
(ಟಿಪ್ಪಣಿ : ಹಸ್ತಸಾಮುದ್ರಿಕಾ ಶಾಸ್ತ್ರವೆಂದರೆ ವ್ಯಕ್ತಿಯ ಮುಖಚರ್ಯೆ, ಕೈಗಳು, ಕಾಲುಗಳು ಮುಂತಾದ ದೇಹದ ವಿವಿಧ ಭಾಗಗಳಿಂದ ವ್ಯಕ್ತಿಯ ಗುಣವೈಶಿಷ್ಟ್ಯಗಳು ಮತ್ತು ಅವನ ಭವಿಷ್ಯವನ್ನು ಅಧ್ಯಯನ ಮಾಡುವ ಶಾಸ್ತ್ರ)
೧. ಕೆಲವು ವ್ಯಕ್ತಿಗಳ ಕೈಯ ಹೆಬ್ಬೆರಳು ಹಿಂದಕ್ಕೆ ಬಾಗುತ್ತದೆ. ಇದು ಏನನ್ನು ಸೂಚಿಸುತ್ತದೆ ?
ಉತ್ತರ : ವ್ಯಕ್ತಿಯ ಕೈಯ ಹೆಬ್ಬೆರಳು ಹಿಂದೆ ಬಾಗುತ್ತಿದ್ದರೆ, ಇಂತಹ ವ್ಯಕ್ತಿ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾನೆ. ಅವನ ವೃತ್ತಿ ತ್ಯಾಗಮಯವಾಗಿರುತ್ತದೆ, ಹಾಗೆಯೇ ಅವನಲ್ಲಿ ಅಹಂ ಕಡಿಮೆ ಇರುತ್ತದೆ; ಆದರೆ ಹೆಬ್ಬೆರಳು ಬಹಳ ಹಿಂದೆ ಬಾಗುತ್ತಿದ್ದರೆ, ಇತರ ಜನರು ಸಂಬಂಧಪಟ್ಟ ವ್ಯಕ್ತಿಯ ದುರುಪಯೋಗಪಡಿಸಿಕೊಳ್ಳುತ್ತಾರೆ. ಇಂತಹ ವ್ಯಕ್ತಿ ನಿರುತ್ಸಾಹಿ ಮತ್ತು ಸೋಮಾರಿ ಅಗಿರುತ್ತಾನೆ. ಅವನ ಇಚ್ಛಾಶಕ್ತಿ ದುರ್ಬಲವಾಗಿರುತ್ತದೆ, ಹಾಗೆಯೇ ಅವನ ಮನಸ್ಸು ಚಂಚಲವಾಗಿರುತ್ತದೆ. ಅವನಲ್ಲಿ ಆತ್ಮವಿಶ್ವಾಸ ಕಡಿಮೆ ಇರುತ್ತದೆ.

೨. ಕೆಲವು ವ್ಯಕ್ತಿಗಳ ಕೈಯ ಹೆಬ್ಬೆರಳು ಹಿಂದೆ ಬಾಗದೇ ನೇರವಾಗಿರುತ್ತದೆ, ಇದು ಏನನ್ನು ಸೂಚಿಸುತ್ತದೆ ?
ಉತ್ತರ : ವ್ಯಕ್ತಿಯ ಕೈಯ ಹೆಬ್ಬೆರಳು ಹಿಂದೆ ಬಾಗದೇ ನೇರವಾಗಿದ್ದರೆ, ಇಂತಹ ವ್ಯಕ್ತಿಯಲ್ಲಿ ಪ್ರಬಲ ಇಚ್ಛಾಶಕ್ತಿ ಮತ್ತು ಆತ್ಮವಿಶ್ವಾಸ ಇರುತ್ತದೆ. ಅವನು ಕಾರ್ಯತತ್ಪರ ಮತ್ತು ಗುರಿ ಸಾಧಿಸುವವನಾಗಿರುತ್ತಾನೆ. ಇಂತಹ ವ್ಯಕ್ತಿ ಧೈರ್ಯಶಾಲಿಯಾಗಿದ್ದು ನಿರ್ಧರಿಸಿದ ಕೆಲಸವನ್ನು ಖಂಡಿತವಾಗಿಯೂ ಪೂರ್ಣಗೊಳಿಸುತ್ತಾನೆ; ಆದರೆ ಇಂತಹ ವ್ಯಕ್ತಿಯ ವಿಚಾರಧಾರೆ ನಕಾರಾತ್ಮಕವಾಗಿದ್ದರೆ, ಅವನು ಅಷ್ಟೇ ಹುಮ್ಮಸ್ಸಿನಿಂದ ತಪ್ಪು ಕೆಲಸಗಳನ್ನೂ ಮಾಡುತ್ತಾನೆ. ಅವನು ಹಠಮಾರಿ, ಅವಿಚಾರಿ ಮತ್ತು ಅಹಂಕಾರಿಯಾಗ ಬಹುದು. ಆದುದರಿಂದ ಬಲವಾದ ಮತ್ತು ಹಿಂದೆ ಬಾಗದ ಹೆಬ್ಬೆರಳಿರುವ ವ್ಯಕ್ತಿಗಳು ಸಕಾರಾತ್ಮಕವಾಗಿ ವಿಚಾರ ಮಾಡುವುದು ಆವಶ್ಯಕವಾಗಿದೆ.

– ಹಸ್ತರೇಖಾತಜ್ಞೆ ಸುನೀತಾ ಶುಕ್ಲಾ, ಋಷಿಕೇಶ. (೨೨.೨.೨೦೨೫)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !