Sharmishtha Panoli Issue : ಬಂಗಾಳ ಪೊಲೀಸರು ಹಿಂದೂ ಧರ್ಮವನ್ನು ಟೀಕಿಸುವವರ ವಿರುದ್ಧ ಎಂದಿಗೂ ಕ್ರಮ ಕೈಗೊಳ್ಳುವುದಿಲ್ಲ; ಆದರೆ ಶರ್ಮಿಷ್ಠಾ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ!

ಭಾಜಪ ಶಾಸಕ ಸುವೇಂದು ಅಧಿಕಾರಿಯವರ ಟೀಕೆ

ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ಶಾಸಕ ಸುವೇಂದು ಅಧಿಕಾರಿ

ಕೋಲಕಾತಾ (ಬಂಗಾಳ) – ತೃಣಮೂಲ ಕಾಂಗ್ರೆಸ್ಸಿನ ಸಂಸದೆ ಮಹುವಾ ಮೊಯಿತ್ರಾ ಶ್ರೀ ಕಾಳಿ ಮಾತೆಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಸಾಯೋನಿ ಘೋಷ್ ಶಿವಲಿಂಗದ ಮೇಲೆ ನಿರೋಧ ಹಾಕಿರುವ ಚಿತ್ರವನ್ನು ಪ್ರಸಾರ ಮಾಡಿದಾಗಲೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಸಚಿವ ಫಿರ್ಹಾದ್ ಹಕೀಮ್ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿದ್ದರೂ, ಅವರ ವಿರುದ್ಧವೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

ಹೀಗಿರುವಾಗ, ಶರ್ಮಿಷ್ಠಾ ಪನೋಲಿ ಅವರು ಪಾಕಿಸ್ತಾನದ ಬಗ್ಗೆ ಮಾತನಾಡಿದ ಕೂಡಲೇ ಬಂಗಾಳ ಪೊಲೀಸರು ಅವರನ್ನು ಬಂಧಿಸಿದರು ಎಂದು ಬಂಗಾಳದ ಭಾಜಪ ಶಾಸಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಟೀಕಿಸಿದ್ದಾರೆ. ‘ಆಪರೇಷನ್ ಸಿಂದೂರ’ ಕುರಿತು ಭಾರತದ ವಿರುದ್ಧ ಟೀಕೆ ಮಾಡಿದ ಪಾಕಿಸ್ತಾನಿ ಮಹಿಳೆಗೆ ಪ್ರತಿಕ್ರಿಯಿಸುವಾಗ ಶರ್ಮಿಷ್ಠಾ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎನ್ನಲಾಗಿದ್ದು, ಈ ಕಾರಣಕ್ಕೆ ಕೋಲಕಾತಾ ಪೊಲೀಸರು ಇತ್ತೀಚೆಗೆ ಅವರನ್ನು ಬಂಧಿಸಿದ್ದರು. ಈ ಘಟನೆಯನ್ನು ಆಧರಿಸಿ ಅಧಿಕಾರಿ ಅವರು ಪೊಲೀಸರ ವಿರುದ್ಧ ಮೇಲಿನ ಟೀಕೆ ಮಾಡಿದ್ದಾರೆ.