ಗರಬಾ ಹಿಂದೂಗಳಿಗೆ ಇರುವುದರಿಂದ ಮುಸ್ಲಿಮರಿಗೆ ಪ್ರವೇಶ ನೀಡಬೇಡಿ! – Non-Hindus Garba Entry Ban

  • ವಿಶ್ವ ಹಿಂದೂ ಪರಿಷತ್ ನಿಂದ ನಾಗ್ಪುರದ ಗರಬಾ ಆಯೋಜಿಕರಿಗೆ ಸೂಚನೆ

  • ಮುಸಲ್ಮಾನ ಯುವಕರು ಗರಬಾ ಕಾರ್ಯಕ್ರಮಕ್ಕೆ ಬಂದರೆ ಪೊಲೀಸರಿಗೆ ಒಪ್ಪಿಸುವ ಎಚ್ಚರಿಕೆ

ನಾಗ್ಪುರ – ನವರಾತ್ರಿ ಉತ್ಸವದಲ್ಲಿ ನಡೆಯುವ ಗರಬಾ ಕೇವಲ ಹಿಂದೂಗಳಿಗಾಗಿ ಇರುವುದು. ಆದ್ದರಿಂದ ಅಲ್ಲಿ ಮುಸ್ಲಿಮರಿಗೆ ಪ್ರವೇಶ ನೀಡಬೇಡಿ, ಎಂದು ವಿಶ್ವ ಹಿಂದೂ ಪರಿಷತ್ತು (ವಿಹಿಂಪ) ನಾಗ್ಪುರದ ಗರಬಾ ಆಯೋಜಕರಿಗೆ ಸೂಚನೆ ನೀಡಿದೆ. ‘ಗರಬಾಗಾಗಿ ಪ್ರವೇಶ ನೀಡುವಾಗ ಆಧಾರ್ ಕಾರ್ಡ್ ಪರಿಶೀಲಿಸಿ ನಂತರವೇ ಪ್ರವೇಶ ನೀಡಿ. ಮುಸಲ್ಮಾನ ಯುವಕ ಗರಬಾ ಕಾರ್ಯಕ್ರಮಕ್ಕೆ ಬಂದರೆ, ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗುವುದು’ ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ. ಈ ಸಂದರ್ಭದಲ್ಲಿ ವಿಹಿಂಪ ಶೀಘ್ರದಲ್ಲೇ ಪತ್ರಿಕಾಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿಯನ್ನು ನೀಡಲಿದೆ, ಹಾಗೂ ಪೊಲೀಸರಿಗೂ ವಿವರವಾದ ಮಾಹಿತಿ ನೀಡಿ ವಿನಂತಿ ಪತ್ರವನ್ನು ನೀಡಲಾಗುವುದು ಎಂದು ತಿಳಿದುಬಂದಿದೆ.