ಅಹಂಕಾರವನ್ನು ನಾಶಪಡಿಸುವ ಉಪಾಯ

ಗುರುಪೂರ್ಣಿಮೆಗಾಗಿ 3 ದಿನ ಬಾಕಿ

ಆಮೆಗಳು ಹೇಗೆ ಕೇವಲ ದೃಷ್ಟಿದಿಂದಲೇ ಮರಿಗಳನ್ನು ಪೋಷಿಸುತ್ತವೆ, ಅದೇ ರೀತಿ ಗುರುವು ಕೇವಲ ಕೃಪಾದೃಷ್ಟಿದಿಂದ ಶಿಷ್ಯನನ್ನು ಉದ್ಧಾರ ಮಾಡುತ್ತಾರೆ.

ಭಗವಂತ ಮತ್ತು ನಮ್ಮ ನಡುವೆ ಅಭಿಮಾನದ (ಅಹಂಕಾರದ) ಪರದೆ(ತೆರೆ) ಇದೆ. ಇದು ತೊಲಗಿದರೆ ನಮಗೆ ಭಗವತ್ಪ್ರಾಪ್ತಿಯಾಗುತ್ತದೆ. ಭಕ್ತಿಮಾರ್ಗವು ಸುಲಭವಾಗಿದೆ. ಭಕ್ತಿ ಎಂದರೆ ಅಭಿಮಾನರಹಿತರಾಗಿ ಭಗವಂತನಿಗೆ ಅನನ್ಯ ಶರಣಾಗುವುದು. ಭಗವಂತನವರಾಗಿ ಬಾಳುವುದು, ಭಗವಂತನನ್ನು ಬಿಟ್ಟು ಬೇರೇನೂ ಕಾಣದಿರುವುದು, ಎಲ್ಲೆಡೆ ಭಗವಂತನ ಪ್ರೀತಿಯ ಅನುಭೂತಿ ಬರುವುದು. ಇಂತಹ ಭಕ್ತಿ ಪ್ರಾಪ್ತವಾಗುವ ಮಾರ್ಗವೆಂದರೆ,ಎಲ್ಲಾ ಕರ್ತೃತ್ವವನ್ನು ಭಗವಂತನಿಗೆ ಅರ್ಪಿಸುವುದು, ಎಲ್ಲವೂ ಅವನ ಇಚ್ಛೆಯಂತೆ ನಡೆಯುತ್ತಿದೆ ಎಂದು ಒಪ್ಪಿಕೊಳ್ಳುವುದು. ನಾವು ಏನನ್ನೂ ಮಾಡುತ್ತಿಲ್ಲ, ಎಲ್ಲವನ್ನೂ ಅವನು ನಮ್ಮ ಹಿತಕ್ಕಾಗಿ ಮಾಡುತ್ತಿದ್ದಾನೆ ಎಂದು ಧೃಢ ನಂಬಿಕೆ ಇಡುವುದು. ನಮ್ಮ ಪ್ರತಿಯೊಂದು ಕ್ರಿಯೆಯನ್ನೂ ಅವನಿಗೆ ಸಮರ್ಪಿಸುವುದು. ಹೀಗೆ ಮಾಡುವುದರಿಂದ ನಮ್ಮ ಅಭಿಮಾನವು ಬೇಗನೆ ನಾಶವಾಗುತ್ತದೆ – ಬ್ರಹ್ಮಚೈತನ್ಯ ಗೊಂದವಲೇಕರ.ಮಹಾರಾಜರು