‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ದ ಸ್ಥಳದಲ್ಲಿ ಶ್ರೀ ದುರ್ಗಾದೇವಿಯ ಶಕ್ತಿ ಕಾರ್ಯನಿರತವಾಗಿದೆ !

ಹೊನ್ನಾವರದ ಖ್ಯಾತ ಜ್ಯೋತಿಷಿ ಸಂತೋಷ ಭಟ್‌ ಇವರು ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಬಗ್ಗೆ ನೀಡಿದ ಗೌರವೋದ್ಗಾರ !

ಶ್ರೀಕೃಷ್ಣನ ಚರಣಗಳಿಗೆ ಪ್ರಶಸ್ತಿ ಸಮರ್ಪಿಸುತ್ತಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ. ಜೊತೆಯಲ್ಲಿ ಎಡಗಡೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಬಲಗಡೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಹೊನ್ನಾವರದ ಖ್ಯಾತ ಜ್ಯೋತಿಷಿ ಶ್ರೀ. ಸಂತೋಷ ಭಟ್‌ ಗುರೂಜಿ ಯವರಿಗೆ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಬಗ್ಗೆ ತಿಳಿದಾಗ, ಅವರು ಮಹೋತ್ಸವ ನಡೆಯುವ ಸ್ಥಳಕ್ಕೆ ಎರಡು ಬಾರಿ ಸ್ವಯಂಪ್ರೇರಿತರಾಗಿ ಭೇಟಿ ನೀಡಿದರು.

ಅವರ ವಿಶೇಷತೆಯೆಂದರೆ ಅವರಿಗೆ ಸೂಕ್ಷ್ಮದಲ್ಲಿ ಶ್ರೀಕೃಷ್ಣನು ಆಜ್ಞಾಪಿಸುತ್ತಾನೆ. ಅದರಂತೆ, ಅವರು ಮಹೋತ್ಸವಕ್ಕೆ ಮೊದಲೇ ಈ ಸ್ಥಳದಲ್ಲಿ ಶ್ರೀ ದುರ್ಗಾದೇವಿಯ ಶಕ್ತಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದರು. ಮಹೋತ್ಸವದಲ್ಲಿ ಧರ್ಮ ಮತ್ತು ರಾಷ್ಟ್ರಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ೧೯ ಗಣ್ಯರಿಗೆ ‘ಸನಾತನ ಧರ್ಮಶ್ರೀ’ ಮತ್ತು ೪ ಗಣ್ಯರಿಗೆ ‘ಹಿಂದೂ ರಾಷ್ಟ್ರರತ್ನ’ ಪ್ರಶಸ್ತಿ ನೀಡಲಾಯಿತು. ಭಗವಾನ್‌ ಶ್ರೀಕೃಷ್ಣನು ಶ್ರೀ. ಸಂತೋಷ ಭಟ್‌ ಗುರೂಜಿಯವರಿಗೆ, ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಕೈಯಿಂದ ಒಂದು ಪ್ರಶಸ್ತಿಯನ್ನು ಭಗವಾನ್‌ ಶ್ರೀಕೃಷ್ಣನ ಚರಣಗಳಿಗೆ ಅರ್ಪಿಸಬೇಕು ಮತ್ತು ಈ ಪ್ರಶಸ್ತಿಯನ್ನು ಅನೇಕ ವರ್ಷಗಳ ವರೆಗೆ ಸಂಗ್ರಹಿಸಿಡಬೇಕು’ ಎಂದು ತಿಳಿಸಿದ್ದನು. ಅದರಂತೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಹಸ್ತದಿಂದ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ವೇದಿಕೆಯಿಂದ ಶ್ರೀಕೃಷ್ಣನಿಗೆ ಪ್ರಶಸ್ತಿ ಅರ್ಪಿಸಲಾಯಿತು.