ತುರ್ತು ಪರಿಸ್ಥಿತಿ ಭಾರತದ ಪ್ರಜಾಪ್ರಭುತ್ವದ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದು! – ಪ್ರಧಾನಮಂತ್ರಿ

ತುರ್ತು ಪರಿಸ್ಥಿತಿ ಘೋಷಣೆಯಾಗಿ 50 ವರ್ಷಗಳು ಪೂರ್ಣ

ನವದೆಹಲಿ – ಇಂದಿಗೆ ಸರಿಯಾಗಿ 50 ವರ್ಷಗಳ ಹಿಂದೆ ಭಾರತದಲ್ಲಿ ಅನ್ಯಾಯದ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ, ಪ್ರಧಾನಮಂತ್ರಿ ಮೋದಿ ಅವರು ‘ಎಕ್ಸ್’ನಲ್ಲಿ ಹೀಗೆ ಪೋಸ್ಟ್ ಬರೆದಿದ್ದಾರೆ: ‘ಇದು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದಾಗಿತ್ತು. ಜನರು ಈ ದಿನವನ್ನು ‘ಸಂವಿಧಾನ ಹತ್ಯಾ ದಿನ’ ಎಂದು ಆಚರಿಸುತ್ತಾರೆ’.

ಪ್ರಧಾನಮಂತ್ರಿಯವರು ತಮ್ಮ ಪೋಸ್ಟ್ ನಲ್ಲಿ…

೧. 1975 ರ ಜೂನ್ 25 ರಂದು ಸಾಂವಿಧಾನಿಕ ಮೌಲ್ಯಗಳನ್ನು ಬಲಿಪಶು ಮಾಡಲಾಯಿತು.

೨. ಜನರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು.

೩. ಅನೇಕ ನಾಯಕರು, ಸಾಮಾಜಿಕ ಕಾರ್ಯಕರ್ತರು ಮತ್ತು ಸಾಮಾನ್ಯ ನಾಗರಿಕರನ್ನು ಜೈಲಿಗೆ ತಳ್ಳಲಾಯಿತು.

೪. ಇದರ ವಿರುದ್ಧ ದೃಢವಾಗಿ ನಿಂತ ಪ್ರತಿಯೊಬ್ಬರಿಗೂ ನಾವು ನಮಸ್ಕರಿಸುತ್ತೇವೆ.

ಸಂಪಾದಕೀಯ ನಿಲುವು

ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಲಾದ ‘ಸೆಕ್ಯುಲರ್’ (ಧರ್ಮನಿರಪೇಕ್ಷ) ಮತ್ತು ‘ಸೋಶಿಯಲಿಸ್ಟ್’ (ಸಮಾಜವಾದ) ಪದಗಳನ್ನು ಈಗ ಸರಕಾರವು ತೆಗೆದುಹಾಕುವ ಮೂಲಕ ಜನರಿಗೆ ನಿಜವಾದ ನ್ಯಾಯವನ್ನು ನೀಡಬೇಕು!