಡು ಹೋಗಬಹುದು.
೨. ಸಾಧನೆ ಯೋಗ್ಯ ರೀತಿಯಲ್ಲಿ ಆಗದಿರುವುದು
ಸಾಧನೆ ಮಾಡುವಾಗ ಅಂತರ್ಮುಖರಾಗಿ ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗಾಗಿ ಇರುವ ಪ್ರಯತ್ನಗಳು ಕಡಿಮೆಯಾದ ಕಾರಣ ಸಾಧಕರಿಗೆ ಪರಿಸ್ಥಿತಿಗೆ ಅನುಗುಣವಾಗಿ ಸಾಧನೆಯ ಯೋಗ್ಯ ದೃಷ್ಟಿಕೋನ ಗಮನಕ್ಕೆ ಬರುವುದಿಲ್ಲ. ಆದುದರಿಂದ ಅವರಿಗೆ ವಿಕಲ್ಪಗಳು ಉಂಟಾಗಿ ಅವರು ಸಾಧನೆ ಮಾಡುವುದನ್ನು ನಿಲ್ಲಿಸುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಸಾಧಕರು ಸಾಧನೆಯನ್ನು ಬಿಡಲು ಇದೇ ಕಾರಣವಾಗಿರುತ್ತದೆ. ಇಂತಹ ಸಾಧಕರು ಮುಂದೆ ಮಾಯೆಯಲ್ಲಿ ಸಿಲುಕಿದರೆ, ಅವರಿಗೆ ಪುನಃ ಸಾಧನೆಯನ್ನು ಆರಂಭಿಸುವುದು ಕಠಿಣವಾಗುತ್ತದೆ. ಆದ್ದರಿಂದ ಸಾಧಕರೇ, ಅಂತರ್ಮುಖರಾಗಿ ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಯ ಪ್ರಯತ್ನಗಳನ್ನು ಮಾಡಿ ಮತ್ತು ನಿಮಗೆ ಯೋಗ್ಯ ದೃಷ್ಟಿಕೋನ ಗಮನಕ್ಕೆ ಬರದಿದ್ದರೆ ತಕ್ಷಣ ಜವಾಬ್ದಾರ ಸಾಧಕರ ಮಾರ್ಗದರ್ಶನವನ್ನು ಪಡೆಯಿರಿ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !