ಭಾಷಣಗಳಿಂದ ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂದು ಆಡಳಿತಕ್ಕೆ ಭಯ

ಮಂಗಳೂರು – ಹಾವೇರಿ ನಗರದಲ್ಲಿರುವ ಹುಕ್ಕೆರಿ ಮಠದ ಆವರಣದಲ್ಲಿ ಸಪ್ಟೆಂಬರ್ ೮ ರಿಂದ ೧೪ ರವರೆಗೆ ಒಂದು ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಪೂರ್ವ ತಯಾರಿಗಳನ್ನು ಪರಿಶೀಲಿಸಲು ಸಪ್ಟೆಂಬರ್ ೧ ರಂದು ಮತ್ತು ಸಪ್ಟೆಂಬರ್ ೧೪ ರಂದು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಶ್ರೀ. ಪ್ರಮೋದ್ ಮುತಾಲಿಕ್ ಅವರು ಆಗಮಿಸಬೇಕಿತ್ತು. ಆದರೆ, ‘ಗೌರಿ-ಗಣೇಶ’ ಮತ್ತು ‘ಈದ್-ಎ-ಮಿಲಾದ್’ ಹಬ್ಬಗಳು ಹತ್ತಿರದಲ್ಲಿರುವುದರಿಂದ ಹಾಗೂ ಮುತಾಲಿಕ್ ಅವರ ಭಾಷಣದಿಂದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂಬ ಕಾರಣ ನೀಡಿ, ಅವರನ್ನು ಹಾವೇರಿ ಜಿಲ್ಲೆಗೆ ನಿರ್ಬಂಧಿಸಲಾಗಿದೆ.
![]() |
![]() |
ಧಾರ್ಮಿಕ ಸಾಮರಸ್ಯ ಮತ್ತು ಸಾರ್ವಜನಿಕ ಆಸ್ತಿಯ ರಕ್ಷಣೆಯ ದೃಷ್ಟಿಯಿಂದ, ಆಗಸ್ಟ್ ೩೧ ರಿಂದ ಸಪ್ಟೆಂಬರ್ ೨೬ ರವರೆಗೆ ೨೭ ದಿನಗಳ ಕಾಲ ಮುತಾಲಿಕ್ ಅವರಿಗೆ ಹಾವೇರಿ ಜಿಲ್ಲೆಗೆ ಪ್ರವೇಶಿಸದಂತೆ ತಡೆಯಲಾಗಿದೆ.
ನನ್ನ ಕಂಡರೆ ರಾಜ್ಯ ಸರಕಾರಕ್ಕೆ ಏಕೆ ಇಷ್ಟು ಭಯ ? – ಪ್ರಮೋದ್ ಮುತಾಲಿಕ್
ಶ್ರೀ ರಾಮಸೇನೆಯ ಅಭ್ಯಾಸ ವರ್ಗದ ನಿಮಿತ್ತ ನಾನು ಹಾವೇರಿ ಜಿಲ್ಲೆಗೆ ಬೇಟಿ ಕೊಡಬೇಕಿತ್ತು ಆದರೆ ನಮ್ಮ ಹಿಂದೂವಿರೋಧಿ ಸರ್ಕಾರ ನಮ್ಮನ್ನು ಒಂದು ತಿಂಗಳುಗಳ ಕಾಲ ಹಾವೇರಿ ಜಿಲ್ಲೆಗೆ ನಿಷೇಧ ಮಾಡಿದೆ. ರಾಜ್ಯಸರ್ಕಾರಕ್ಕೆ ಯಾಕೆ ನಮ್ಮನ್ನು ಕಂಡರೆ ಅಷ್ಟೊಂದು ಭಯ.ಇದುನನಗೆ ಅರ್ಥವಾಗುತ್ತಿಲ್ಲ .ಈ ನಿಷೇಧವನ್ನು ನಾನು ಕಾನೂನು ಮೂಲಕ ಪ್ರಶ್ನಿಸುತ್ತೇನೆ. pic.twitter.com/0nTvbWQ4BF
— Pramod Mutalik Official (@PramodMuta39880) September 1, 2025
ಈ ಕುರಿತು ಮಾತನಾಡಿದ ಶ್ರೀ. ಮುತಾಲಿಕ್, ಶ್ರೀರಾಮ ಸೇನೆಯ ಕಾರ್ಯಾಗಾರದ ನಿಮಿತ್ತ ನಾನು ಹಾವೇರಿ ಜಿಲ್ಲೆಗೆ ಭೇಟಿ ನೀಡಬೇಕಿತ್ತು. ಆದರೆ, ರಾಜ್ಯದ ಹಿಂದೂ ವಿರೋಧಿ ಸರಕಾರವು ನನಗೆ ಒಂದು ತಿಂಗಳ ಕಾಲ ಹಾವೇರಿ ಜಿಲ್ಲೆಗೆ ಪ್ರವೇಶ ನಿಷೇಧಿಸಿದೆ. ರಾಜ್ಯ ಸರಕಾರಕ್ಕೆ ನನ್ನ ಕಂಡರೆ ಏಕೆ ಇಷ್ಟು ಭಯ ಎಂದು ನನಗೆ ಅರ್ಥವಾಗುತ್ತಿಲ್ಲ. ಈ ನಿಷೇಧವನ್ನು ನಾನು ಕಾನೂನು ಮೂಲಕ ಪ್ರಶ್ನಿಸುತ್ತೇನೆ ಎಂದು ಹೇಳಿದರು.
ಸಂಪಾದಕೀಯ ನಿಲುವು
|


ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !