ಮಾಲೇಗಾಂವ್ ಬಾಂಬ್ ಸ್ಫೋಟ 2008 ಪ್ರಕರಣದ ಕುರಿತು ಹಿಂದೂತ್ವವಾದಿಗಳ ಪ್ರತಿಕ್ರಿಯೆಗಳು

ಸತ್ಯಕ್ಕೆ ಜಯ, ಕಾಂಗ್ರೆಸ್‌ನ ಕುತಂತ್ರ ವಿಫಲ! – ಮೇಧಾ ಕುಲಕರ್ಣಿ, ಸಂಸದೆ, ಭಾಜಪ

ಇದು ಕೇವಲ ಸಾಧ್ವಿ ಪ್ರಜ್ಞಾ ಸಿಂಗ್ ಅಥವಾ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಅವರ ಗೆಲುವಲ್ಲ, ಇದು ‘ಸತ್ಯ’ದ ಗೆಲುವು ಆಗಿದೆ. ಕಾಂಗ್ರೆಸ್‌ನ ‘ಹಿಂದೂ ಭಯೋತ್ಪಾದನೆ’ ಎಂಬ ಸುಳ್ಳು ಆರೋಪಗಳ ವಿರುದ್ಧ ಹಲವು ವರ್ಷಗಳಿಂದ ಹೋರಾಡುತ್ತಿರುವ ಸತ್ಯವಿದು. ಮತ ರಾಜಕಾರಣಕ್ಕಾಗಿ, ಕಾಂಗ್ರೆಸ್ ‘ಹಿಂದೂ ಭಯೋತ್ಪಾದನೆ’ ಎಂಬ ಪದವನ್ನು ಬಳಸಿ ದೇಶದ ಬಹುಸಂಖ್ಯಾತ ಶಾಂತಿಪ್ರಿಯ ಹಿಂದೂ ಸಮಾಜವನ್ನು ಮಾನಸಿಕವಾಗಿ ಕುಗ್ಗಿಸುವ ಕುತಂತ್ರವನ್ನು ಹೆಣೆದಿತ್ತು; ಆದರೆ ‘ಸತ್ಯವು ತೊಂದರೆಗೊಳಗಾಗಬಹುದು; ಆದರೆ ಸೋಲಲು ಸಾಧ್ಯವಿಲ್ಲ’ ಎಂಬ ವಿಚಾರದಂತೆ ಅಂತಿಮವಾಗಿ ಸತ್ಯಕ್ಕೆ ಜಯ ಸಿಕ್ಕಿತು ಮತ್ತು ಕಾಂಗ್ರೆಸ್‌ನ ಕುತಂತ್ರ ವಿಫಲಗೊಂಡಿತು. ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಮತ್ತು ಇತರ ಆರೋಪಿಗಳು ಸೇರಿದಂತೆ ಈ ಪ್ರಕರಣದಲ್ಲಿ ಸತ್ಯಕ್ಕಾಗಿ ಹೋರಾಡಿದ ಎಲ್ಲರಿಗೂ ಅಭಿನಂದನೆಗಳು. ಭಾರತ್ ಮಾತಾ ಕಿ ಜೈ!

ಕಾಂಗ್ರೆಸ್‌ನ ಷಡ್ಯಂತ್ರದ ವೈಫಲ್ಯ! – ದುರ್ಗೇಶ ಜಯವಂತ ಪರುಳ್ಕರ್, ಲೇಖಕರು ಮತ್ತು ಹಿಂದುತ್ವನಿಷ್ಠ ವ್ಯಾಖ್ಯಾನಕಾರರು

ಮಾಲೇಗಾಂವ್ ಪ್ರಕರಣದಲ್ಲಿ ಯಾವುದೇ ಪುರಾವೆಗಳಿಲ್ಲದೆ ಎಲ್ಲಾ ಆರೋಪಿಗಳ ಜೀವನವನ್ನು ಹಾಳುಮಾಡಲಾಯಿತು. ಈ ಕೃತ್ಯ ಎಸಗಿದವರಿಗೆ ಶಿಕ್ಷೆಯಾಗುತ್ತದೆಯೇ? ಕಾಂಗ್ರೆಸ್ ಅಸ್ತಿತ್ವದಲ್ಲಿ ಇಲ್ಲದ ‘ಕೇಸರಿ ಭಯೋತ್ಪಾದನೆ’ ಇದೆ ಎಂದು ಜಗತ್ತಿಗೆ ಸಾರಿ ಹೇಳಿತು. ಈಗ ಎಲ್ಲಾ ಹಿಂದೂಗಳು ಕನಿಷ್ಠ ಯಾವುದೇ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಬಾರದು ಎಂದು ನಿರ್ಧರಿಸಬೇಕು. ಹಿಂದೂ ಸಮಾಜವನ್ನು ಅಪಖ್ಯಾತಿಗೊಳಿಸುವ ಕಾಂಗ್ರೆಸ್ ಪ್ರಯತ್ನವು ಒಂದು ಷಡ್ಯಂತ್ರವಾಗಿದೆ. ನಿರಪರಾಧಿ ಸಮಾಜದ ಬಗ್ಗೆ ದೇಶದಲ್ಲಿ ದ್ವೇಷವನ್ನು ಸೃಷ್ಟಿಸಲಾಯಿತು, ದ್ವೇಷವನ್ನು ಹರಡಲಾಯಿತು; ಆದ್ದರಿಂದ ಕಾಂಗ್ರೆಸ್ ಮೇಲೆ ಮತ್ತು ಈ ದುಷ್ಕೃತ್ಯ ಎಸಗಿದ ಕಾಂಗ್ರೆಸ್ ನಾಯಕರ ಮೇಲೆ ಶಾಶ್ವತ ನಿಷೇಧ ಹೇರಬೇಕು ಎಂದು ಹಿಂದೂಗಳು ಬೇಡಿಕೆ ಇಡಬೇಕು.

ಹಿಂದುತ್ವನಿಷ್ಠರನ್ನು ಭಯೋತ್ಪಾದನೆಯ ಪಂಜರದಲ್ಲಿ ನಿಲ್ಲಿಸಲು ಪ್ರಯತ್ನಿಸಿದವರ ಬಂಡವಾಳವನ್ನು ನ್ಯಾಯಾಲಯ ಬಯಲು ಮಾಡಿದೆ! – ಸಚ್ಚಿದಾನಂದ ಶೇವಡೆ, ಪ್ರಖರ ಹಿಂದುತ್ವನಿಷ್ಠ, ಲೇಖಕರು ಮತ್ತು ವ್ಯಾಖ್ಯಾನಕಾರರು

ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ನ್ಯಾಯಾಲಯದ ಇಂದಿನ ನಿರ್ಧಾರ ಸಂತೋಷ ತಂದಿದೆ. ಕೆಲವರು ‘ಹಿಂದೂ ಭಯೋತ್ಪಾದನೆ’ಯನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದರು. ಅದಕ್ಕಾಗಿ ಹಿಂದುತ್ವನಿಷ್ಠರನ್ನು ಉದ್ದೇಶಪೂರ್ವಕವಾಗಿ ಭಯೋತ್ಪಾದನೆಯ ಪಂಜರದಲ್ಲಿ ನಿಲ್ಲಿಸಲು ಪ್ರಯತ್ನಿಸಿದವರ ಬಂಡವಾಳವನ್ನು ನ್ಯಾಯಾಲಯ ಬಯಲು ಮಾಡಿದೆ; ಆದರೆ, ಈ ಹಿಂದುತ್ವನಿಷ್ಠರ ಜೀವನದ ಅಮೂಲ್ಯ 17 ವರ್ಷಗಳ ನಷ್ಟವನ್ನು ಹೇಗೆ ತುಂಬಿಕೊಡಲಾಗುತ್ತದೆ?

ಪಾಪದ ಲೆಕ್ಕಾಚಾರವನ್ನು ಕಾಂಗ್ರೆಸ್ ನೀಡಲೇಬೇಕು! – ಅಭಿಜಿತ ಜೋಗ್, ಪ್ರಸಿದ್ಧ ಲೇಖಕರು, ಪುಣೆ

ಕೇಸರಿ ಭಯೋತ್ಪಾದನೆಯ ಸುಳ್ಳು ನಿರೂಪಣೆಯನ್ನು (ಸುಳ್ಳು ಕಥನ) ಸೃಷ್ಟಿಸಲು ಮುಂದಾಗಿದ್ದ ಚಿದಂಬರಂ, ಸುಶೀಲ್ ಕುಮಾರ್ ಶಿಂಧೆ ಅವರಂತಹ ಕಾಂಗ್ರೆಸ್ ಆಡಳಿತಗಾರರು ಮತ್ತು ಅವರ ಅಧೀನದಲ್ಲಿದ್ದ ಕೆಲವು ಪೊಲೀಸ್ ಅಧಿಕಾರಿಗಳು 2009ರಲ್ಲಿ ಮಾಲೇಗಾಂವ್ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಸಿಲುಕಿಸಿದ ಕರ್ನಲ್ ಪ್ರಸಾದ್ ಪುರೋಹಿತ್, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಇತರ 5 ಆರೋಪಿಗಳನ್ನು ನ್ಯಾಯಾಲಯ ನಿರಪರಾಧಿಗಳೆಂದು ಬಿಡುಗಡೆ ಮಾಡಿದೆ.

‘ಸತ್ಯ ತೊಂದರೆ ಅನುಭವಿಸಬಹುದು, ಆದರೆ ಸೋಲಲು ಸಾಧ್ಯವಿಲ್ಲ.’

ದೇಶಕ್ಕಾಗಿ ತಮ್ಮ ಜೀವವನ್ನು ಪಣಕ್ಕಿಟ್ಟು ಕಠಿಣ ಕೆಲಸ ಮಾಡಿದ ಕರ್ನಲ್ ಪುರೋಹಿತ್ ಅನುಭವಿಸಿದ ಹಿಂಸೆ, ಅವರ ಜೀವನದ ಅಮೂಲ್ಯವಾದ 17 ವರ್ಷಗಳನ್ನು ಆರೋಪಿಯೆಂದು ಅಪಖ್ಯಾತಿಯ ನೆರಳಿನಲ್ಲಿ ಕಳೆಯಬೇಕಾಯಿತು, ಇದರ ನಷ್ಟವನ್ನು ಯಾರು ಭರಿಸುತ್ತಾರೆ?

ರಾಷ್ಟ್ರಭಕ್ತರಿಗೆ ಕಾರಾಗೃಹ, ಮತ್ತು ಭಯೋತ್ಪಾದಕರಿಗೆ ಸ್ವಾಗತ – ಈ ಪಾಪದ ಲೆಕ್ಕಾಚಾರವನ್ನು ಕಾಂಗ್ರೆಸ್ ನೀಡಲೇಬೇಕು!