ಸಾಧಕರೇ, ಸ್ಥೂಲದೇಹದಿಂದ ಸೇವೆ ಆಗದಿದ್ದರೆ ವ್ಯಷ್ಟಿ ಸಾಧನೆಗಾಗಿ ಅಗತ್ಯವಿದ್ದಷ್ಟು ನಾಮಜಪ ಮಾಡಿದ ನಂತರ ಉಳಿದ ನಾಮಜಪವು ಸಮಷ್ಟಿ ಸಾಧನೆಗಾಗಿಯೇ ಆಗಿದೆ, ಎಂಬುದು ಗಮನದಲ್ಲಿಡಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಕೆಲವು ವಯೋವೃದ್ಧ ಸಾಧಕರಿಗೆ ವಯಸ್ಸಾದ ಕಾರಣದಿಂದ ಸಮಷ್ಟಿ ಸೇವೆ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಅವರಿಗೆ ಖೇದವೆನಿಸುತ್ತದೆ ಮತ್ತು ಅವರ ಮನಸ್ಸಿನಲ್ಲಿ ‘ನನ್ನಿಂದ ಗುರುಸೇವೆ ಆಗುವುದಿಲ್ಲ, ಹಾಗಾದರೆ ನನ್ನ ಪ್ರಗತಿ ಹೇಗೆ ಆಗುವುದು ?’, ಎಂಬ ವಿಚಾರ ಬರುತ್ತದೆ. ಇಂತಹ ಸಮಯದಲ್ಲಿ ಸಾಧಕರು ‘ವ್ಯಷ್ಟಿ ಸಾಧನೆಗಾಗಿ ಅಗತ್ಯವಿದ್ದಷ್ಟು ನಾಮಜಪ ಮಾಡಿದ ನಂತರ ಅವರು ಮಾಡಿದ ನಾಮಜಪವು ಸಮಷ್ಟಿಗಾಗಿ ಬಳಸಲ್ಪಡುತ್ತದೆ’, ಇದನ್ನು ಗಮನದಲ್ಲಿಡಬೇಕು. ಹಾಗೆಯೇ ‘ನಾನು ಇಷ್ಟೊಂದು ವರ್ಷಗಳಿಂದ ಸಾಧನೆ ಮಾಡುತ್ತಿದ್ದೇನೆ, ಅದು ನನ್ನ ಸಮಷ್ಟಿ ಸಾಧನೆಯೇ ಆಗಿದೆ’, ಎಂಬ ವಿಚಾರ ಮಾಡಬೇಕು.’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ