
(ಟಿಪ್ಪಣಿ : ಹಸ್ತಸಾಮುದ್ರಿಕಾ ಶಾಸ್ತ್ರವೆಂದರೆ ವ್ಯಕ್ತಿಯ ಮುಖಚರ್ಯೆ, ಕೈಗಳು, ಕಾಲುಗಳು ಮುಂತಾದ ದೇಹದ ವಿವಿಧ ಭಾಗಗಳಿಂದ ವ್ಯಕ್ತಿಯ ಗುಣವೈಶಿಷ್ಟ್ಯಗಳು ಮತ್ತು ಅವನ ಭವಿಷ್ಯವನ್ನು ಅಧ್ಯಯನ ಮಾಡುವ ಶಾಸ್ತ್ರ)
೧. ಕೆಲವು ವ್ಯಕ್ತಿಗಳ ಕೈಯ ಹೆಬ್ಬೆರಳು ಹಿಂದಕ್ಕೆ ಬಾಗುತ್ತದೆ. ಇದು ಏನನ್ನು ಸೂಚಿಸುತ್ತದೆ ?
ಉತ್ತರ : ವ್ಯಕ್ತಿಯ ಕೈಯ ಹೆಬ್ಬೆರಳು ಹಿಂದೆ ಬಾಗುತ್ತಿದ್ದರೆ, ಇಂತಹ ವ್ಯಕ್ತಿ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾನೆ. ಅವನ ವೃತ್ತಿ ತ್ಯಾಗಮಯವಾಗಿರುತ್ತದೆ, ಹಾಗೆಯೇ ಅವನಲ್ಲಿ ಅಹಂ ಕಡಿಮೆ ಇರುತ್ತದೆ; ಆದರೆ ಹೆಬ್ಬೆರಳು ಬಹಳ ಹಿಂದೆ ಬಾಗುತ್ತಿದ್ದರೆ, ಇತರ ಜನರು ಸಂಬಂಧಪಟ್ಟ ವ್ಯಕ್ತಿಯ ದುರುಪಯೋಗಪಡಿಸಿಕೊಳ್ಳುತ್ತಾರೆ. ಇಂತಹ ವ್ಯಕ್ತಿ ನಿರುತ್ಸಾಹಿ ಮತ್ತು ಸೋಮಾರಿ ಅಗಿರುತ್ತಾನೆ. ಅವನ ಇಚ್ಛಾಶಕ್ತಿ ದುರ್ಬಲವಾಗಿರುತ್ತದೆ, ಹಾಗೆಯೇ ಅವನ ಮನಸ್ಸು ಚಂಚಲವಾಗಿರುತ್ತದೆ. ಅವನಲ್ಲಿ ಆತ್ಮವಿಶ್ವಾಸ ಕಡಿಮೆ ಇರುತ್ತದೆ.

೨. ಕೆಲವು ವ್ಯಕ್ತಿಗಳ ಕೈಯ ಹೆಬ್ಬೆರಳು ಹಿಂದೆ ಬಾಗದೇ ನೇರವಾಗಿರುತ್ತದೆ, ಇದು ಏನನ್ನು ಸೂಚಿಸುತ್ತದೆ ?
ಉತ್ತರ : ವ್ಯಕ್ತಿಯ ಕೈಯ ಹೆಬ್ಬೆರಳು ಹಿಂದೆ ಬಾಗದೇ ನೇರವಾಗಿದ್ದರೆ, ಇಂತಹ ವ್ಯಕ್ತಿಯಲ್ಲಿ ಪ್ರಬಲ ಇಚ್ಛಾಶಕ್ತಿ ಮತ್ತು ಆತ್ಮವಿಶ್ವಾಸ ಇರುತ್ತದೆ. ಅವನು ಕಾರ್ಯತತ್ಪರ ಮತ್ತು ಗುರಿ ಸಾಧಿಸುವವನಾಗಿರುತ್ತಾನೆ. ಇಂತಹ ವ್ಯಕ್ತಿ ಧೈರ್ಯಶಾಲಿಯಾಗಿದ್ದು ನಿರ್ಧರಿಸಿದ ಕೆಲಸವನ್ನು ಖಂಡಿತವಾಗಿಯೂ ಪೂರ್ಣಗೊಳಿಸುತ್ತಾನೆ; ಆದರೆ ಇಂತಹ ವ್ಯಕ್ತಿಯ ವಿಚಾರಧಾರೆ ನಕಾರಾತ್ಮಕವಾಗಿದ್ದರೆ, ಅವನು ಅಷ್ಟೇ ಹುಮ್ಮಸ್ಸಿನಿಂದ ತಪ್ಪು ಕೆಲಸಗಳನ್ನೂ ಮಾಡುತ್ತಾನೆ. ಅವನು ಹಠಮಾರಿ, ಅವಿಚಾರಿ ಮತ್ತು ಅಹಂಕಾರಿಯಾಗ ಬಹುದು. ಆದುದರಿಂದ ಬಲವಾದ ಮತ್ತು ಹಿಂದೆ ಬಾಗದ ಹೆಬ್ಬೆರಳಿರುವ ವ್ಯಕ್ತಿಗಳು ಸಕಾರಾತ್ಮಕವಾಗಿ ವಿಚಾರ ಮಾಡುವುದು ಆವಶ್ಯಕವಾಗಿದೆ.

– ಹಸ್ತರೇಖಾತಜ್ಞೆ ಸುನೀತಾ ಶುಕ್ಲಾ, ಋಷಿಕೇಶ. (೨೨.೨.೨೦೨೫)
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು