
‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಶ್ರೇಷ್ಠತೆಯ ಬಗ್ಗೆ ತಿಳಿಯದಿರುವ ಸಾಧಕರು ವಿರಳವೇ! ನಾವು ಯಾವಾಗಲೂ ‘ಸನಾತನ ಪ್ರಭಾತ’ದಲ್ಲಿ ಅವರ ಅಲೌಕಿಕ ಗುಣವೈಶಿಷ್ಟ್ಯಗಳು, ಅವರಲ್ಲಿನ ದಿವ್ಯತ್ವ ಇತ್ಯಾದಿಗಳ ಬಗ್ಗೆ ಓದುತ್ತಿರುತ್ತೇವೆ. ಅವರು ಏನೆಲ್ಲ ಸಾಧ್ಯಪಡಿಸಿದ್ದಾರೆಯೋ, ಅದೆಲ್ಲವೂ ಒಂದು ಕ್ಷಣದಲ್ಲಿ ಆದ ಚಮತ್ಕಾರವಲ್ಲ.

ಜೀವನಾಡಿಪಟ್ಟಿಯಲ್ಲಿ ಮಹರ್ಷಿಗಳು ಹೇಳಿದಂತೆ ಅವರು ದೈವೀ ಅವತಾರವಾಗಿದಾರೆ, ಶ್ರೀಚಿತ್ಶಕ್ತಿ (ಸೌ.) ಗಾಡಗೀಳ ಇವರು ಪಡೆದಿರುವ ಆಧ್ಯಾತ್ಮಿಕ ಅಧಿಕಾರಕ್ಕಾಗಿ ಅವರು ಅಪಾರ ಕಷ್ಟಗಳನ್ನೂ ಅನುಭವಿಸಿದ್ದಾರೆ. ಬಹುಶಃ ಈ ವಿಷಯವು ಕೆಲವು ಸಾಧಕರಿಗೆ ಮಾತ್ರ ಗೊತ್ತಿರಬಹುದು! ‘ನನಗೆ ತುಂಬಾ ಮೊದಲಿನಿಂದಲೂ ಶ್ರೀಚಿತ್ಶಕ್ತಿ (ಸೌ.) ಗಾಡಗೀಳ ಇವರೊಂದಿಗೆ ಸೇವೆ ಮಾಡುವ ಅವಕಾಶ ಸಿಕ್ಕಿತು’, ಇದು ನಾನು ನನ್ನ ಅದೃಷ್ಟವೆಂದು ತಿಳಿಯುತ್ತೇನೆ. ಈ ದಿವ್ಯತ್ವವನ್ನು ಪಡೆಯಲು ಅವರು ಪಟ್ಟ ಶ್ರಮಗಳನ್ನು ನಾನು ನನ್ನ ಕಣ್ಣುಗಳಿಂದ ನೋಡಿದ್ದೇನೆ. ಅವರಲ್ಲಿನ ದೈವೀ ಗುಣಗಳು ಗಮನಕ್ಕೆ ಬಂದು ಅವರ ಬಗ್ಗೆ ನಮ್ಮಲ್ಲಿ ಖಂಡಿತ ಕೃತಜ್ಞತಾಭಾವ ಮೂಡುವುದು!
– ಶ್ರೀ. ಯೋಗೇಶ ಜಲತಾರೆ, ಸಮೂಹ ಸಂಪಾದಕರು, ಸನಾತನ ಪ್ರಭಾತ. (೧೯.೧೧.೨೦೨೪)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಶ್ರೀ ರಾಜಮಾತಂಗಿ ಮಹಾಯಜ್ಞ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !