ಶಬರಿಮಲೆ ದೇವಾಲಯದ ಚಿನ್ನದ ಹಗರಣಕ್ಕೆ ಸಂಬಂಧಿಸಿದಂತೆ ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷರ ಬಂಧನ -Sabarimala Temple Gold Scam

ಮಾಕಪ ಜೊತೆ ಹಳೆಯ ನಂಟು!

ತಿರುವನಂತಪುರಂ (ಕೇರಳ) – ಶಬರಿಮಲೆ ದೇವಾಲಯದ ಚಿನ್ನ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಾವಂಕೂರು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷರು ಮತ್ತು ಆಯುಕ್ತರಾದ ಎನ್. ವಾಸು ಅವರನ್ನು ವಿಶೇಷ ತನಿಖಾ ತಂಡವು ಬಂಧಿಸಿದೆ. ವಾಸು ಅವರು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ (‘ಮಾಕಪ’ದ) ಜೊತೆ ಹಳೆಯ ಸಂಬಂಧ ಹೊಂದಿದ್ದು, ಕೊಲ್ಲಂ ಪಂಚಾಯತ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರು ಮಾಜಿ ಸಚಿವ ಪಿ.ಕೆ. ಗುರುದಾಸನ್ ಅವರ ಖಾಸಗಿ ಕಾರ್ಯದರ್ಶಿ ಮತ್ತು ಕಾನೂನು ಸಲಹೆಗಾರರಾಗಿದ್ದರು.

ಈ ಬಂಧನದ ಕುರಿತು ಭಾಜಪ ನಾಯಕರು ಮತ್ತು ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರು, ವಾಸು ಅವರ ಬಂಧನದಿಂದಾಗಿ ಹಿರಿಯ ಮಾಕಪ ನಾಯಕರ ಒಡನಾಟ ಬಯಲಾಗಲಿದೆ. ವಿಶೇಷ ತನಿಖಾ ತಂಡವು ಮಾಕಪ ನಾಯಕ ಮತ್ತು ಮಾಜಿ ಅಧ್ಯಕ್ಷ ಪದ್ಮಕುಮಾರ್ ಅವರನ್ನೂ ಸಹ ವಿಚಾರಣೆ ಮಾಡಬಹುದು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇದರಿಂದ ಸಾಮ್ಯವಾದಿಗಳ ರಾಜ್ಯದಲ್ಲಿ ದೇವಾಲಯಗಳ ಸಂಪತ್ತನ್ನು ಯಾರು ದೋಚುತ್ತಿದ್ದಾರೆ ಎಂಬುದು ಬಯಲಾಗುತ್ತದೆ!