ಮಥುರಾದಲ್ಲಿ ಗೋಕಳ್ಳ ಸಾಗಾಣಿಕೆದಾರ ಜಬ್ಬಾರ ಖಾನ್ ಪೊಲೀಸ ಚಕಮಕಿಯಲ್ಲಿ ಗಾಯ !

  • 2016 ರಿಂದ ತಲೆಮರೆಸಿಕೊಂಡಿದ್ದನು

  • ಆರೋಪಿ ಜಬ್ಬಾರ ಖಾನನ ಮೇಲೆ 25 ಸಾವಿರ ರೂಪಾಯಿ ಬಹುಮಾನವಿತ್ತು

ಮಥುರಾ (ಉತ್ತರ ಪ್ರದೇಶ) – ಮಥುರಾ ಜಿಲ್ಲೆಯಲ್ಲಿ ನವೆಂಬರ್ 8 ರಂದು ಪೊಲೀಸರು ಮತ್ತು ಗೋಕಳ್ಳಸಾಗಾಣಿಕೆದಾರ ಸಿರಾಜ ಜಬ್ಬಾರ ಖಾನ್ ಅಲಿ ಮಿಯೋ ನಡುವೆ ಚಕಮಕಿ ನಡೆಯಿತು. ಈ ಚಕಮಕಿಯಲ್ಲಿ ಗೋಕಳ್ಳಸಾಗಾಣಿಕೆದಾರ ಜಬ್ಬಾರ ಖಾನ್ ಗಾಯಗೊಂಡನು. ಗೋಕಳ್ಳಸಾಗಾಣಿಕೆದಾರ ಜಬ್ಬಾರ್ ಖಾನ್ ಹರಿಯಾಣದ ಪಲವಲ್ ಜಿಲ್ಲೆಯ ನಿವಾಸಿಯಾಗಿದ್ದಾನೆ. ಅವನ ಮೇಲೆ 25 ಸಾವಿರ ರೂಪಾಯಿಗಳ ಬಹುಮಾನವನ್ನು ಘೋಷಿಸಲಾಗಿತ್ತು.

ಘಟನಾ ಸ್ಥಳದಿಂದ ಪೊಲೀಸರು ಒಂದು ದ್ವಿಚಕ್ರ ವಾಹನ, ಒಂದು ಪಿಸ್ತೂಲ್ ಮತ್ತು 2 ಕಾಟ್ರಿಜ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಗೋಕಳ್ಳಸಾಗಾಣಿಕೆದಾರ ಜಬ್ಬಾರ ಖಾನ್ 2016 ರಿಂದ ತಲೆಮರೆಸಿಕೊಂಡಿದ್ದನು. ಅವನು ಗೋಕಳ್ಳಸಾಗಾಣಿಕೆಯಲ್ಲಿ ಅನೇಕ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ.

ಸಂಪಾದಕೀಯ ನಿಲುವು

ಕೇವಲ ಉತ್ತರ ಪ್ರದೇಶದಲ್ಲಿ ಮಾತ್ರವೇ ಗೋಕಳ್ಳ ಸಾಗಾಣಿಕೆದಾರನ ವಿರುದ್ಧ ಇಂತಹ ಕಠಿಣ ಕ್ರಮ ಆಗುತ್ತದೆ ಎಂಬುದನ್ನು ಗಮನಿಸಬೇಕು!‌