
‘ಪೂ. (ಶ್ರೀಮತಿ) ನಿರ್ಮಲಾ ದಾತೆಅಜ್ಜಿ (೪೮ ನೇ ಸಂತರು, ವಯಸ್ಸು ೯೧ ವರ್ಷ) ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮದಲ್ಲಿ ವಾಸವಿದ್ದು, ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರನ್ನು ಭೇಟಿಯಾಗುವ ಮೊದಲು ನಾವು ಒಂದು ಕೋಣೆಯಲ್ಲಿ ಕುಳಿತಿದ್ದೆವು. ಆಗ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಅಲ್ಲಿಗೆ ಬಂದರು. ಆಗ ನನಗೆ ಅರಿವಾದ ಅಂಶ ಮತ್ತು ಬಂದ ಅನುಭೂತಿಗಳನ್ನು ಇಲ್ಲಿ ನೀಡಲಾಗಿದೆ.
೧. ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರ ದರ್ಶನವಾದ ಕೂಡಲೇ ನನಗೆ ತುಂಬಾ ಆನಂದವಾಯಿತು.
೨. ನಾವು ಕುಳಿತಿದ್ದ ಕೋಣೆ ತುಂಬಾ ಪ್ರಕಾಶಮಾನವಾಯಿತು. ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳರವರ ತೇಜಸ್ಸು ಎಲ್ಲೆಡೆ ಹರಡಿತ್ತು.
೩. ಅವರು ತುಂಬಾ ಭವ್ಯದಿವ್ಯ ಕಾಣಿಸುತ್ತಿದ್ದರು.
೪. ಅವರ ಮಾತುಗಳಲ್ಲಿ ಸಹಜತೆ, ನಮ್ರತೆ ಮತ್ತು ಪ್ರೀತಿ ಈ ಗುಣಗಳನ್ನು ನನಗೆ ಅನುಭವಿಸಲು ಸಾಧ್ಯವಾಯಿತು.
೫. ನನ್ನ ಮಗ ಶ್ರೀ. ಅಮಿತ ಡಗವಾರ ಇದ್ದಕ್ಕಿದ್ದಂತೆ ಒಂದು ಸಂದೇಶ ನೀಡಲು ಅಲ್ಲಿ ಬಂದನು. ಆಗ ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಅವರು ಅವನ ಬಟ್ಟೆಗಳ ಬಗ್ಗೆ ಹೇಳುತ್ತಿದ್ದರು. ಆಗ ನನಗೆ ಅವರು ಅಮಿತನ ಅಂತರಂಗದ ಶುದ್ಧೀಕರಣ ಮಾಡುತ್ತಿದ್ದಾರೆ’ ಎಂದು ಅನಿಸಿತು.
೬. ನಾವು ದೇವಿಯ ಗರ್ಭಗುಡಿಯಲ್ಲಿ ಕುಳಿತಿರುವಂತೆ ನನಗೆ ಕೋಣೆಯಲ್ಲಿ ಶಾಂತಿಯ ಅರಿವಾಯಿತು.
೭. ನನಗೆ ದೈವೀ ಸುಗಂಧ ಬಂದಿತು.
೮. ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಅವರು ಮುಗುಳ್ನಗೆ ಬೀರುತ್ತಿದ್ದರು. ಅವರು ಎಲ್ಲರನ್ನೂ ವಾತ್ಸಲ್ಯಭಾವದಿಂದ ನೋಡುತ್ತಿದ್ದರು.
೯. ‘ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಅವರನ್ನು ಅನುಭವಿಸುತ್ತಿದ್ದಾಗ ಪ. ಪೂ. ಗುರುದೇವರನ್ನು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ) ಅನುಭವಿಸುತ್ತಿದ್ದೇನೆ’ ಎಂದು ನನಗೆ ಅನಿಸಿತು. ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಅವರು ಗುರುದೇವರ ಬಗ್ಗೆ ಒಂದು ನೆನಪನ್ನು ಹೇಳಿದರು. ಆಗ ‘ಅವರು ಗುರುದೇವರೊಂದಿಗೆ ಏಕರೂಪತೆಯನ್ನು ಸಾಧಿಸಿದ್ದಾರೆ’ ಎಂದು ನನಗೆ ಅನಿಸಿತು.
‘ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಅವರ ಸತ್ಸಂಗ ನನಗೆ ಲಭಿಸಿತು’ ಅದರ ಬಗ್ಗೆ ನನ್ನ ಮನಸ್ಸು ಕೃತಜ್ಞತೆಯಿಂದ ತುಂಬಿ ಬಂದಿತು. ನನ್ನಿಂದ ದೇವರಲ್ಲಿ ‘ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಅವರಂತೆ ನೀನು ನಮ್ಮನ್ನು ರೂಪಿಸು’ ಎಂದು ಪ್ರಾರ್ಥನೆ ಯಾಯಿತು. ‘ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಅವರ ಅಮೂಲ್ಯ ಪ್ರೀತಿ ಮತ್ತು ವಾತ್ಸಲ್ಯ ಭಾವ ನನಗೆ ಅನುಭವಿಸಲು ಸಿಕ್ಕಿತು’ ಆ ಬಗ್ಗೆ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು!’
– ಪೂ. (ಶ್ರೀಮತಿ) ಮಂದಾಕಿನಿ ಡಗವಾರ (೧೧೯ ನೆಯ ಸಂತರು, ವಯಸ್ಸು ೬೧ ವರ್ಷ), ಫೋಂಡಾ, ಗೋವಾ. (೨೨.೬.೨೦೨೪)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !