ಪಾಕಿಸ್ತಾನದಿಂದ ೨೬ ಕಡೆಗಳಲ್ಲಿ ದಾಳಿಯ ನಂತರ ಭಾರತದ ಪ್ರತೀಕಾರಕೆಲವು ಸೈನಿಕ ಠಾಣೆಗಳು ಮತ್ತು ಭಯೋತ್ಪಾದಕರ ಲಾಂಚ್ ಪ್ಯಾಡ್ ನಾಶ |
ನವದೆಹಲಿ – ಭಾರತವು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ನಡೆಸಿದ ದಾಳಿದ ನಂತರ ಕೆರಳಿದ ಪಾಕಿಸ್ತಾನವು ಸತತ ಮೂರನೇ ದಿನವೂ ನೂರಾರು ಡ್ರೋನ್ಗಳು ಮತ್ತು ಕ್ಷಿಪಣಿಗಳ ಮೂಲಕ ಭಾರತದ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಭಾರತವು ಈ ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ಸಹ ಗಾಳಿಯಲ್ಲಿಯೇ ಹೊಡೆದುರುಳಿಸಿತು. ಹಾಗೆಯೇ ಮೇ ೧೦ ರ ಬೆಳಿಗ್ಗೆ ಭಾರತವು ಪ್ರತೀಕಾರವಾಗಿ ಪಾಕಿಸ್ತಾನದ ವಾಯುಸೇನೆಯ ೪ ಮತ್ತು ಭೂಸೇನೆಯ ೪ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡಿತು. ಇದರಲ್ಲಿ ಅವರಿಗೆ ಎಷ್ಟು ಹಾನಿಯಾಗಿದೆ ಎಂದು ತಿಳಿದುಬಂದಿಲ್ಲವಾದರೂ, ಇದರ ವಿಡಿಯೋಗಳು ಪಾಕಿಸ್ತಾನದಿಂದಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಸೈನ್ಯವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಜಿಹಾದಿ ಭಯೋತ್ಪಾದಕರ ಲಾಂಚ್ ಪ್ಯಾಡ್ಅನ್ನು (ಭಾರತದಲ್ಲಿ ಕಾರ್ಯಾಚರಣೆಗಳನ್ನು ನಡೆಸಲು ಭಯೋತ್ಪಾದಕರನ್ನು ಒಂದೇ ಸ್ಥಳದಲ್ಲಿ ಸೇರಿಸುವ ಸ್ಥಳ) ಧ್ವಂಸಗೊಳಿಸಿತು. ಇದರಲ್ಲಿ ಎಷ್ಟು ಭಯೋತ್ಪಾದಕರು ಹತರಾಗಿದ್ದಾರೆ ಎಂಬುದು ತಿಳಿದುಬಂದಿಲ್ಲ. ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಗಡಿಯ ಅನೇಕ ಕಡೆ ಗುಂಡಿನ ದಾಳಿ ನಡೆಸಿತು, ಹಾಗೆಯೇ ಮಾರ್ಟರ್ಗಳ ದಾಳಿಯನ್ನು ನಡೆಸಿತು. ಇದರಲ್ಲಿ ೫ ಭಾರತೀಯರು ಮೃತಪಟ್ಟರು. ಇದರ ನಂತರ ಭಾರತದಿಂದಲೂ ಪ್ರತೀಕಾರ ನೀಡಲಾಯಿತು. ಇಲ್ಲಿ ಭಾರತೀಯ ಸೈನ್ಯವು ಗುಂಡಿನ ದಾಳಿ ಮತ್ತು ಫಿರಂಗಿಗಳನ್ನು ಬಳಸಿ ಪಾಕಿಸ್ತಾನದ ಸೈನಿಕರ ಮೇಲೆ ದಾಳಿ ನಡೆಸಿ ಅವರ ಠಾಣೆಗಳನ್ನು ಧ್ವಂಸಗೊಳಿಸಿತು. ಇದರ ವಿಡಿಯೋಗಳನ್ನು ಭಾರತೀಯ ಸೈನ್ಯವು ಬಿಡುಗಡೆ ಮಾಡಿದೆ.
🇮🇳💥🇮🇩 India strikes back HARD!
Destroyed 8 Pakistan Air Force & military bases in response to 26 attacks. – Colonel Sofiya Qureshi
"We've taken out military checkpoints & terrorist launch pads."
Enough is enough! Time for decisive action to dismantle terror infrastructure &… pic.twitter.com/gEzo83im5E
— Sanatan Prabhat (@SanatanPrabhat) May 10, 2025
೧. ಪಾಕಿಸ್ತಾನದಿಂದ ಮೇ ೯ ರ ರಾತ್ರಿ ೯ ಗಂಟೆಯಿಂದ ಮೇ ೧೦ ರ ಬೆಳಿಗ್ಗೆಯವರೆಗೆ ಭಾರತದ ಜಮ್ಮು-ಕಾಶ್ಮೀರ, ಪಂಜಾಬ್, ರಾಜಸ್ಥಾನ, ಹರಿಯಾಣ ಮತ್ತು ಗುಜರಾತ್ ರಾಜ್ಯಗಳ ಗಡಿಯ ಮೇಲಿನ ಸೈನಿಕ ನೆಲೆಗಳು, ವಾಯುಪಡೆಯ ನೆಲೆಗಳು ಹಾಗೂ ನಾಗರಿಕ ವಸತಿಗಳ ಮೇಲೆ ೨೬ ಕಡೆಗಳಲ್ಲಿ ಡ್ರೋನ್ಗಳು ಮತ್ತು ಕ್ಷಿಪಣಿಗಳ ಮೂಲಕ ದಾಳಿ ಮಾಡಲಾಯಿತು.
೨. ಭಾರತವು ಈ ದಾಳಿಗಳನ್ನು ಎಸ್-೪೦೦ ಹಾಗೂ ಇತರ ವಾಯು ರಕ್ಷಣಾ ವ್ಯವಸ್ಥೆಗಳ ಮೂಲಕ ಗಾಳಿಯಲ್ಲಿಯೇ ಹೊಡೆದುರುಳಿಸಿತು. ಇದರಲ್ಲಿ ಭಾರತವು ಪಾಕಿಸ್ತಾನದ ‘ಫತೇಹ್-೧’ ಎಂಬ ಕ್ಷಿಪಣಿಯನ್ನು ಧ್ವಂಸಗೊಳಿಸಿತು.
೩. ಪಾಕಿಸ್ತಾನವು ರಜೌರಿ, ಪೂಂಚ್ ಮತ್ತು ಜಮ್ಮುವಿನಲ್ಲಿ ಗುಂಡಿನ ದಾಳಿ ನಡೆಸಿತು. ರಜೌರಿಯಲ್ಲಿ ಮೇ ೧೦ ರ ಬೆಳಿಗ್ಗೆ ಪಾಕಿಸ್ತಾನವು ಹಾರಿಸಿದ ಫಿರಂಗಿಯ ಸಿಡಿತದಿಂದ ಹೆಚ್ಚುವರಿ ಜಿಲ್ಲಾ ಅಭಿವೃದ್ಧಿ ಆಯುಕ್ತ ರಾಜ ಕುಮಾರ ಥಾಪಾ ಎಂಬ ಸರಕಾರಿ ಅಧಿಕಾರಿ ಮೃತಪಟ್ಟರು. ಹಾಗೆಯೇ ಈ ದಾಳಿದಲ್ಲಿ ಇತರ ೪ ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
೪. ಭಾರತವು ಮೇ ೧೦ ರ ಬೆಳಿಗ್ಗೆ ಪಾಕಿಸ್ತಾನದ ನೂರ್ ಖಾನ್ (ರಾವಲ್ಪಿಂಡಿ), ಮುರೀದ್ (ಚಕ್ವಾಲ್, ಪಂಜಾಬ್), ರಫೀಕಿ (ಶೋರ್ಕೋಟ್, ಪಂಜಾಬ್) ಮತ್ತು ರಹೀಮ್ಯಾರ್ ಖಾನ್ (ಪಂಜಾಬ್) ಈ ೪ ವಾಯುಸೇನಾ ನೆಲೆಗಳನ್ನು ಗುರಿಯಾಗಿಸಿತು. ಇಲ್ಲಿ ಭಾರತವು ಡ್ರೋನ್ಗಳ ಮೂಲಕ ದಾಳಿ ನಡೆಸಿತು. ಇದರಲ್ಲಿ ಈ ನೆಲೆಗಳಿಗೆ ಹೆಚ್ಚಿನ ಹಾನಿಯಾಗಿಲ್ಲ ಎಂದು ಪಾಕಿಸ್ತಾನದ ಸೈನ್ಯವು ಹೇಳಿಕೊಂಡಿದ್ದರೂ, ಇಲ್ಲಿ ಬೆಂಕಿ ಮತ್ತು ಹೊಗೆ ಕಾಣಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
೫. ಸುಕ್ಕುರ್, ಚುನ್ಯಾ, ಪಸ್ರೂರ್ ಮತ್ತು ಸಿಯಾಲ್ಕೋಟ್ನ ಸೈನ್ಯ ನೆಲೆಗಳ ಮೇಲೆ ದಾಳಿ ಮಾಡಲಾಯಿತು. ಹಾಗೆಯೇ ಜಕೋಕಾಬಾದ್ನ ವಾಯುಸೇನಾ ನೆಲೆಯ ಮೇಲೂ ದಾಳಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇಲ್ಲಿನ ದಾಳಿದ ನಂತರ ಬೆಂಕಿ ಕಾಣಿಸಿಕೊಂಡಿರುವ ವಿಡಿಯೋಗಳು ಲಭ್ಯವಾಗಿವೆ.
೬. ಭಾರತದ ಪ್ರತೀಕಾರದ ನಂತರ ಪಾಕಿಸ್ತಾನದಿಂದ ವಿಮಾನಯಾನವನ್ನು ಸ್ಥಗಿತಗೊಳಿಸಲಾಗಿದೆ. ಪಾಕಿಸ್ತಾನದಲ್ಲಿ ಯಾವುದೇ ವಿಮಾನ ಹಾರಾಟ ನಡೆಸುವುದಿಲ್ಲ ಮತ್ತು ಇತರ ದೇಶಗಳ ವಿಮಾನಗಳಿಗೂ ಹಾರಾಟ ನಡೆಸಲು ನಿಷೇಧ ಹೇರಲಾಗಿದೆ.
‘ಎಸ್-೪೦೦’ ವ್ಯವಸ್ಥೆಯನ್ನು ನಾಶಪಡಿಸಿದ ಪಾಕಿಸ್ತಾನದ ಹುಸಿ ಹೇಳಿಕೆ
ಪಾಕಿಸ್ತಾನವು ಭಾರತದ ಆದಂಪುರ, ಉಧಂಪುರ, ಪಠಾಣ್ಕೋಟ್, ಸೂರತ್ಗಢ ಮತ್ತು ಸಿರ್ಸಾ ವಾಯುಸೇನಾ ನೆಲೆಗಳ ಮೇಲೆ ದಾಳಿ ಮಾಡಿತ್ತು. ಈ ದಾಳಿಗಳನ್ನು ವಿಫಲಗೊಳಿಸಲಾಯಿತು. ಇದೇ ವೇಳೆ ಪಾಕಿಸ್ತಾನವು ಉಧಂಪುರದಲ್ಲಿ ಭಾರತದ ‘ಎಸ್-೪೦೦’ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿದೆ ಎಂದು ಹೇಳಿಕೊಂಡಿತು; ಆದರೆ ಭಾರತೀಯ ಸೇನೆಯು ಈ ಹೇಳಿಕೆಯನ್ನು ನಿರಾಕರಿಸಿತು. ಹಾಗೆಯೇ ಪಾಕಿಸ್ತಾನವು ರಜೌರಿಯ ಸೈನಿಕ ತರಬೇತಿ ಕೇಂದ್ರ ಮತ್ತು ಪಂಜಾಬ್ನ ಬಿಯಾಸ್ನ ಬ್ರಹ್ಮೋಸ್ ಸಂಗ್ರಹಣಾ ಸೌಲಭ್ಯಗಳನ್ನು ಧ್ವಂಸಗೊಳಿಸಿದೆ ಎಂದು ಹೇಳಿಕೊಂಡಿತ್ತು. ಅದನ್ನೂ ಭಾರತವು ನಿರಾಕರಿಸಿತು.
‘ಆಪರೇಷನ್ ಬುನ್ಯಾನ್-ಉಲ್-ಮರ್ಸೂಸ್’! – ಪಾಕಿಸ್ತಾನದ ಕಾರ್ಯಾಚರಣೆಯ ಹೆಸರು
ಭಾರತವು ಪಾಕಿಸ್ತಾನದಲ್ಲಿನ ಭಯೋತ್ಪಾದಕರ ವಿರುದ್ಧ ‘ಆಪರೇಷನ್ ಸಿಂಧೂರ್’ ಅನ್ನು ಪ್ರಾರಂಭಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನವು ‘ಆಪರೇಷನ್ ಬುನ್ಯಾನ್-ಉಲ್-ಮರ್ಸೂಸ್’ ಎಂಬ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಇದರ ಅರ್ಥ ‘ರಕ್ಷಿಸುವ ಭದ್ರವಾದ ಗೋಡೆ’ ಎಂದಾಗುತ್ತದೆ.
‘ಪ್ರತಿಕ್ರಿಯೆ ನೀಡದೆ ಬೇರೆ ದಾರಿಯಿರಲಿಲ್ಲ!’ – ಪಾಕಿಸ್ತಾನದ ಉಪ ಪ್ರಧಾನಮಂತ್ರಿ ಇಶಾಕ್ ಡಾರ್
ಇದನ್ನೇ ಕಳ್ಳನಿಗೊಂದು ಪಿಳ್ಳೆ ನೆವ ಅನ್ನುವುದು!
ಪಾಕಿಸ್ತಾನದ ಉಪ ಪ್ರಧಾನಮಂತ್ರಿ ಇಶಾಕ್ ಡಾರ್ ಅವರು, ನೂರ್ ಖಾನ್ ವಾಯುಸೇನಾ ನೆಲೆಯ ಮೇಲೆ ಭಾರತವು ನಡೆಸಿದ ದಾಳಿದ ನಂತರ ಪಾಕಿಸ್ತಾನಿ ಸೈನ್ಯದ ನಾಯಕತ್ವವು ಈ ನಿರ್ಧಾರವನ್ನು ತೆಗೆದುಕೊಂಡಿತು ಎಂದು ಹೇಳಿದರು. ಈಗ ಇನ್ನಷ್ಟು ಸಹನೆ ಇಲ್ಲ. ನಾವು ಕೇವಲ ಅವರಿಗೆ ಪ್ರತಿಕ್ರಿಯಿಸುತ್ತಿದ್ದೇವೆ. ಕಳೆದ ೩ ದಿನಗಳಲ್ಲಿ ಭಾರತವು ಎಷ್ಟೇ ನಾಟಕವಾಡಿದ್ದರೂ, ಈ ಪ್ರದೇಶದಲ್ಲಿ ಅದರ ಪ್ರಾಬಲ್ಯವನ್ನು ಸ್ಥಾಪಿಸಲು ನಾವು ಬಿಡುವುದಿಲ್ಲ. ಇಂದು ನಾವು ಪ್ರಾರಂಭಿಸಿರುವ ಈ ಕಾರ್ಯಾಚರಣೆಯು ಒಂದಲ್ಲ ಒಂದು ರೀತಿಯಲ್ಲಿ ಕೊನೆಗೊಳ್ಳುತ್ತದೆ; ಆದರೆ ಇದೆಲ್ಲವೂ ಭಾರತಕ್ಕೆ ಏನು ಬೇಕು ಎಂಬುದರ ಮೇಲೆ ಅವಲಂಬಿತವಾಗಿದೆ.
‘ನಾವು ಭಾರತದ ಮೇಲೆ ಡ್ರೋನ್ಗಳು ಮತ್ತು ಕ್ಷಿಪಣಿಗಳ ಮೂಲಕ ದಾಳಿ ಮಾಡಿದ್ದೇವೆ ಎಂಬ ಆರೋಪ ಸುಳ್ಳು!’ – ಪಾಕಿಸ್ತಾನದ ಸೇನೆ
ಪಾಕಿಸ್ತಾನಿ ಸೇನೆಯ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಚೌಧರಿ ಅವರು ಭಾರತದ ಮೇಲೆ ಡ್ರೋನ್ಗಳು ಮತ್ತು ಕ್ಷಿಪಣಿಗಳ ಮೂಲಕ ದಾಳಿ ಮಾಡಿರುವ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಅವರು ಭಾರತದ ಹೇಳಿಕೆಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಅದು ಸದಾ ಸುಳ್ಳು ಹೇಳುತ್ತದೆ. ಅದರ ಆರೋಪ ಸುಳ್ಳು. ಒಂದು ವೇಳೆ ಇದು ನಿಜವಾಗಿದ್ದರೆ, ಅದಕ್ಕೆ ಪುರಾವೆ ಎಲ್ಲಿದೆ? ಬದಲಾಗಿ ಕಳೆದ ೨ ದಿನಗಳಲ್ಲಿ ಪಾಕಿಸ್ತಾನವು ಭಾರತದಿಂದ ಬಂದ ೭೭ ಡ್ರೋನ್ಗಳನ್ನು ಹೊಡೆದುರುಳಿಸಿದೆ. ಮೇ ೭ ರಂದು ಭಾರತವು ಪಾಕಿಸ್ತಾನದ ಮೇಲೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಒಟ್ಟು ೩೩ ಜನರು ಮೃತಪಟ್ಟಿದ್ದಾರೆ ಮತ್ತು ೭೬ ಜನರು ಗಾಯಗೊಂಡಿದ್ದಾರೆ ಎಂದು ಅಹ್ಮದ್ ಶರೀಫ್ ಅವರು ಹೇಳಿಕೊಂಡಿದ್ದಾರೆ. (ಬಹಿರಂಗವಾಗಿ ಸುಳ್ಳು ಹೇಳುವ ಪಾಕಿಸ್ತಾನ! ಅಂತಹ ದೇಶವನ್ನು ಎಂದಾದರೂ ನಂಬಲು ಸಾಧ್ಯವೇ? – ಸಂಪಾದಕರು)
‘ಭಾರತವು ನಮ್ಮ ಪ್ರತಿಕ್ರಿಯೆಗಾಗಿ ಕಾಯಬೇಕು!’ – ಪಾಕಿಸ್ತಾನದ ಸೇನೆ
ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಚೌಧರಿ ಅವರು ಭಾರತವು ಕೆಲವು ಸಮಯದ ಹಿಂದೆ ತನ್ನ ಯುದ್ಧ ವಿಮಾನಗಳಿಂದ ಭೂಮಿಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿಗಳನ್ನು ಹಾರಿಸಿತು. ನಾವು ಹೇಳಲು ಬಯಸುವುದು ಇಷ್ಟೇ, ನಾವು ಭಾರತದ ಶಕ್ತಿ, ತಂತ್ರಗಳು ಅಥವಾ ದಾಳಿಗಳಿಗೆ ಹೆದರುವ ಸಮುದಾಯವಲ್ಲ. ಈಗ ಅವರು ನಮ್ಮ ಉತ್ತರಕ್ಕಾಗಿ ಕಾಯಬೇಕು, ಎಂದು ಹೇಳಿದರು.
ಅಂತರಾಷ್ಟ್ರೀಯ ಹಣಕಾಸು ನಿಧಿಯಿಂದ ಪಾಕಿಸ್ತಾನಕ್ಕೆ ೨೦ ಸಾವಿರ ಕೋಟಿ ರೂಪಾಯಿಗಳ ಸಾಲ
ಪಾಕಿಸ್ತಾನವು ಭಾರತದ ಮೇಲೆ ದಾಳಿ ಮಾಡುತ್ತಿರುವಾಗ ಇಂತಹ ಸಾಲವನ್ನು ಮಂಜೂರು ಮಾಡುವ ಅಂತರಾಷ್ಟ್ರೀಯ ಹಣಕಾಸು ನಿಧಿಯು ಭಾರತ ವಿರೋಧಿಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ!
ಪಾಕಿಸ್ತಾನವು ಭಾರತದ ಮೇಲೆ ದಾಳಿ ಮಾಡುತ್ತಿರುವಾಗಲೇ ಅಂತರಾಷ್ಟ್ರೀಯ ಹಣಕಾಸು ನಿಧಿಯು ಪಾಕಿಸ್ತಾನಕ್ಕೆ ೨೦ ಸಾವಿರ ಕೋಟಿ ರೂಪಾಯಿಗಳ ೨ ಸಾಲಗಳನ್ನು ಮಂಜೂರು ಮಾಡಿದೆ. ಈ ಸಾಲಗಳಲ್ಲಿ ಒಂದು ‘ಎಕ್ಸ್ಟೆಂಡೆಡ್ ಫಂಡ್ ಫೆಸಿಲಿಟಿ’ ಅಡಿಯಲ್ಲಿ ತಕ್ಷಣವೇ ನೀಡಲಾಗುತ್ತದೆ ಮತ್ತು ಇನ್ನೊಂದು ಸಾಲವನ್ನು ಮುಂದಿನ ೨೮ ತಿಂಗಳಲ್ಲಿ ನೀಡಲಾಗುತ್ತದೆ.