
ಓರ್ವ ಸಂಪ್ರದಾಯದ ಓರ್ವ ಭಕ್ತನು ತನ್ನ ಹುಟ್ಟುಹಬ್ಬದ ನಿಮಿತ್ತ ಕಾರ್ಯಕ್ರಮದಲ್ಲಿ ಪ.ಪೂ. ಡಾಕ್ಟರರನ್ನು ‘ಮುಖ್ಯ ಅತಿಥಿ’ಗಳೆಂದು ಕರೆದಿದ್ದನು. ಆ ಸ್ಥಳದಲ್ಲಿ ಹೋದಾಗ ಪ.ಪೂ. ಡಾಕ್ಟರರಿಗೆ, ‘ಇಲ್ಲಿ ಹುಟ್ಟುಹಬ್ಬವನ್ನು ಕೇವಲ ಮನೋರಂಜನೆ ಎಂದು ಆಚರಿಸಲಾಗುತ್ತಿದೆ. ಹುಟ್ಟುಹಬ್ಬದ ಆಯೋಜನೆಯನ್ನು ಸರಿಯಾಗಿ ಮಾಡಿರಲಿಲ್ಲ. ಸಂತರ ವ್ಯವಸ್ಥೆ ಸರಿಯಾಗಿ ಮಾಡಲಿಲ್ಲ. ವೇದಿಕೆಯ ಮೇಲೆ ಎಲ್ಲರೂ ಚಪ್ಪಲಿಗಳನ್ನು ಹಾಕಿಕೊಂಡು ಬಂದಿದ್ದಾರೆ’ ಎಂದು ಗಮನಕ್ಕೆ ಬಂದಿತು. ಹುಟ್ಟುಹಬ್ಬದ ನಿಮಿತ್ತ ಗೌರವಾನ್ವಿತರು ಹೊಗಳಿದರು.
ಅನಂತರ ಪ.ಪೂ. ಡಾಕ್ಟರರನ್ನು ಮುಖ್ಯ ಅತಿಥಿಗಳೆಂದು ಕರೆದರು. ಪ.ಪೂ. ಡಾಕ್ಟರರು ತಮ್ಮ ಭಾಷಣದಲ್ಲಿ ಆ ಭಕ್ತನ ಮೇಲಿರುವ ಪ್ರೀತಿಗಾಗಿ ‘ಹುಟ್ಟುಹಬ್ಬವನ್ನು ಹೇಗೆ ಆಚರಿಸಬೇಕು ? ಸಂತರ ಕೃಪೆಯನ್ನು ಹೇಗೆ ಸಂಪಾದಿಸಬೇಕು ?’, ಎಂಬುದನ್ನು ಹೇಳಿದರು. ಇದನ್ನು ಹೇಳುವಾಗ ಅವರು ಕಾರ್ಯಕ್ರಮದಲ್ಲಿನ ಅನೇಕ ತಪ್ಪುಗಳನ್ನೂ ಹೇಳಿದರು. ಇದನ್ನು ಆ ಭಕ್ತನೊಂದಿಗೆ ಆತ್ಮೀಯತೆಯ ಇರುವವರಿಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ಕೊನೆಗೆ ಅನೇಕರು ‘ಪ.ಪೂ. ಡಾಕ್ಟರರು ಸಂತರಿದ್ದಾರಾ ? ಸಂತರು ಹೀಗೆ ಮಾತನಾಡುತ್ತಾರಾ ? ಇವರು ಹುಟ್ಟುಹಬ್ಬದ ನಿಮಿತ್ತ ಆಶೀರ್ವಾದವನ್ನು ನೀಡದೇ ತಪ್ಪುಗಳನ್ನು ಹೇಳಿದರು’, ಎಂದು ಮಾತನಾಡುತ್ತಿದ್ದರು. ಈ ಸಮಯದಲ್ಲಿ ಆ ಭಕ್ತನಿಗೆ ಮಾತ್ರ ಆನಂದವಾಯಿತು. ೨ ದಿನಗಳ ನಂತರ ಆ ಭಕ್ತನು ಪ.ಪೂ. ಡಾಕ್ಟರರ ಬಳಿ ಬಂದು ಕೃತಜ್ಞತೆಯ ಭಾವದಿಂದ, ”ತಮ್ಮ ಮಾರ್ಗದರ್ಶನದಿಂದ ನನಗೆ ಒಂದು ಹೊಸ ದಾರಿ ಸಿಕ್ಕಿತು. ‘ಸಂತರ ಕೃಪೆಯನ್ನು ಹೇಗೆ ಸಂಪಾದಿಸಬೇಕು ?’, ಎಂಬುದು ತಿಳಿಯಿತು. ನಿಮ್ಮಿಂದ ನನ್ನ ಅದೃಷ್ಟ ತೆರೆಯಿತು” ಎಂದು ಹೇಳಿದನು.
– ಶ್ರೀ. ಪಾಟೀಲ (೨೩.೩.೨೦೦೪)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !