ಗುರು-ಶಿಷ್ಯ ಸಂಬಂಧದ ಅಸಾಧಾರಣ ಮಹತ್ವ !

ಗುರು-ಶಿಷ್ಯರ ನಡುವಿನ ಸರ್ವೋಚ್ಚ ಸಂಬಂಧವು ಶಬ್ದಾತೀತ ಜ್ಞಾನಕ್ಕೆ ಸೀಮಿತವಾಗಿರುತ್ತದೆ. ಗುರುಗಳು ಶಿಷ್ಯನನ್ನು ಚಿತ್ತದ ಸ್ತರಕ್ಕೆ ಕೊಂಡೊಯ್ದು, ಅವನ ಮೇಲೆ ಜ್ಞಾನರೂಪಿ ಗೂಢತೆಯ ಚೈತನ್ಯದ ಭಾಷೆಯಲ್ಲಿ ಸಂಸ್ಕಾರ ಮಾಡಿ, ಅವನಿಗೆ ಮಾಯಾರೂಪಿ ಭವಸಾಗರವನ್ನು ದಾಟಲು ತರಬೇತಿ ನೀಡುತ್ತಾರೆ. ಗುರುಗಳು ಜ್ಞಾನದ ಮೂಲಕ ಜೀವದ ಅಹಂಕಾರವನ್ನು ಕಡಿಮೆ ಮಾಡುತ್ತಾರೆ. ಗುರುಗಳ ಕಾರ್ಯವು ಕೊನೆಗೊಳ್ಳುತ್ತಿದ್ದಂತೆ, ಗುರು-ಶಿಷ್ಯ ಸಂಬಂಧವು ಕೊನೆಗೊಳ್ಳುತ್ತದೆ; ಏಕೆಂದರೆ ಶಿಷ್ಯನಿಗೆ ಗುರುವಿನ ಸ್ಥಾನ ಬಂದಿರುತ್ತದೆ. ಗುರುಗಳು ‘ಇನ್ನು ಉಳಿದಿರುವೆನು ಉಪಕಾರಕ್ಕೆ ಮಾತ್ರ’ ಎಂಬ ಸ್ತರದಲ್ಲಿ ಕಾರ್ಯ ಮಾಡುತ್ತಿರುತ್ತಾರೆ. ಶಿಷ್ಯನಿಗೆ ಗುರುವಿನ ಸ್ಥಾನ ಬಂದಾಗ ಅವನ ಜ್ಞಾನಸಹಿತ ಕಾರ್ಯವು ಪ್ರಾರಂಭವಾಗುತ್ತದೆ, ಹಾಗೆಯೇ ಗುರುಗಳ ಜ್ಞಾನೋತ್ತರ ಕಾರ್ಯವು ಪ್ರಾರಂಭವಾಗುತ್ತದೆ.

(ಆಧಾರ : ಸನಾತನ ನಿರ್ಮಿತ ಗ್ರಂಥ – ‘ಶಿಷ್ಯ’)