​ಶ್ರೀರಾಮ ಮತ್ತು ಶ್ರೀಕೃಷ್ಣರ ಆಶೀರ್ವಾದ ಪಡೆಯಲು, ಎಲ್ಲಾ ಸಾಧಕರು ಪ್ರತಿದಿನ ೧೦೮ ಬಾರಿ ‘ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ । ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ।।’ ಎಂಬ ಮಹಾಮಂತ್ರವನ್ನು ಹೇಳಬೇಕು!

ಸಾಧಕರಿಗೆ ಸೂಚನೆ

​ಸಪ್ತರ್ಷಿ ಜೀವನಾಡಿಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ, ಎಲ್ಲೆಡೆ ಇರುವ ಸನಾತನದ ಸಾಧಕರಿಗೆ ಯುದ್ಧಕಾಲಕ್ಕಾಗಿ ಶ್ರೀಕೃಷ್ಣನ ಮತ್ತು ರಾಮರಾಜ್ಯಕ್ಕಾಗಿ ಶ್ರೀರಾಮನ ಆಶೀರ್ವಾದವನ್ನು ಪಡೆಯುವುದು ಅವಶ್ಯಕವಾಗಿದೆ. ಕಲಿಯುಗದಲ್ಲಿ, ಮಹರ್ಷಿ ನಾರದರಿಂದ ಸಮಸ್ತ ಮಾನವಕುಲಕ್ಕಾಗಿ ‘ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ । ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ।।’ ಈ ಮಹಾಮಂತ್ರವು ಲಭಿಸಿದೆ.

ಪ್ರಸ್ತುತ ಸಾಧಕರು ಮಾಡುತ್ತಿರುವ ನಿಯಮಿತ ನಾಮಜಪಗಳೊಂದಿಗೆ, ಇನ್ನು ಮುಂದೆ ಮೇಲಿನ ಮಹಾಮಂತ್ರವನ್ನು ಪ್ರತಿದಿನ ೧೦೮ ಬಾರಿ ಹೇಳಬೇಕು. ಈ ಮಹಾಮಂತ್ರಕ್ಕೆ ಸ್ಥಳ-ಕಾಲದ ಬಂಧನವಿಲ್ಲ. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರಲ್ಲಿ ಶ್ರೀರಾಮ ಮತ್ತು ಶ್ರೀಕೃಷ್ಣ ಈ ಎರಡೂ ದೇವತೆಗಳ ತತ್ತ್ವಗಳಿರುವುದರಿಂದ, ಎಲ್ಲಾ ಸಾಧಕರು ಈ ಮಹಾಮಂತ್ರವನ್ನು ಹೇಳುವಾಗ ಗುರುದೇವರ ಸ್ಮರಣೆ ಮಾಡಬೇಕು.
– ​ಸಪ್ತರ್ಷಿ ಜೀವನಾಡಿ (ಪೂ. ಡಾ. ಓಂ ಉಲಗನಾಥನ್ ಅವರು ಮಾಡಿದ ನಾಡಿವಾಚನ, ೨೦.೧೦.೨೦೨೫)