‘ನಾವು ಭಾರತದ 5 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ, ಇದರ ಪುರಾವೆ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ!’

  • ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರ ಹಾಸ್ಯಾಸ್ಪದ ಹೇಳಿಕೆ!

  • ಸಿ.ಎನ್.ಎನ್. ಪತ್ರಕರ್ತರಿಂದ ಆಸಿಫ್ ಗೆ ಛೀಮಾರಿ!

ನವದೆಹಲಿ – ಪಾಕಿಸ್ತಾನ ಪ್ರಧಾನಿ ಶೆಹಬಾಜ ಷರೀಫ್ ಅವರು ಭಾರತದ 5 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಪಾಕ್ ಸಂಸತ್ತಿನಲ್ಲಿ ಹೇಳಿಕೊಂಡಿದ್ದರು. ನಂತರ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಸಿಎನ್ಎನ್ (ಕೇಬಲ್ ನ್ಯೂಸ್ ನೆಟ್ವರ್ಕ್) ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿಯೂ ಇದೇ ಹೇಳಿಕೆ ನೀಡಿದಾಗ, ಸಂದರ್ಶನ ನಡೆಸುತ್ತಿದ್ದ ಪತ್ರಕರ್ತರು ಈ ದಾಳಿಯ ಪುರಾವೆ ಕೇಳಿದರು. ಇದಕ್ಕೆ ಖ್ವಾಜಾ ಆಸಿಫ್, ‘ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ. ಭಾರತೀಯ ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಸಾರವಾಗುತ್ತಿದ್ದು, ವಿಮಾನಗಳ ಅವಶೇಷಗಳು ಅವರ ಭೂಮಿಯಲ್ಲಿ ಬಿದ್ದಿದೆ’ ಎಂದು ಹೇಳಿದರು. ಅದಕ್ಕೆ ಪತ್ರಕರ್ತರು, ‘ಕ್ಷಮಿಸಿ; ಆದರೆ ನಾವು ನಿಮಗೆ ಸಾಮಾಜಿಕ ಜಾಲತಾಣಗಳ ವಿಷಯದ ಬಗ್ಗೆ ಮಾತನಾಡಲು ಹೇಳಲಿಲ್ಲ’ ಎಂದು ಆಸಿಫ್ ಗೆ ಛೀಮಾರಿ ಹಾಕಿದರು.

ಚೀನಾ ಉಪಕರಣಗಳನ್ನು ಬಳಸಲಾಗಿದೆಯೇ?

‘ಭಾರತದ ವಿಮಾನವನ್ನು ಹೊಡೆದುರುಳಿಸಲು ಚೀನಾ ಉಪಕರಣಗಳನ್ನು ಬಳಸಲಾಗಿದೆಯೇ?’ ಎಂದು ಆಸಿಫ್ ಗೆ ಕೇಳಿದಾಗ ಅವರು ಅದನ್ನು ಅಲ್ಲಗಳೆದರು. ಚೀನಾ ಉಪಕರಣಗಳಲ್ಲ. ನಮ್ಮಲ್ಲಿ ‘ಜೆಎಫ್-17’ ಮತ್ತು ‘ಜೆಎಫ್-10’ ಎಂಬ ಚೀನಾ ವಿಮಾನಗಳಿವೆ; ಆದರೆ ಅವುಗಳನ್ನು ಈಗ ಪಾಕಿಸ್ತಾನದಲ್ಲಿಯೇ ತಯಾರಿಸಲಾಗುತ್ತಿದೆ. ಭಾರತವು ಫ್ರಾನ್ಸ್ ನಿಂದ ವಿಮಾನಗಳನ್ನು ಖರೀದಿಸಿ ಬಳಸಬಹುದಾದರೆ, ನಾವು ಚೀನಾ, ರಷ್ಯಾ, ಅಮೇರಿಕ ಅಥವಾ ಬ್ರಿಟನ್ನಿಂದ ವಿಮಾನಗಳನ್ನು ಖರೀದಿಸಿ ಬಳಸಬಲ್ಲೆವು.

ಪಾಕಿಸ್ತಾನವು ಭಾರತದ ಸೈನಿಕ ನೆಲೆಗಳ ಮೇಲೆ ದಾಳಿ ಮಾಡುತ್ತದೆ!

ನಾವು ಭಾರತದ ಕೇವಲ ಸೈನಿಕ ನೆಲೆಗಳ ಮೇಲೆ ಮಾತ್ರ ದಾಳಿ ಮಾಡುತ್ತೇವೆ, ನಾಗರಿಕ ವಸತಿಗಳ ಮೇಲಲ್ಲ. ಯುದ್ಧವಾದರೆ ಪಾಕಿಸ್ತಾನವು ಅಂತರರಾಷ್ಟ್ರೀಯ ಕಾನೂನುಗಳನ್ನು ಪಾಲಿಸುತ್ತದೆ ಎಂದು ಆಸಿಫ್ ಹೇಳಿದರು. (ಪಾಕ್ ಮತ್ತು ಕಾನೂನು ಪಾಲನೆ, ಇದು ವಿರೋಧಾಭಾಸ. ಪಾಕಿಸ್ತಾನ ಕಾನೂನು ಪಾಲಿಸುತ್ತಿದ್ದರೆ, ಇಂದು ಅದರ ಸ್ಥಿತಿ ಭಿಕ್ಷೆ ಬೇಡುವ ಸ್ಥಿತಿಗೆ ಬರುತ್ತಿರಲಿಲ್ಲ! – ಸಂಪಾದಕರು)

ಭಾರತದಿಂದ ಚೀನಾ ಸರಕಾರಕ್ಕೆ ಛೀಮಾರಿ!

ಪಾಕಿಸ್ತಾನವು ಭಾರತೀಯ ವಾಯುಪಡೆಯ ವಿಮಾನಗಳನ್ನು ಹೊಡೆದುರುಳಿಸಿದೆ ಎಂಬ ವರದಿಯನ್ನು ಚೀನಾದಲ್ಲಿನ ಭಾರತೀಯ ರಾಯಭಾರಿ ಕಚೇರಿ ನಿರಾಕರಿಸಿದೆ. ಚೀನಾದ ಸರಕಾರಿ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಈ ಕುರಿತು ವರದಿ ಪ್ರಸಾರ ಮಾಡಿತ್ತು. ಈ ಬಗ್ಗೆ ಭಾರತೀಯ ರಾಯಭಾರಿ ಕಚೇರಿ, ಇಂತಹ ತಪ್ಪು ಮಾಹಿತಿಯನ್ನು ಪರಿಶೀಲಿಸಬೇಕು ಮತ್ತು ಅದನ್ನು ಪ್ರಸಾರ ಮಾಡುವ ಮೊದಲು ಅದರ ಮೂಲವನ್ನು ಪರೀಕ್ಷಿಸಬೇಕು ಎಂದು ಹೇಳಿದೆ.

  • ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರಿಂದ ಹಾಸ್ಯಾಸ್ಪದ ಹೇಳಿಕೆ!

  • ‘ಭಾರತವು ರಕ್ತದ ಪ್ರತಿಯೊಂದು ಹನಿಗೂ ಬೆಲೆ ತೆರಬೇಕಾಗುತ್ತದೆ!’

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾರತದ ‘ಆಪರೇಷನ್ ಸಿಂಧೂರ್’ ಬಳಿಕ ಟಿವಿ ಮೇಲೆ ಜನರನ್ನು ಉದ್ದೇಶಿಸಿ ಮಾತನಾಡುತ್ತಾ, ನಾವು ನಮ್ಮ ದೇಶದ ರಕ್ಷಣೆಗಾಗಿ ಕೊನೆಯ ಉಸಿರು ಇರುವವರೆಗೂ ಹೋರಾಡುತ್ತೇವೆ. ಪಾಕಿಸ್ತಾನವು ಭಾರತಕ್ಕೆ ಪ್ರತಿಕ್ರಿಯಿಸಿತು ಮತ್ತು ಕೆಲವೇ ಗಂಟೆಗಳಲ್ಲಿ ಭಾರತವನ್ನು ಹಿಮ್ಮೆಟ್ಟಿಸಿತು. (ಸುಳ್ಳನ್ನು ಆತ್ಮವಿಶ್ವಾಸದಿಂದ ಹೇಳುವುದಕ್ಕೆ ಇದು ಒಂದು ಉತ್ತಮ ಉದಾಹರಣೆಯಾಗಿದೆ! – ಸಂಪಾದಕರು)
ಭಾರತವು ನಮ್ಮ ರಕ್ತದ ಪ್ರತಿಯೊಂದು ಹನಿಗೂ ಬೆಲೆ ತೆರಬೇಕಾಗುತ್ತದೆ. ನಾವು ಕಠಿಣ ಪ್ರತಿಕ್ರಿಯೆ ನೀಡಬಲ್ಲೆವು ಎಂಬುದನ್ನು ನಾವು ಸಾಬೀತುಪಡಿಸಿದ್ದೇವೆ ಎಂದು ಷರೀಫ್ ಹೇಳಿದರು.

ಗಾಜಾದ ಛಾಯಾಚಿತ್ರಗಳನ್ನು ತೋರಿಸಿ ಜನರ ದಿಕ್ಕುತಪ್ಪಿಸುವ ಪ್ರಯತ್ನದಲ್ಲಿ ಪಾಕ್ !

ಪಾಕಿಸ್ತಾನದ ಸಾಮಾಜಿಕ ಜಾಲತಾಣಗಳಲ್ಲಿ ಗಾಜಾದಲ್ಲಿನ ವಿನಾಶದ ಚಿತ್ರಗಳನ್ನು ಪ್ರಸಾರ ಮಾಡಿ, ಭಾರತವು ಪಾಕಿಸ್ತಾನದ ಮುಗ್ಧ ನಾಗರಿಕರು ಮತ್ತು ಮಕ್ಕಳನ್ನು ಗುರಿಯಾಗಿಸಿದೆ ಎಂದು ಹೇಳಲಾಗುತ್ತಿದೆ. ಹಾಗೂ ಭಾರತವನ್ನು ಇಸ್ರೇಲ್ ನೊಂದಿಗೆ ಹೋಲಿಸಲಾಗುತ್ತಿದೆ.

ಭಯೋತ್ಪಾದಕರ ಅಂತ್ಯಕ್ರಿಯೆಗೆ ಪಾಕಿಸ್ತಾನ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರ ಉಪಸ್ಥಿತಿ!

ಭಾರತದ ‘ಆಪರೇಷನ್ ಸಿಂಧೂರ್’ ಮೂಲಕ ಭಯೋತ್ಪಾದಕರ ನೆಲೆಗಳನ್ನು ನಾಶಪಡಿಸಲಾಯಿತು. ಈ ದಾಳಿಯಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರು ಹತರಾದರು. ಗಾಯಗೊಂಡವರ ವಿಚಾರಣೆಗಾಗಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ ಮುನೀರ್ ಆಸ್ಪತ್ರೆಗೆ ಭೇಟಿ ನೀಡಿದ ದೃಶ್ಯವನ್ನು ಇಡೀ ಜಗತ್ತೇ ನೋಡಿದೆ. ಭಾರತದ ಕಾರ್ಯಾಚರಣೆಯಲ್ಲಿ ಹತರಾದ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಅಸೀಮ ಮುನೀರ್ ಹಾಗೂ ಇತರ ಸೇನಾಧಿಕಾರಿಗಳು ಪ್ರಾರ್ಥನೆ ಮಾಡುತ್ತಿರುವ ಚಿತ್ರಗಳು ಪ್ರಸಾರವಾಗಿವೆ.

ಸಂಪಾದಕೀಯ ನಿಲುವು

ಇದರಿಂದ ‘ಪಾಕಿಸ್ತಾನ ಭಯೋತ್ಪಾದಕರಿಗೆ ಅಲ್ಲಿನ ಸರಕಾರ ಮತ್ತು ಸೈನ್ಯದ ಸಂಪೂರ್ಣ ಬೆಂಬಲವಿದೆ’ ಎಂಬುದು ಸ್ಪಷ್ಟವಾಗುತ್ತದೆ. ವಿಶ್ವಸಂಸ್ಥೆ ಮತ್ತು ಇತರ ಜಾಗತಿಕ ಸಮುದಾಯವು ಇದನ್ನು ಗಮನದಲ್ಲಿಟ್ಟುಕೊಂಡು ಈಗಲಾದರೂ ಪಾಕಿಸ್ತಾನವನ್ನು ‘ಭಯೋತ್ಪಾದಕ ದೇಶ’ ಎಂದು ಘೋಷಿಸಬೇಕು!

‘ಪಾಕಿಸ್ತಾನದ ಮೇಲಿನ ದಾಳಿಗೆ ಸೇಡು ತೀರಿಸಿಕೊಳ್ಳುತ್ತೇವೆ!’ – ಅಲ್-ಖೈದಾ ಹೇಳಿಕೆ

ಭಯೋತ್ಪಾದಕ ಸಂಘಟನೆ ಅಲ್-ಖೈದಾದ ಭಾರತೀಯ ಉಪಖಂಡದ ಶಾಖೆಯಾದ ‘ಅಲ್-ಖೈದಾ ಇನ್ ಇಂಡಿಯನ್ ಸಬ್ ಕಾಂಟಿನೆಂಟ್’ ಭಾರತವು ಇಸ್ಲಾಮ್ ವಿರುದ್ಧ ಯುದ್ಧ ಸಾರಿದೆ ಎಂದು ಆರೋಪಿಸಿದೆ. ಪ್ರತಿಯೊಂದು ದೌರ್ಜನ್ಯಕ್ಕೂ ಸೇಡು ತೀರಿಸಿಕೊಳ್ಳುವವರೆಗೂ ನಾವು ಹೋರಾಡುತ್ತೇವೆ, ನಾವು ಅಲ್ಲಾಹನಿಗೆ ಸೇರಿದವರು ಮತ್ತು ಅಲ್ಲಾಹನ ಮೇಲೆ ಪ್ರಮಾಣ ಮಾಡುತ್ತೇವೆ ಎಂದು ಹೇಳಿದೆ. (ಯಾವ ಸಂಘಟನೆಯ ಅಸ್ತಿತ್ವವೇ ನಾಶವಾಗುತ್ತಿದೆಯೋ, ಆ ಸಂಘಟನೆಯು ಸೇಡು ತೀರಿಸಿಕೊಳ್ಳುತ್ತದೆಯೇ? ತನ್ನ ಅಸ್ತಿತ್ವವನ್ನು ತೋರಿಸಿಕೊಳ್ಳಲು ಇಂತಹ ಹೇಳಿಕೆಗಳನ್ನು ಈ ಸಂಘಟನೆ ನೀಡುತ್ತಿದೆ! – ಸಂಪಾದಕರು)

ಸಂಪಾದಕೀಯ ನಿಲುವು

ಪಾಕಿಸ್ತಾನ ರಕ್ಷಣಾ ಸಚಿವರ ಈ ಹೇಳಿಕೆಯಿಂದ ಅವರ ಬುದ್ಧಿವಂತಿಕೆಗೆ ಎಷ್ಟು ದಯೆ ತೋರಿಸಿದರೂ ಕಡಿಮೆಯೇ. ಇಂತಹ ಪಾಕಿಸ್ತಾನಿಗಳು ‘ಗಜ್ವಾ-ಎ-ಹಿಂದ್’ ಮಾಡುತ್ತಾರಂತೆ!