
ದ್ವಾಪರಯುಗದಲ್ಲಿ ಗೋಕುಲದ ಜನತೆ ಇಂದ್ರನಿಗೆ ಯಜ್ಞದ ಹವಿರ್ಭಾಗ ಅರ್ಪಿಸುತ್ತಿದ್ದರು. ಇದರಿಂದ ಇಂದ್ರನ ಅಹಂಕಾರ ಹೆಚ್ಚಾಯಿತು. ಆಗ ಶ್ರೀಕೃಷ್ಣನು ಗೋಪಗೋಪಿಯರಿಗೆ, ”ಇಂದ್ರದೇವನಿಗೆ ಯಜ್ಞದ ಹವಿರ್ಭಾಗ ನೀಡಬೇಡಿ’’ ಎಂದು ಹೇಳಿದರು. ಶ್ರೀಕೃಷ್ಣನು ಇಂದ್ರನ ಬದಲು ಗೋವುಗಳಿಗೆ ಹುಲ್ಲನ್ನು ನೀಡುವ ಗೋವರ್ಧನ ಪರ್ವತದ ಪೂಜೆ ಮಾಡುವಂತೆ ತಿಳಿಸಿದನು. ಇದರಿಂದ ಯಾರೂ ಇಂದ್ರದೇವನಿಗೆ ಹವಿರ್ಭಾಗ ನೀಡಲಿಲ್ಲ. ಇದರಿಂದ ಇಂದ್ರನಿಗೆ ಕೋಪಬಂದಿತು. ಇಂದ್ರನು ಭಾರಿ ಮಳೆಯ ಮೂಲಕ ಗೋಪಾಲಕರನ್ನು ಹಿಂಸಿಸಲು ಆರಂಭಿಸಿದನು. ಆಗ ಎಲ್ಲ ಗೋಪಗೋಪಿಯರು ಶ್ರೀಕೃಷ್ಣನಿಗೆ ಶರಣಾಗಿ ಪ್ರಾರ್ಥನೆ ಮಾಡಿದರು. ಆಗ ಶ್ರೀಕೃಷ್ಣನು ಅವರನ್ನು ಗೋವರ್ಧನ ಪರ್ವತದ ಅಡಿಯಲ್ಲಿ ಕರೆದೊಯ್ದು ರಕ್ಷಿಸಿದನು. ಇಂತಹ ಈ ಗೋವರ್ಧನ ಪರ್ವತದ ಪೂಜೆ ಇಂದಿಗೂ ನಡೆಯುತ್ತದೆ. (ಆಧಾರ : ದೈನಿಕ ‘ಸನಾತನ ಪ್ರಭಾತ’)
ಈಶ್ವರೀ ಯೋಜನೆಯಂತೆ ಭಾರತದಲ್ಲಿ ‘ಹಿಂದೂ ರಾಷ್ಟ್ರ’ ಸ್ಥಾಪನೆಯಾಗಲಿದೆ. ಸಂತರು ಮತ್ತು ದಾರ್ಶನಿಕರಿಗೂ ಇದರ ಸೆಳೆತವಿದೆ. ಭಗವಾನ್ ಶ್ರೀಕೃಷ್ಣನು ಗೋವರ್ಧನ ಪರ್ವತವನ್ನು ಎತ್ತಿದಾಗ ಗೋಪ-ಗೋಪಿಯರು ತಮ್ಮ ಕರ್ತವ್ಯವೆಂದು ತಮ್ಮ ಕೋಲುಗಳನ್ನು ಗೋವರ್ಧನ ಪರ್ವತಕ್ಕೆ ತಾಗಿಸಿದಂತೆ ನಾವೂ ಹಿಂದೂ ರಾಷ್ಟ್ರ ಸ್ಥಾಪನೆಯ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ. ಹಿಂದೂ ರಾಷ್ಟ್ರ ಸ್ಥಾಪಿಸಲು ದೇವರಿಗೆ ನಮ್ಮ ಅಗತ್ಯವಿಲ್ಲ; ಆದರೆ ನಮಗೆ ದೇವರ ಅಗತ್ಯವಿದೆ. ನಾವು ಸಾಧನೆಯ ಭಾಗವಾಗಿ ಹಿಂದೂ ರಾಷ್ಟ್ರಕ್ಕಾಗಿ ಕಾರ್ಯ ಮಾಡಿದರೆ, ಹಿಂದೂ ರಾಷ್ಟ್ರ ಸ್ಥಾಪನೆಯ ಜೊತೆಗೆ ನಮ್ಮ ಆತ್ಮೋದ್ಧಾರವೂ ಆಗುತ್ತದೆ. (ಆಧಾರ : ಸನಾತನ ಪ್ರಕಾಶನದ ಗ್ರಂಥ ‘ಹಿಂದೂ ರಾಷ್ಟ್ರ ಸ್ಥಾಪನೆಯ ದಿಶೆ’)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !