
೧. ಭವಿಷ್ಯದಲ್ಲಿ ಘಟಿಸುವ ಘಟನೆಗಳ ಬಗ್ಗೆ ಮುಂಚಿತವಾಗಿ ತಿಳಿದುಕೊಂಡು ಮಹರ್ಷಿಗಳು ಹೇಳಿದ ಉಪಾಯಗಳು ‘ಒಮ್ಮೆ ಮಹರ್ಷಿಗಳು ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ವಾಸಿಸುತ್ತಿರುವ ಕಾಂಚಿಪುರಮ್ (ತಮಿಳುನಾಡು)ನ ಸೇವಾಕೇಂದ್ರದ ಸುತ್ತಲೂ ಆಕಸ್ಮಿಕವಾಗಿ ಕೆಂಪುಮಣ್ಣಿನ ಮಂಡಲವನ್ನು ಹಾಕಲು ಹೇಳಿದರು ಮತ್ತು ಆ ಸೇವಾಕೇಂದ್ರದ ಮುಖ್ಯ ಬಾಗಿಲಿನ ಮಧ್ಯಭಾಗದಲ್ಲಿ ಅನಾನಸನ್ನು ಕಟ್ಟಿಡಲು ಹೇಳಿದರು. ಅವರು ‘ಏಕೆ ಹೀಗೆ ಮಾಡಲು ಹೇಳಿದರು ?’, ಎಂಬುದರ ಬಗ್ಗೆ ನಮಗೆ ತಿಳಿಯಲಿಲ್ಲ.
೨. ಕಾಂಚೀಪುರಮ್ ಸೇವಾಕೇಂದ್ರದ ಮುಂಭಾಗದ ರಸ್ತೆಯ ಮೇಲೆ ಕಪ್ಪು ದಾರದಿಂದ ಸುತ್ತಿದಂತಹ ಒಂದು ವಸ್ತು ಕಾಣಿಸುವುದು ಮಹರ್ಷಿಗಳು ಹೇಳಿದಂತೆ ನಾವು ಎರಡೂ ಉಪಾಯಗಳನ್ನು ಮಾಡಿದೆವು. ಮರುದಿನ ನಾವೆಲ್ಲರೂ ಸೇವೆಗಾಗಿ ಸೇವಾಕೇಂದ್ರದಿಂದ ಹೊರಗೆ ಬಂದೆವು. ಆ ದಿನ ಸಾಯಂಕಾಲ ಸುಮಾರು ೬ ಗಂಟೆಗೆ ಶ್ರೀ. ವಿನಾಯಕ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ. ೬೮, ವಯಸ್ಸು ೪೨ ವರ್ಷ) ಇವರಿಗೆ ಕಾಂಚೀಪುರಂ ಸೇವಾಕೇಂದ್ರದ ಮುಂಭಾಗದ ರಸ್ತೆಯ ಮೇಲೆ ಕಪ್ಪು ದಾರದಿಂದ ಸುತ್ತಿದಂತೆ ಕಾಣುವ ಒಂದು ವಸ್ತು ಕಾಣಿಸಿತು. ನಮಗೆ ಆ ವಸ್ತುವಿನ ಕಡೆಗೆ ನೋಡಿ ಒಳ್ಳೆಯದೆನಿಸುತ್ತಿರಲಿಲ್ಲ. ನಿಜ ಹೇಳುವುದಾದರೆ ಕಾಂಚೀಪುರಂ ಸೇವಾಕೇಂದ್ರವು ಕೊನೆಯ ಓಣಿಯಲ್ಲಿರುವುದರಿಂದ ಇಲ್ಲಿ ಸಹಜವಾಗಿ ಯಾರೂ ಬರುವುದಿಲ್ಲ. ‘ಆ ವಸ್ತು ಇಲ್ಲಿ ಹೇಗೆ ಬಂದಿತು ?’, ಎಂಬುದು ನಮ್ಮ ಗಮನಕ್ಕೆ ಬರಲಿಲ್ಲ.
೩. ಮಹರ್ಷಿಗಳು ಅಭಯ ನೀಡುವುದು ನಂತರ ನಾವು ಮಹರ್ಷಿಗಳಿಗೆ (ಪೂ. ಡಾ. ಓಂ ಉಲಗನಾಥನ್ ಇವರಿಗೆ) ಸಂಚಾರವಾಣಿಯಿಂದ ಹೇಳಿದಾಗ ಅವರು, ‘ಇದು ಮಾಟದ ಪ್ರಕಾರವಾಗಿದೆ; ಆದರೆ ನಾವು ಮುಂಚಿತವಾಗಿ ಉಪಾಯ ಮಾಡಿದ್ದರಿಂದ ಮಾಟದ ಯಾವುದೇ ಪರಿಣಾಮವಾಗಲಾರದು. ಕಾಳಜಿ ಮಾಡಬೇಡಿ. ಅದನ್ನು ವಿಸರ್ಜಿಸಿ’ ಎಂದು ಹೇಳಿದರು. ‘ಮಹರ್ಷಿಗಳು ತ್ರಿಕಾಲಜ್ಞಾನಿಗಳಾಗಿದ್ದಾರೆ’, ಎಂಬುದು ಗಮನಕ್ಕೆ ಬಂದಿತು. ಅವರು ಮುಂಚಿತವಾಗಿಯೇ ಉಪಾಯ ಮಾಡಲು ಹೇಳಿದ್ದರಿಂದ ಯಾರಿಗೂ ತೊಂದರೆಯಾಗಲಿಲ್ಲ.’
– ಶ್ರೀ. ವಿನೀತ ದೇಸಾಯಿ, ತಿರುವಣ್ಣಾಮಲೈ, ತಮಿಳುನಾಡು. (೧೩.೧೨.೨೦೨೪)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !