ಸದ್ಗುರುಗಳನ್ನು ಅತಿ ಆಳವಾದ ಮತ್ತು ತುಂಬಾ ಉಪ್ಪಾಗಿರುವ ಸಾಗರದ ಜೊತೆ ಅಥವಾ ಕ್ಷೀರಸಾಗರದ ಜೊತೆ ಹೋಲಿಸಲಾಗದು !

‘ಉಪಮೇ ದ್ಯಾವಾ ಸಾಗರ | ತರೀ ತೋ ಅತ್ಯಂತಚೀ ಕ್ಷಾರ | ಅಥವಾ ಮ್ಹಣೋ ಕ್ಷೀರಸಾಗರ | ತರೀ ತೋ ನಾಸೇಲ ಕಲ್ಪಾಂತೀ ||

– ದಾಸಬೋಧ, ದಶಕ ೧, ಸಮಾಸ ೪, ಓವೀ ೧೭

ಅರ್ಥ : ಸದ್ಗುರುಗಳನ್ನು ಸಾಗರಕ್ಕೆ ಹೋಲಿಸಬೇಕೆಂದರೆ, ಸಾಗರದ ನೀರು ತುಂಬಾ ಉಪ್ಪಾಗಿರುತ್ತದೆ. ಆದ್ದರಿಂದ ಆ ಹೋಲಿಕೆ ಹೊಂದಿಕೆಯಾಗುವುದಿಲ್ಲ ಅವರಿಗೆ ಕ್ಷೀರಸಾಗರಕ್ಕೆ ಹೋಲಿಸಬೇಕೆಂದರೆ, ಕಲ್ಪಾಂತದಲ್ಲಿ ಕ್ಷೀರಸಾಗರವೂ ನಾಶಗೊಳ್ಳುತ್ತದೆ. ಆದ್ದರಿಂದ ಅದರ ಜೊತೆಗೂ ಹೋಲಿಸಲು ಬರುವುದಿಲ್ಲ.’