|

ದಾವಣಗೆರೆ – ಇಲ್ಲಿನ ಶ್ರೀ ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆಯ ಮಾರ್ಗ ಬದಲಾವಣೆಗೆ ಸಂಬಂಧಿಸಿದಂತೆ ಭಾರಿ ವಿವಾದ ನಿರ್ಮಾಣವಾಗಿದೆ. ಈ ಹಿಂದಿನ ನಿಗದಿತ ಮಾರ್ಗವನ್ನೇ ಬಳಸಲು ಅವಕಾಶ ನೀಡಬೇಕೆಂಬ ಆಗ್ರಹ ಸ್ಥಳೀಯರು ಮತ್ತು ಗಣೇಶ ಮಂಡಳದ ಯುವಕರು ಮುಂದಿಟ್ಟಿದ್ದಾರೆ. ಈ ಕಾರಣದಿಂದ ಮೆರವಣಿಗೆಗೆ ತೆರಳಿದ ಮೂರ್ತಿಯನ್ನು ಮಧ್ಯ ರಸ್ತೆಯಲ್ಲಿಯೇ ನಿಲ್ಲಿಸಲಾಯಿತು. ಈ ಮೆರವಣಿಗೆ 21 ದಿನಗಳ ಗಣೇಶೋತ್ಸವದ ನಂತರ ನಡೆಸಲಾಗುತ್ತಿತ್ತು.
ದಾವಣಗೆರೆಯ ಬಸವರಾಜ ಪೇಟೆಯಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ಗಣೇಶಮೂರ್ತಿಯನ್ನು ವಿಸರ್ಜನೆಗೆ ಕೊಂಡೊಯ್ಯುವಾಗ ಈ ವಿವಾದ ಉಂಟಾಯಿತು. ಈ ಹಿಂದೆಯೂ ಮೆರವಣಿ ‘ಮದಿನಾ ಆಟೋ ಸ್ಟ್ಯಾಂಡ್’ ಮತ್ತು ‘ಹಂಸಬಾವಿ ಸರ್ಕಲ್’ ಎಂಬ ಮುಸಲ್ಮಾನ ಬಾಹುಳ್ಯವಿರುವ ಪ್ರದೇಶಗಳ ಮೂಲಕ ಸಾಗುತ್ತಿತ್ತು; ಆದರೆ 2 ವರ್ಷಗಳ ಹಿಂದೆ ಇದೇ ಮಾರ್ಗದಲ್ಲಿ ಕಲ್ಲು ತೂರಾಟ ಸಂಭವಿಸಿದ್ದರಿಂದ, ಪೊಲೀಸ ಇಲಾಖೆಯು ಭದ್ರತೆಯ ದೃಷ್ಟಿಯಿಂದ ಈ ಮಾರ್ಗವನ್ನು ರದ್ದುಗೊಳಿಸಿ ಹೊಸ ಮಾರ್ಗವನ್ನು ನಿಗದಿಪಡಿಸಿತ್ತು.
ಈ ವರ್ಷವೂ ಪೊಲೀಸ್ ಇಲಾಖೆ ಹೊಸ ಮಾರ್ಗವನ್ನು ಅನುಸರಿಸಲು ಸೂಚಿಸಿತು; ಆದರೆ ಗಣೇಶ ಮಂಡಳಿಯ ಸದಸ್ಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. “ಪ್ರತಿವರ್ಷದಂತೆ ಈ ವರ್ಷವೂ ನಾವು ಅದೇ ಹಿಂದಿನ ಮಾರ್ಗದಿಂದಲೇ ಹೋಗುತ್ತೇವೆ” ಎಂಬ ಮಂಡಳಿಯವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಹಿಂದೂ ಮಹಿಳೆಯರೂ ಪೊಲೀಸರ ಎದುರು ತಮ್ಮ ಅಭಿಪ್ರಾಯವನ್ನು ಧೈರ್ಯವಾಗಿ ಮಂಡಿಸಿದರು.
ಹಿಂದುಗಳಿಂದ ಶ್ರೀ ಗಣೇಶನ ಕಣ್ಣುಗಳ ಮೇಲೆ ಕಪ್ಪು ಬಟ್ಟೆ ಹಾಕಿ ಪ್ರತಿಭಟನೆ!
ಪೋಲೀಸರ ನಿರ್ಧಾರವನ್ನು ಬದಲಾಯಿಸಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದಾಗ, ಸ್ಥಳೀಯ ಹಿಂದೂಗಳು ಹಾಗೂ ಗಣೇಶ ಮಂಡಳಿಯ ಸದಸ್ಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಶ್ರೀ ಗಣೇಶಮೂರ್ತಿಗೆ ಕಪ್ಪು ಬಟ್ಟೆ ಹಾಕಿ ಪ್ರತಿಭಟನೆ ನಡೆಸಿದರು. “ಪೋಲೀಸರು ಹಿಂದಿನ ಮಾರ್ಗಕ್ಕೆ ಅನುಮತಿ ನೀಡದಿದ್ದರೆ ನಾವು ಮೆರವಣಿಗೆಯನ್ನು ಮುಂದುವರಿಸಲಿರುವುದಿಲ್ಲ. ನಾವು ಮದಿನಾ ಆಟೋ ಸ್ಟ್ಯಾಂಡ್ ಮತ್ತು ಹಂಸಬಾವಿ ಸರ್ಕಲ್ ಮಾರ್ಗವನ್ನೇ ಬೇಕೆಂದು ಆಗ್ರಹಿಸುತ್ತೇವೆ,” ಎಂಬುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ