ಮೊಘಲರ ಕ್ರೌರ್ಯಕ್ಕೆ ಬೆಂಬಲಿಸಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಅವಮಾನ ಮಾಡಿದ ಹಿಂದೂದ್ವೇಷಿ ಪತ್ರಕರ್ತ ರಾಜದೀಪ್ ಸರ್ದೇಸಾಯಿ

  • ‘ಶಿವಾಜಿ ಮಹಾರಾಜರು ಬಂಗಾಳದ ಮೇಲೆ ಆಕ್ರಮಣ ಮಾಡಿದ್ದರಂತೆ!’

  • ಜನರ ಟೀಕೆಗಳ ನಂತರ ಕ್ಷಮೆ ಕೇಳದೆ, ‘ಬಂಗಾಳ ಅಲ್ಲ, ಸೂರತ್ ಮೇಲೆ ಆಕ್ರಮಣ ಮಾಡಿದ್ದರು’ ಎಂದು ತಿದ್ದುಪಡಿ !

ನವದೆಹಲಿ – ಖ್ಯಾತ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಇತ್ತೀಚೆಗೆ ತಮ್ಮ ಒಂದು ಪೋಸ್ಟ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಬಂಗಾಳದ ಮೇಲೆ ಆಕ್ರಮಣ ಮಾಡಿದ್ದರು ಎಂದು ಹೇಳಿದ್ದರು. ಕೇಂದ್ರ ಸರ್ಕಾರವು ಎನ್‌ಸಿಇಆರ್‌ಟಿ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ) ಪುಸ್ತಕಗಳಿಂದ ಮೊಘಲರ ಕ್ರೌರ್ಯದ ವಾಸ್ತವವನ್ನು ತೋರಿಸಲು ನಿರ್ಧರಿಸಿದ ನಂತರ ಈ ಹೇಳಿಕೆ ಬಂದಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಸರ್ದೇಸಾಯಿ ಅವರು ಮೊಘಲರ ಪರವಾಗಿ ನಿಂತು ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಮೇಲಿನ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ‘ಡೆಮಾಕ್ರಟಿಕ್ ನ್ಯೂಸ್ ರೂಮ್’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಛತ್ರಪತಿ ಶಿವಾಜಿ ಮಹಾರಾಜರನ್ನು ‘ಡಾಕು’ ಎಂದು ಉಲ್ಲೇಖಿಸಿ, ಅವರ ಸೈನ್ಯವು ಬಂಗಾಳದ ಮೇಲೆ ಆಕ್ರಮಣ ಮಾಡಿ ಲೂಟಿ ಮಾಡಿತ್ತು ಎಂದು ಬಿಂಬಿಸಲು ಪ್ರಯತ್ನಿಸಿದರು. ಇದರ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ಅವರ ವಿರುದ್ಧ ತೀವ್ರ ಟೀಕೆಗಳು ಬಂದಾಗ, ಅವರು ಬಂಗಾಳ ಅಲ್ಲ, ಸೂರತ್ ಎಂದು ತಿದ್ದುಪಡಿ ಮಾಡುವ ಪೋಸ್ಟ್ ಅನ್ನು ಹಾಕಿ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು ಹಾಗೂ ಕ್ಷಮೆ ಯಾಚನೆ ಸಹ ಮಾಡಲಿಲ್ಲ.

ಸರದೇಸಾಯಿ ಅವರ ತಿದ್ದುಪಡಿ ಮಾಡಿದ ಪೋಸ್ಟ್‌ನಲ್ಲಿ, ‘ಛತ್ರಪತಿ ಶಿವಾಜಿ ಮಹಾರಾಜರು ಬಂಗಾಳದ ಮೇಲೆ ಅಲ್ಲ, ಸೂರತ್ ಮೇಲೆ ಆಕ್ರಮಣ ಮಾಡಿದ್ದರು. ಅದು ಮೊಘಲ್ ಸಾಮ್ರಾಜ್ಯದ ಮೇಲಿನ ಪ್ರಹಾರವಾಗಿತ್ತು’ ಎಂದು ಹೇಳಿದರು.

ಅಲ್ಲದೇ, ಶಿವಾಜಿ ಮಹಾರಾಜರನ್ನು ಆ ಯುಗದ ಅತ್ಯುತ್ತಮ ಆಡಳಿತಗಾರ ಎಂದು ಬಣ್ಣಿಸಿದರು ಮತ್ತು ಅವರ ಸೈನ್ಯದ ಕೌಶಲ್ಯ ಮತ್ತು ಜನ ಕಲ್ಯಾಣದ ನಿರ್ಧಾರಗಳನ್ನು ಸರ್ದೇಸಾಯಿ ಅವರು ಶ್ಲಾಘಿಸಿದರು.

ಸಂಪಾದಕೀಯ ನಿಲುವು

  • ಇಂತಹ ಹಿಂದೂದ್ವೇಷಿ ಪತ್ರಕರ್ತರು ನಿರಂತರವಾಗಿ ಹಿಂದೂಗಳನ್ನು ದುರ್ಬಲಗೊಳಿಸಲು ಮತ್ತು ಜಿಹಾದಿಗಳು, ಕಪಟ ಜಾತ್ಯತೀತವಾದಿಗಳು, ಮತಾಂಧರು ಇತ್ಯಾದಿಗಳನ್ನು ಸಮರ್ಥಿಸಲು ಪ್ರಯತ್ನಿಸುತ್ತಾರೆ. ಸರ್ಕಾರವು ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು!
  • ಬಂಗಾಳ ಅಥವಾ ಸೂರತ್ ಅನ್ನು ಛತ್ರಪತಿ ಶಿವಾಜಿ ಮಹಾರಾಜರು ಲೂಟಿ ಮಾಡಿದರು ಎಂದು ಹೇಗೆ ಹೇಳಲು ಸಾಧ್ಯ? ವಾಸ್ತವವಾಗಿ, ಮೊಘಲರು ಭಾರತ ಭೂಮಿಯನ್ನು ಲೂಟಿ ಮಾಡಿದ್ದರು. ಆದ್ದರಿಂದ, ಲೂಟಿ ಮಾಡಿದವರಿಂದ ಆ ಸಂಪತ್ತನ್ನು ಕಸಿದುಕೊಂಡು ಅದನ್ನು ಪ್ರಜೆಗಳಿಗಾಗಿ ಬಳಸುವುದು ಜನಹಿತವಾಗಿದೆ! ಸರ್ದೇಸಾಯಿ ಅವರಿಗೆ ಈ ವಿಷಯ ತಿಳಿದಿಲ್ಲ ಎಂದಲ್ಲ, ಅವರು ಉದ್ದೇಶಪೂರ್ವಕವಾಗಿಯೇ ಈ ವಿಷಯವನ್ನು ಮರೆಮಾಚುತ್ತಿದ್ದಾರೆ!