ಭಾರತದ ಆಯೋಗದ ಕಾರ್ಯಕ್ರಮ ರದ್ದುಪಡಿಸಲು ಪಾಕಿಸ್ತಾನದ ಮನವಿಯನ್ನು ತಿರಸ್ಕಾರ

ಕೌಲಾಲಂಪುರ್ (ಮಲೇಷ್ಯಾ) – ಭಾರತೀಯ ಸಂಸದರ ಸರ್ವಪಕ್ಷಗಳ ನಿಯೋಗಗಳು ವಿವಿಧ ದೇಶಗಳಿಗೆ ಭೇಟಿ ನೀಡಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಮತ್ತು ‘ಆಪರೇಷನ್ ಸಿಂದೂರ್’ ಕುರಿತು ಭಾರತದ ನಿಲುವನ್ನು ವಿವರಿಸುತ್ತಿವೆ. ಭಾರತದ ಒಂದು ನಿಯೋಗ ಇಸ್ಲಾಮಿಕ್ ರಾಷ್ಟ್ರ ಮಲೇಷ್ಯಾಕ್ಕೆ ಭೇಟಿ ನೀಡುತ್ತಿದ್ದಾಗ ಪಾಕಿಸ್ತಾನ ಅದಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿತು. ‘ಕಾಶ್ಮೀರ ವಿಷಯ ವಿಶ್ವಸಂಸ್ಥೆಯಲ್ಲಿದೆ. ಆದ್ದರಿಂದ, ಭಾರತೀಯ ನಿಯೋಗದ ಎಲ್ಲಾ ಪ್ರಸ್ತಾವಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕು’ ಎಂದು ಪಾಕಿಸ್ತಾನ ಮಲೇಷ್ಯಾವನ್ನು ವಿನಂತಿಸಿತು; ಆದರೆ ಮಲೇಷ್ಯಾ ಪಾಕಿಸ್ತಾನದ ವಿನಂತಿಯನ್ನು ನಿರ್ಲಕ್ಷಿಸಿತು.
‘ನಾವು ಇಸ್ಲಾಮಿಕ್ ರಾಷ್ಟ್ರ. ನೀವು ಭಾರತೀಯ ನಿಯೋಗದ ಮಾತನ್ನು ಕೇಳಬೇಡಿ. ಮಲೇಷ್ಯಾದಲ್ಲಿ ಅವರ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ’ ಎಂದು ಪಾಕಿಸ್ತಾನಿ ರಾಯಭಾರ ಕಚೇರಿ ಮಲೇಷ್ಯಾ ಸರಕಾರಕ್ಕೆ ತಿಳಿಸಿತು; ಆದರೆ ಸರಕಾರ ಅವರ ಮಾತನ್ನು ಕೇಳಲಿಲ್ಲ. 9 ಸದಸ್ಯರ ನಿಯೋಗಕ್ಕೆ ಎಲ್ಲಾ 10 ಪ್ರಸ್ತಾವಿತ ಕಾರ್ಯಕ್ರಮಗಳನ್ನು ಆಯೋಜಿಸಲು ಸರಕಾರ ಅನುಮತಿ ನೀಡಿತು.
ಸಂಪಾದಕೀಯ ನಿಲುವು‘ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಮತ್ತು ಸೌಹಾರ್ದತೆ ಇರಬೇಕು’ ಎಂದು ಹಗಲುಗನಸು ಕಾಣುವ ಭಾರತದ ಮಹನೀಯರು ಈಗ ಇದರ ಬಗ್ಗೆ ಏನು ಹೇಳುತ್ತಾರೆ? ಪಾಕಿಸ್ತಾನವು ಭಾರತವನ್ನು ಇಸ್ಲಾಂನ ಶತ್ರು ಎಂದು ನೋಡುತ್ತದೆ ಎಂಬುದು ಈ ಉದಾಹರಣೆಯಿಂದ ಸ್ಪಷ್ಟವಾಗುತ್ತದೆ. |
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಕೆನಡಾದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ. ೬೦ ರಷ್ಟು ಕುಸಿತ!
‘ಭಾರತವು ಔಷಧಗಳ ಪೆಟ್ಟಿಗೆಯಲ್ಲಿ ಅಫ್ಘಾನಿಸ್ತಾನಕ್ಕೆ ಡ್ರೋನ್ಗಳನ್ನು ಕಳುಹಿಸಿದೆ!’(ಯಂತೆ)
ವೆನೆಜುವೆಲಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಇಲ್ಲಿಯವರೆಗೆ 235 ಮಂದಿ ಸಾವು!
ಯುಕ್ರೇನ್ ನಿಂದ ರಷ್ಯಾದ 12 ಪ್ರಾಂತ್ಯಗಳ ಮೇಲೆ ನೂರಾರು ಡ್ರೋನ್ ದಾಳಿ ! : Ukraine-Russia War
1985 ರಲ್ಲಿ ಏರ್ ಇಂಡಿಯಾದ ‘ಕನಿಷ್ಕ’ ವಿಮಾನದಲ್ಲಿ ಖಲಿಸ್ತಾನಿ ಭಯೋತ್ಪಾದಕರು ಸ್ಫೋಟ ನಡೆಸಿದ್ದರು! ಭಾರತೀಯ ಮೂಲದ 329 ಪ್ರಯಾಣಿಕರು ಸಾವನ್ನಪ್ಪಿದ್ದರು ! : Kanishka Blast