ದಾವಣಗೆರೆ: ಮುಸಲ್ಮಾನ ಬಾಹುಳ್ಯವಿರುವ ಪ್ರದೇಶದಿಂದ ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆಯ ಮೇಲೆ ನಿಷೇಧ! : Ganesha Idol

  • ನಿಷೇಧ ವ್ಯಕ್ತಪಡಿಸಲು ಶ್ರೀ ಗಣೇಶಮೂರ್ತಿಗೆ ಹೊದಿಸಲಾದ ಕಪ್ಪು ಬಟ್ಟೆ

  • 2 ವರ್ಷಗಳ ಹಿಂದೆ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿರುವ ಹಿನ್ನೆಲೆಯಲ್ಲಿ ಪೊಲೀಸರ ‘ಫತ್ವಾ’

  • ಎಂದಿನಂತೆ ಈ ಹಿಂದೆ ಮೆರವಣಿಗೆ ಹಾದು ಹೋಗುತ್ತಿದ್ದ ಮಾರ್ಗದಿಂದಲೇ ಮೆರವಣಿಗೆ ನಡೆಸುವುದಾಗಿ ಹಿಂದೂಗಳ ಪಟ್ಟು

 

ಗಣೇಶನ ವಿಗ್ರಹಕ್ಕೆ ಕಪ್ಪು ಬಟ್ಟೆ ಹೊದಿಸಿ ಪ್ರತಿಭಟನೆ

ದಾವಣಗೆರೆ – ಇಲ್ಲಿನ ಶ್ರೀ ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆಯ ಮಾರ್ಗ ಬದಲಾವಣೆಗೆ ಸಂಬಂಧಿಸಿದಂತೆ ಭಾರಿ ವಿವಾದ ನಿರ್ಮಾಣವಾಗಿದೆ. ಈ ಹಿಂದಿನ ನಿಗದಿತ ಮಾರ್ಗವನ್ನೇ ಬಳಸಲು ಅವಕಾಶ ನೀಡಬೇಕೆಂಬ ಆಗ್ರಹ ಸ್ಥಳೀಯರು ಮತ್ತು ಗಣೇಶ ಮಂಡಳದ ಯುವಕರು ಮುಂದಿಟ್ಟಿದ್ದಾರೆ. ಈ ಕಾರಣದಿಂದ ಮೆರವಣಿಗೆಗೆ ತೆರಳಿದ ಮೂರ್ತಿಯನ್ನು ಮಧ್ಯ ರಸ್ತೆಯಲ್ಲಿಯೇ ನಿಲ್ಲಿಸಲಾಯಿತು. ಈ ಮೆರವಣಿಗೆ 21 ದಿನಗಳ ಗಣೇಶೋತ್ಸವದ ನಂತರ ನಡೆಸಲಾಗುತ್ತಿತ್ತು.

ದಾವಣಗೆರೆಯ ಬಸವರಾಜ ಪೇಟೆಯಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ಗಣೇಶಮೂರ್ತಿಯನ್ನು ವಿಸರ್ಜನೆಗೆ ಕೊಂಡೊಯ್ಯುವಾಗ ಈ ವಿವಾದ ಉಂಟಾಯಿತು. ಈ ಹಿಂದೆಯೂ ಮೆರವಣಿ ‘ಮದಿನಾ ಆಟೋ ಸ್ಟ್ಯಾಂಡ್’ ಮತ್ತು ‘ಹಂಸಬಾವಿ ಸರ್ಕಲ್’ ಎಂಬ ಮುಸಲ್ಮಾನ ಬಾಹುಳ್ಯವಿರುವ ಪ್ರದೇಶಗಳ ಮೂಲಕ ಸಾಗುತ್ತಿತ್ತು; ಆದರೆ 2 ವರ್ಷಗಳ ಹಿಂದೆ ಇದೇ ಮಾರ್ಗದಲ್ಲಿ ಕಲ್ಲು ತೂರಾಟ ಸಂಭವಿಸಿದ್ದರಿಂದ, ಪೊಲೀಸ ಇಲಾಖೆಯು ಭದ್ರತೆಯ ದೃಷ್ಟಿಯಿಂದ ಈ ಮಾರ್ಗವನ್ನು ರದ್ದುಗೊಳಿಸಿ ಹೊಸ ಮಾರ್ಗವನ್ನು ನಿಗದಿಪಡಿಸಿತ್ತು.

ಈ ವರ್ಷವೂ ಪೊಲೀಸ್ ಇಲಾಖೆ ಹೊಸ ಮಾರ್ಗವನ್ನು ಅನುಸರಿಸಲು ಸೂಚಿಸಿತು; ಆದರೆ ಗಣೇಶ ಮಂಡಳಿಯ ಸದಸ್ಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. “ಪ್ರತಿವರ್ಷದಂತೆ ಈ ವರ್ಷವೂ ನಾವು ಅದೇ ಹಿಂದಿನ ಮಾರ್ಗದಿಂದಲೇ ಹೋಗುತ್ತೇವೆ” ಎಂಬ ಮಂಡಳಿಯವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಹಿಂದೂ ಮಹಿಳೆಯರೂ ಪೊಲೀಸರ ಎದುರು ತಮ್ಮ ಅಭಿಪ್ರಾಯವನ್ನು ಧೈರ್ಯವಾಗಿ ಮಂಡಿಸಿದರು.

ಹಿಂದುಗಳಿಂದ ಶ್ರೀ ಗಣೇಶನ ಕಣ್ಣುಗಳ ಮೇಲೆ ಕಪ್ಪು ಬಟ್ಟೆ ಹಾಕಿ ಪ್ರತಿಭಟನೆ!

ಪೋಲೀಸರ ನಿರ್ಧಾರವನ್ನು ಬದಲಾಯಿಸಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದಾಗ, ಸ್ಥಳೀಯ ಹಿಂದೂಗಳು ಹಾಗೂ ಗಣೇಶ ಮಂಡಳಿಯ ಸದಸ್ಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಶ್ರೀ ಗಣೇಶಮೂರ್ತಿಗೆ ಕಪ್ಪು ಬಟ್ಟೆ ಹಾಕಿ ಪ್ರತಿಭಟನೆ ನಡೆಸಿದರು. “ಪೋಲೀಸರು ಹಿಂದಿನ ಮಾರ್ಗಕ್ಕೆ ಅನುಮತಿ ನೀಡದಿದ್ದರೆ ನಾವು ಮೆರವಣಿಗೆಯನ್ನು ಮುಂದುವರಿಸಲಿರುವುದಿಲ್ಲ. ನಾವು ಮದಿನಾ ಆಟೋ ಸ್ಟ್ಯಾಂಡ್ ಮತ್ತು ಹಂಸಬಾವಿ ಸರ್ಕಲ್ ಮಾರ್ಗವನ್ನೇ ಬೇಕೆಂದು ಆಗ್ರಹಿಸುತ್ತೇವೆ,” ಎಂಬುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

  • ಇಂದು ದೇಶದ ಕೇವಲ ಕೆಲವು ಭಾಗಗಳು ಮುಸ್ಲಿಮ್ ಬಹುಸಂಖ್ಯಾತವಾಗಿರುವಾಗಲೇ ಹಿಂದುಗಳಿಗೆ ಮೆರವಣೀಗೆ ತೆಗೆಯುವುದಕ್ಕೆ ನಿಷೇಧ ವಿಧಿಸಲಾಗುತ್ತಿದೆ; ಭವಿಷ್ಯದಲ್ಲಿ ದೇಶವೇ ಮುಸ್ಲಿಮ್ ಬಹುಸಂಖ್ಯಾತವಾದರೆ ಹಿಂದುಗಳಿಗೆ ಭಾರತದಲ್ಲೇ ಇರಲು ನಿಷೇಧ ವಿಧಿಸಲಾಗಬಹುದು. ಈ ರೀತಿಯಾಗಬಾರದೆಂದು ಇದ್ದರೆ ಹಿಂದೂ ರಾಷ್ಟ್ರ ಅನಿವಾರ್ಯ!
  • ಕರ್ನಾಟಕ ರಾಜ್ಯ ಜಾತ್ಯಾತೀತವೆಂದು ಕರ್ನಾಟಕ ಉಚ್ಚನ್ಯಾಯಾಲಯವು ಸ್ಪಷ್ಟಪಡಿಸಿದ್ದರೂ, ಕೇವಲ ಮಾರ್ಗದಲ್ಲಿ ಕಲ್ಲು ತೂರಾಟ ಸಂಭವಿಸಿತು ಎಂದು ಮೆರವಣಿಗೆಯ ಮಾರ್ಗವನ್ನು ಬದಲಾಯಿಸುವುದು ಜಾತ್ಯಾತೀತತೆಯ ಅಪಹಾಸ್ಯವಾಗಿದೆ. ಇದು ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳಲು ಅಸಫಲರು ಎಂಬುದನ್ನೂ ತೋರಿಸುತ್ತದೆ!
  • ಈ ರೀತಿಯ ನಿಷೇಧ ಹೇರಲು ದಾವಣಗೆರೆ ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿಯೇ? ಎಂದು ಪ್ರಶ್ನೆಯೇಳುತ್ತದೆ. ಭಾರತದಲ್ಲಿ ನಿರ್ಮಾಣವಾಗಿರುವ ಇಂತಹ ಅನೇಕ ಸ್ಥಳಗಳಲ್ಲಿ ಹಿಂದುಗಳಿಗೆ ತಮ್ಮ ಹಬ್ಬಗಳನ್ನೇ ಆಚರಿಸಲು ಅವಕಾಶವಿಲ್ಲದಿದ್ದರೆ, ಇದು ಸರಕಾರ ಮತ್ತು ಹಿಂದೂಗಳಿಗೆ ನಾಚಿಕೆಗೇಡು ಎಂದು ಹೇಳಬೇಕಾಗುವುದು!