ಪರಾತ್ಪರ ಗುರು ಡಾಕ್ಟರರು ಒಂದು ವಾಕ್ಯದಲ್ಲಿ ‘ಸಾಧಕರ ಬಗ್ಗೆ ಕೃತಜ್ಞತೆ ಅನಿಸಬೇಕು’ ಎಂದು ಕಲಿಸುವುದು

‘ಹೇ ಪ್ರಭು, ಒಮ್ಮೆ ನಾನು ಸೇವೆಯ ನಿಮಿತ್ತ ರಾಮನಾಥಿ ಆಶ್ರಮಕ್ಕೆ ಬಂದಾಗ ನನಗೆ ನಿಮ್ಮ ದರ್ಶನವಾಯಿತು. ಆಗ ನೀವು ನನಗೆ ಏನು ಹೇಳಿದ್ದೀರಿ ಎಂದು ನೆನಪಿದೆಯೇ ! ‘ನಾನು ನಿಮ್ಮನ್ನು ಭೇಟಿ ಯಾಗದಿದ್ದರೆ ತುಂಬಾ ಅಸ್ವಸ್ಥನಾಗಿ ಹೋಗುತ್ತಿದ್ದೆ ಇಂದು ನಿಮ್ಮ ದರ್ಶನದಿಂದ ನನ್ನ ಮೇಲೆ ಕೃಪೆ ಯಾಯಿತು,’ ಎಂದು ಹೇಳಿದಿರಿ. ಭಗವಂತಾ, ನೀವು ನನ್ನನ್ನು ನಿಶಬ್ದಗೊಳಿಸಿದ್ದೀರಿ. ಕೆಲವೊಮ್ಮೆ ನಾನು ನಿಮ್ಮ ಈ ವಾಕ್ಯವನ್ನು ಸ್ಮರಿಸುತ್ತೇನೆ. ‘ಅದರಿಂದ ನೀವು ನನಗೆ ಏನು ಕಲಿಸಿದ್ದೀರಿ ?’ ಎಂಬುದನ್ನು ತಿಳಿದುಕೊಳ್ಳಲು ಕೆಲವು ತಿಂಗಳು ಅಭ್ಯಾಸ ಮತ್ತು ಚಿಂತನೆ ಮಾಡಿದೆ.
ಎಲ್ಲಿ ಸಾಕ್ಷಾತ್ ಪರಮೇಶ್ವರನಿಗೆ ನನ್ನಂತಹ ಸಾಮಾನ್ಯ ಸಾಧಕರ ಕೃಪೆಯಾಗಿದೆ ಎಂದು ಅನಿಸುತ್ತಿದ್ದರೆ ನನಗೆ ಸಾಧಕರನ್ನು ಭೇಟಿ ಮಾಡುವಾಗ, ಅವರಲ್ಲಿ ಮಾತನಾಡು ವಾಗ, ದೂರವಾಣಿಯಲ್ಲಿ ಅವರ ಧ್ವನಿಯನ್ನು ಕೇಳುವಾಗ, ಅವರ ಸತ್ಸಂಗ ದೊರೆತಾಗ ಅಥವಾ ಅವರ ವಿಚಾರ ಮಾಡಿದಾಗ ಏನನಿಸಬೇಕು ? ಸಾಧಕರು ನಿಮ್ಮ ಸಗುಣ ರೂಪವೇ ಆಗಿದ್ದಾರೆ; ಆದರೆ ನನ್ನಂತಹ ಅಜ್ಞಾನಿ ಜೀವಕ್ಕೆ ಅದು ಗಮನಕ್ಕೆ ಬರುವುದಿಲ್ಲ. ಈ ಪ್ರಸಂಗದಿಂದ ನೀವು ನನ್ನ ಸಂಪೂರ್ಣ ದೃಷ್ಟಿಕೋನವನ್ನು ಬದಲಾಯಿಸಿದ್ದೀರಿ. ಹೇ ಪ್ರಭು, ನೀವು ನನಗೆ ಅಧ್ಯಾತ್ಮದ ಒಂದು ಮಹತ್ವದ ಬೋಧನೆಯನ್ನು ಪ್ರಾಯೋಗಿಕ ಮತ್ತು ಆನಂದಮಯ ಪದ್ಧತಿಯನ್ನು ಕಲಿಸಿದಿರಿ. ನಮಗೆ ಅಧ್ಯಾತ್ಮವನ್ನು ಕಲಿಸಲು ಇಷ್ಟು ಪ್ರಾಯೋಗಿಕ ಮತ್ತು ಆನಂದಮಯ ಪದ್ಧತಿ ಹೇಗೆ ಹೊಳೆಯುತ್ತದೆ ?
– ಪೂ. (ಸೌ.) ಉಮಾ ರವಿಚಂದ್ರನ್, ಚೆನ್ನೈ (೨೯.೧೧.೨೦೧೬)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !