
ಮುಂಬಯಿ – ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿ ಶೇ. ೩೫ ರಷ್ಟು ಮುಸ್ಲಿಮರಿದ್ದರು, ಅವರ ೧೧ ಅಂಗರಕ್ಷಕರು ಮುಸ್ಲಿಮರಾಗಿದ್ದರು ಮತ್ತು ಛತ್ರಪತಿ ಶಿವಾಜಿ ಮಹಾರಾಜರು ಅವರಿಗಾಗಿ ರಾಯಗಡದಲ್ಲಿ ಮಸೀದಿ ಕಟ್ಟಿಸಿದ್ದರು ಎಂಬಂತಹ ಕಪೋಲಕಲ್ಪಿತ ಇತಿಹಾಸವನ್ನು ‘ಖಾಲಿದ್ ಕಾ ಶಿವಾಜಿ’ ಚಲನ ಚಿತ್ರದಲ್ಲಿ ತೋರಿಸಲಾಗಿದೆ. ಇಂತಹ ಕಪೋಲಕಲ್ಪಿತ ಚಲನ ಚಿತ್ರದ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಈ ಚಲನ ಚಿತ್ರದ ನಿಜ ಸ್ವರೂಪವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸ್ತುತಪಡಿಸಿದ ‘ಸಕಲ ಹಿಂದೂ ಸಮಾಜ ಗ್ರೂಪ್ ೧’ ವಾಟ್ಸಾಪ್ ಗುಂಪಿನ ನಿರ್ವಾಹಕರಾದ ಶ್ರೀ. ಪ್ರಮೋದ ಕಾಟೆ ಅವರಿಗೆ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.
Bhandup Police Station has sent a notice to #Hindutva Karyakartas for posting a protest on social media against the film “Khalid Ka Shivaji”, which spreads false history and seeks to divide the minds of Hindus.@MumbaiPolice have completely surrendered to #Jihadi forces!… pic.twitter.com/hEzYFgKXaF
— Sakal Hindu Samaj (@sakal_hindu_) August 3, 2025
ಸಾಮಾಜಿಕ ಮಾಧ್ಯಮಗಳಲ್ಲಿ ಈ ರೀತಿಯ ಸಂದೇಶಗಳನ್ನು ಕಳುಹಿಸಿದರೆ ದೂರು ದಾಖಲಿಸುವುದಾಗಿ ಪೊಲೀಸರು ಈ ನೋಟಿಸ್ನಲ್ಲಿ ಎಚ್ಚರಿಕೆ ನೀಡಿದ್ದಾರೆ. ಆಗಸ್ಟ್ ೨ ರಂದು ಭಾಂಡೂಪ ಪೊಲೀಸ್ ಠಾಣೆಯಿಂದ ಶ್ರೀ. ಪ್ರಮೋದ ಕಾಟೆ ಅವರಿಗೆ ಈ ನೋಟಿಸ್ ಕಳುಹಿಸಲಾಗಿದೆ.
Devout Hindu served Police notice for exposing the truth behind ‘Khalid Ka Shivaji’, a film that paints Chhatrapati Shivaji Maharaj as a Mu$l!m sympathizer!
WhatsApp group admin sent legal notice for a post calling out the film’s false historical claims.
🔹 Police who crack… pic.twitter.com/R1taHdLXp6
— Sanatan Prabhat (@SanatanPrabhat) August 4, 2025
ಮಿಚೆಲ ಥೇವರ್ ಅವರು ‘ಖಾಲಿದ್ ಕಾ ಶಿವಾಜಿ’ ಚಲನ ಚಿತ್ರವನ್ನು ನಿರ್ಮಿಸಿದ್ದು, ರಾಜ್ ಮೋರೆ ಅವರು ನಿರ್ದೇಶಿಸಿದ್ದಾರೆ. ‘ಶಿವಾಜಿ ಅಂಡರ್ ಗ್ರೌಂಡ್ ಇನ್ ಭೀಮನಗರ್ ಮೊಹಲ್ಲಾ’ ಎಂಬ ಆಕ್ಷೇಪಾರ್ಹ ನಾಟಕವನ್ನು ಆಧರಿಸಿ ಈ ಚಲನ ಚಿತ್ರವನ್ನು ನಿರ್ಮಿಸಲಾಗಿದೆ. ಗೋವಾದಲ್ಲಿ ನಡೆದ ಐಎಫ್ಎಫ್ಐ (‘ಇಂಡಿಯನ್ ಪ್ಯಾನ್ರಮಾ ಎನ್ಡಿಎಫ್ಸಿ ಫಿಲ್ಮ್ ಫೆಸ್ಟಿವಲ್’) ಮತ್ತು ಅಜಂತಾ-ಎಲ್ಲೋರಾ ಅಂತರರಾಷ್ಟ್ರೀಯ ಚಲನಚಲನ ಚಿತ್ರೋತ್ಸವ ೨೦೨೪ ರಲ್ಲಿ ಈ ಚಲನ ಚಿತ್ರಕ್ಕೆ ನಾಮನಿರ್ದೇಶನ ಲಭಿಸಿದೆ. ಫ್ರಾನ್ಸ್ನಲ್ಲಿ ನಡೆಯಲಿರುವ ‘ಕಾನ್’ ಚಲನಚಲನ ಚಿತ್ರೋತ್ಸವಕ್ಕೂ ಈ ಚಲನ ಚಿತ್ರವನ್ನು ಆಯ್ಕೆ ಮಾಡಲಾಗಿದೆ.
‘ಖಾಲಿದ್ ಕಾ ಶಿವಾಜಿ’ ಚಲನ ಚಿತ್ರದ ಬಗ್ಗೆ ಹಿಂದೂ ಮಹಾಸಂಘದಿಂದ ‘ಸೆನ್ಸಾರ್ ಮಂಡಳಿ’ಗೆ ನೋಟಿಸ್!ಯಾವುದೇ ಪರಿಸ್ಥಿತಿಯಲ್ಲಿ ಚಲನ ಚಿತ್ರವನ್ನು ಪ್ರದರ್ಶಿಸಲು ಬಿಡುವುದಿಲ್ಲ! – ಹಿಂದೂ ಮಹಾಸಂಘ
ಮುಂಬಯಿ – ಛತ್ರಪತಿ ಶಿವಾಜಿ ಮಹಾರಾಜರ ಕುರಿತ ಸುಳ್ಳು ಇತಿಹಾಸ ಇರುವ ‘ಖಾಲಿದ್ ಕಾ ಶಿವಾಜಿ’ ಚಲನ ಚಿತ್ರವನ್ನು ಯಾವುದೇ ಪರಿಸ್ಥಿತಿಯಲ್ಲಿ ಪ್ರದರ್ಶಿಸಲು ನಾವು ಬಿಡುವುದಿಲ್ಲ ಎಂದು ಹಿಂದೂ ಮಹಾಸಂಘ ಎಚ್ಚರಿಕೆ ನೀಡಿದೆ. ಈ ಕುರಿತು ಹಿಂದೂ ಮಹಾಸಂಘವು ಚಲನಚಲನ ಚಿತ್ರ ಪ್ರಮಾಣೀಕರಣ ಮಂಡಳಿಗೆ (ಸೆನ್ಸಾರ್ ಬೋರ್ಡ್) ಕಾನೂನು ನೋಟಿಸ್ ಕಳುಹಿಸಿದೆ.
ಇದು ಇತಿಹಾಸವನ್ನು ತಿರುಚುವ ಪ್ರಯತ್ನವಾಗಿದೆ. ಈ ಚಲನ ಚಿತ್ರದ ಪ್ರದರ್ಶನಕ್ಕೆ ಅನುಮತಿ ನೀಡಿದರೆ, ಉಂಟಾಗುವ ಪರಿಣಾಮಗಳಿಗೆ ಚಲನಚಲನ ಚಿತ್ರ ಪ್ರಮಾಣೀಕರಣ ಮಂಡಳಿ ಜವಾಬ್ದಾರವಾಗಿರುತ್ತದೆ ಎಂದು ಹಿಂದೂ ಮಹಾಸಂಘ ನೋಟಿಸ್ನಲ್ಲಿ ಎಚ್ಚರಿಕೆ ನೀಡಿದೆ. ಹಿಂದೂ ಮಹಾಸಂಘವು ಚಲನಚಲನ ಚಿತ್ರ ಪ್ರಮಾಣೀಕರಣ ಮಂಡಳಿಗೆ ಕಳುಹಿಸಿದ ಪತ್ರದ ಪ್ರತಿಯನ್ನು ಗೃಹ ಸಚಿವ ದೇವೇಂದ್ರ ಫಡ್ನವೀಸ್ ಅವರಿಗೂ ಕಳುಹಿಸಿದೆ.
|
ಸಂಪಾದಕೀಯ ನಿಲುವು
|


ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !