ಗುರುಬೋಧ

ಪ್ರಾ. ಗುರುನಾಥ ವಿಶ್ವನಾಥ ಮುಂಗಳೆ

೧. ಜಗತ್ತಿನ ಎಲ್ಲಾ ನಿರ್ಮಿತಿಯು ಒಂದು `Form of thought’ (ವಿಚಾರವೇ ರೂಪ) ಆಗಿದೆ. ಭಗವಂತನ ವಿಚಾರವೇ, ಜಗತ್ತು ಮತ್ತು ಅವನ ಆಟ, ಎಂದರೆ ಜಗತ್ತಿನ ವಿಷಮತೆ ಆಗಿದೆ. ನಿಮ್ಮ ಅಸ್ತಿತ್ವವು ಸಹ ಯಾರೋ ಒಬ್ಬರ ವಿಚಾರವಾಗಿದೆ.

೨. ಸಂತರನ್ನು ಜನರು ಪ್ರೀತಿಸುತ್ತಾರೆ; ಏಕೆಂದರೆ ಅವರ ದೇಹವು ಪ್ರೀತಿಯಿಂದ ಕೂಡಿರುತ್ತದೆ. ಸಂತರ ದೇಹವು ಮೃದು ಮತ್ತು ಕೋಮಲವಾಗಿರುತ್ತದೆ; ಏಕೆಂದರೆ ಅವರ ಮನಸ್ಸಿನ ಮೃದುತ್ವವು ಪರಾಕೋಟಿಯದ್ದಾಗಿರುತ್ತದೆ.

೩. ವೇದಾಂತದ ಕುರಿತು ಚರ್ಚೆ ಮಾಡಲು ಸಾಧ್ಯವಾದರೆ, ‘ವೇದವನ್ನು ತಿಳಿದಿದ್ದೇನೆ’, ಎಂದು ಅನಿಸಿದರೂ, ದೇಹಬುದ್ಧಿಯ ಅಭಿಮಾನವನ್ನು ಇಟ್ಟುಕೊಳ್ಳಬಾರದು; ಏಕೆಂದರೆ ವೇದವು ಈಶ್ವರನಿಂದ ನಿರ್ಮಿಸಲ್ಪಟ್ಟಿದೆ ಮತ್ತು ಅದನ್ನು ತಿಳಿಸಿಕೊಡುವ ಪ್ರಕ್ರಿಯೆಯನ್ನೂ ಈಶ್ವರನೇ ಮಾಡುತ್ತಾನೆ.

– ಪ್ರಾ. ಗುರುನಾಥ ವಿಶ್ವನಾಥ ಮುಂಗಳೆ, ಕೊಲ್ಹಾಪುರ (‘ಗುರುಬೋಧ’)