
೧. ಬ್ರಹ್ಮೋತ್ಸವದ ಸಮಯದಲ್ಲಿ ಆದ ಭೇಟಿಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧನೆಯ ಕುರಿತು ಮಾರ್ಗದರ್ಶನ ಮಾಡುವುದು
‘ಸಪ್ತರ್ಷಿಗಳ ಆಜ್ಞೆಯಂತೆ ೨೦೨೩ ರ ಮೇ ತಿಂಗಳಿನಲ್ಲಿ ಪರಾತ್ಪರ ಗುರು ಆಠವಲೆಯವರ ‘ಬ್ರಹ್ಮೋತ್ಸವ’ವನ್ನು ಆಚರಿಸಲಾಯಿತು. ಆ ಅವಧಿಯಲ್ಲಿ ನಾನು ರಾಮನಾಥಿ ಆಶ್ರಮದಲ್ಲಿದ್ದೆನು. ಆ ಸಮಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (ಪರಾತ್ಪರ ಗುರು ಡಾ. ಆಠವಲೆ)ಯವರು ಎಲ್ಲ ಸಂತರನ್ನು ಭೇಟಿಯಾದರು. ಆ ಸಮಯದಲ್ಲಿ ನಾನೂ ಇದ್ದೆನು. ಸಾಧನೆಯ ಕುರಿತು ಮಾರ್ಗದರ್ಶನ ಮಾಡುವಾಗ ಅವರು ನನಗೆ ಕಳೆದ ೬ ವರ್ಷಗಳಲ್ಲಿ ನನ್ನ ಸಾಧನೆಯಲ್ಲಿ ಬಂದ ನಿರುತ್ಸಾಹ ಮತ್ತು ಅದರ ಪರಿಣಾಮವಾಗಿ ನನ್ನ ಸಾಧನೆಯಲ್ಲಿ ಆದ ಕುಸಿತದ ಬಗ್ಗೆ ಸ್ಪಷ್ಟವಾಗಿ ಅರಿವು ಮಾಡಿಕೊಟ್ಟರು. ಅವರ ಶಬ್ದಗಳು ರಾಮಬಾಣದಂತೆ ನನ್ನ ಸುತ್ತಲಿರುವ ದಟ್ಟ ಆವರಣವನ್ನು ಭೇದಿಸಿ ಹೋದವು. ಅವರು ನನಗೆ ಆತ್ಮಪರೀಕ್ಷಣೆ ಮಾಡುವುದೊಂದಿಗೆ ಇತರ ಸಮಷ್ಟಿ ಸಂತರಿಂದ ಕಲಿಯಲು ಹೇಳಿದರು.
೨. ಪರಾತ್ಪರ ಗುರು ಡಾಕ್ಟರರು ‘ಸತತ ಕಲಿಯುವ ಸ್ಥಿತಿಯಲ್ಲಿರಬೇಕು’, ಎಂದು ಹೇಳಿ ಜಾಗೃತಗೊಳಿಸುವುದು
ಅನಂತರ ಪರಾತ್ಪರ ಗುರು ಡಾಕ್ಟರರು ನನ್ನ ಕಣ್ಣೀರನ್ನು ನೋಡಿ ‘ಅದು ಭಾವದಿಂದ ಬಂದಿದೆಯೋ ಅಥವಾ ದುಃಖದಿಂದ ?’, ಎಂದು ಕೇಳಿದರು. ಇದರಿಂದ ಅವರು ನನಗೆ ‘ಸತತ ಕಲಿಯುವ ಸ್ಥಿತಿಯಲ್ಲಿರಬೇಕು’, ಎಂದು ಸೂಚಿಸಿ ಜಾಗೃತಗೊಳಿಸಿದರು. ‘ಭಾವಜಾಗೃತಿ ಆಗುವುದರಿಂದ ಬಂದ ಕಣ್ಣೀರು ತಣ್ಣಗೆ ಮತ್ತು ಹಗುರವಾಗಿರುತ್ತವೆ ಮತ್ತು ಇತರ ಸಮಯದಲ್ಲಿ ಅದು ಬಿಸಿ ಇರುತ್ತದೆ’ ಇದು ನನಗೆ ಗೊತ್ತಿತ್ತು. ಈಗ ಬಂದಿರುವ ಕಣ್ಣೀರು ದುಃಖ ಮತ್ತು ಪಶ್ಚಾತ್ತಾಪದಿಂದ ಬಂದಿರುವುದರಿಂದ ಅದು ಬೆಚ್ಚಗಿತ್ತು.
೩. ಸಾಧನೆಯ ಕಡೆಗೆ ನಿರ್ಲಕ್ಷಿಸಿದ ಸಂದರ್ಭದಲ್ಲಿ ಮಾಡಿದ ಆತ್ಮನಿರೀಕ್ಷಣೆ
೩ ಅ. ಸಂಸಾರದ ಕರ್ತವ್ಯಗಳಲ್ಲಿ ಹೆಚ್ಚು ನಿರತವಾಗಿರುವುದು : ಕಳೆದ ಕೆಲವು ವರ್ಷಗಳಿಂದ ನಾನು ‘ಸಂಬಂಧಿಕರ ಆರೋಗ್ಯದ ಬಗೆಗಿನ ಸಮಸ್ಯೆಗಳು ಮತ್ತು ನನ್ನ ಹೆಣ್ಣುಮಕ್ಕಳ ಹೆರಿಗೆ ಸಮಯದಲ್ಲಿ ಅವರ ಕಾಳಜಿ ತೆಗೆದುಕೊಳ್ಳುವುದು’ ಇಂತಹ ಸಂಸಾರದ ಕರ್ತವ್ಯಗಳಲ್ಲಿ ಹೆಚ್ಚು ನಿರತಳಾಗಿದ್ದೆನು. ಆದ್ದರಿಂದ ನನ್ನ ಸಾಧನೆಯ ಕಡೆಗೆ ದುರ್ಲಕ್ಷವಾಯಿತು. ಈಗ ಕೇವಲ ಗುರುದೇವರ ಕೃಪೆಯಿಂದ ನಾನು ಆತ್ಮಪರೀಕ್ಷಣೆ ಮಾಡಿ ನನಗೆ ನನ್ನ ಸಾಧನೆಯಲ್ಲಿ ಅಧೋಗತಿಗೆ ಕಾರಣವಾಗಿರುವ ಅಂಶಗಳ ಬಗ್ಗೆ ಬರೆದು ಕೊಡಲು ಸಾಧ್ಯವಾಯಿತು.
೩ ಆ. ಸಾಧನೆಯತ್ತ ಗಮನ ಹರಿಸಿದ್ದರಿಂದಲೇ ‘ದೇವರು ಸಾಧನೆ ಮತ್ತು ಸಂಸಾರ ಈ ಎರಡೂ ಕಾಳಜಿಯನ್ನು ತೆಗೆದುಕೊಳ್ಳುವುದು’ : ನಾನು ದೇವರ ಮತ್ತು ಗುರುಗಳ ಬಗ್ಗೆ ಇರುವ ನನ್ನ ಕರ್ತವ್ಯಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದೆನು. ಆಗ ನನ್ನ ಸಂಸಾರದ ಕರ್ತವ್ಯಗಳೂ ಅತ್ಯಂತ ಒಳ್ಳೆಯ ರೀತಿಯಲ್ಲಿ ಮತ್ತು ಸರಾಗವಾಗಿ ನಿರ್ವಹಿಸಿದೆನು; ಆದರೆ ಯಾವಾಗ ನಾನು ನನ್ನ ಸಂಸಾರದ ಕರ್ತವ್ಯಗಳ ಮೇಲೆ ಹೆಚ್ಚು ಗಮನ ಹರಿಸತೊಡಗಿದೆನೋ, ಆಗ ಈ ಎರಡೂ ವಿಷಯಗಳು ಒಳ್ಳೆಯ ರೀತಿಯಲ್ಲಿ ಆಗುವುದಿಲ್ಲ, ವಿಶೇಷವಾಗಿ ‘ನನ್ನ ಸಾಧನೆ ಚೆನ್ನಾಗಿ ಆಗುವುದಿಲ್ಲ’, ಎಂದು ನನ್ನ ಗಮನಕ್ಕೆ ಬಂದಿತು.
೩ ಇ. ಸತ್ಸೇವೆ ಮಾಡದಿರುವುದರಿಂದ ಅದರಿಂದ ದೊರಕುವ ಆನಂದ ವನ್ನು ಕಳೆದುಕೊಳ್ಳುವುದು : ಈ ಹಿಂದೆ ನಾನು ಭೇಟಿ ಮಾಡಲು ಹೊರಗೆ ಹೋದಾಗ ತುಂಬಾ ಆನಂದವನ್ನು ಅನುಭವಿಸುತ್ತಿದ್ದೆನು ಮತ್ತು ಆ ಸೇವೆಯಲ್ಲಿ ನನಗೆ ತುಂಬಾ ಕಲಿಯಲು ಸಿಗುತ್ತಿತ್ತು. ಇತ್ತೀಚೆಗೆ ನಾನು ಧರ್ಮಪ್ರೇಮಿ ಮತ್ತು ಜಿಜ್ಞಾಸುಗಳಿಗೆ ವೈಯಕ್ತಿಕವಾಗಿ ಭೇಟಿಯಾಗಲು ಹೋಗದಿರುವುದರಿಂದ ನನಗೆ ಕಲಿಯಲು ಸಿಗಲಿಲ್ಲ ಮತ್ತು ಅದರಿಂದ ನಾನು ಆನಂದವನ್ನು ಕಳೆದುಕೊಂಡೆನು.
೩ ಈ. ಶರಣಾಗತಿಯ ಅಭಾವದಿಂದ ಮುಖದ ಮೇಲೆ ಒತ್ತಡ ಕಾಣಿಸುವುದು : ನನಗೆ ಯಜಮಾನರ ಆರೋಗ್ಯದ ಬಗ್ಗೆ ಕಾಳಜಿ ಅನಿಸುತ್ತಿತ್ತು. ಆದ್ದರಿಂದ ನನ್ನ ಮುಖದ ಮೇಲೆ ಒತ್ತಡ ಇತ್ತು. ಈ ಅವಧಿಯಲ್ಲಿ ನಾನು ನನ್ನ ಶರಣಾಗತಿ ಮತ್ತು ಆಧ್ಯಾತ್ಮಿಕ ಉಪಾಯಗಳ ಪ್ರಮಾಣ ಹೆಚ್ಚಿಸಿ ಅದರಿಂದ ಹೊರಗೆ ಬರಲು ಪ್ರಯತ್ನಿಸಲಿಲ್ಲ.
೩ ಉ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಸರಿಯಾಗಿ ಮಾಡದಿರುವುದರಿಂದ ಸ್ವಭಾವದೋಷಗಳು ಉಕ್ಕಿ ಬರುವುದು : ನನ್ನಲ್ಲಿನ ‘ಅಪೇಕ್ಷೆ ಪಡುವುದು’ ಈ ದೋಷದಿಂದ ಕೆಲವೊಮ್ಮೆ ನನಗೆ ನನ್ನ ಹೆಣ್ಣುಮಕ್ಕಳ ಬಗ್ಗೆ ತೀವ್ರ ಪ್ರತಿಕ್ರಿಯೆ ಬಂದವು. ನನ್ನ ಸಾಧನೆ ಯೋಗ್ಯ ರೀತಿಯಲ್ಲಿ ಆಗುತ್ತಿಲ್ಲ, ಎಂಬುದನ್ನು ನನ್ನ ಮಗಳು ಗಮನಕ್ಕೆ ತಂದುಕೊಟ್ಟ ನಂತರ ನನಗೆ ಅದನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ ಮತ್ತು ಸಿಟ್ಟು ಬಂದಿತು. ಅಂತರ್ಮುಖವಾಗಿ ವಿಚಾರ ಮಾಡಿದಾಗ ನನ್ನ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆ ಸರಿಯಾಗಿ ಆಗುತ್ತಿಲ್ಲ ಎಂಬುದು ನನಗೆ ಅರಿವಾಯಿತು.
೩ ಊ. ಮಾಯೆಯ ವಿಚಾರಗಳಿಂದ ನಾಮಜಪವು ಏಕಾಗ್ರತೆಯಿಂದ ಆಗದಿರುವುದು : ನನ್ನ ಮನಸ್ಸು ಮಾಯೆಯ ಅನೇಕ ವಿಚಾರಗಳಿಂದ ತುಂಬಿರುವುದರಿಂದ ನನ್ನ ನಾಮಜಪವೂ ಸರಿಯಾಗಿ ಆಗುತ್ತಿರಲಿಲ್ಲ. ಅದರ ಪರಿಣಾಮದಿಂದ ಮನಸ್ಸು ಅಶಾಂತವಾಗಿರುತ್ತಿತ್ತು. ನಿದ್ರೆಯಲ್ಲಿ ಕೆಲವೊಮ್ಮೆ ನನಗೆ ನಿರರ್ಥಕ ಕನಸುಗಳು ಬೀಳುತ್ತಿದ್ದವು. ಆದ್ದರಿಂದ ಎಚ್ಚರವಾದಾಗ ಉತ್ಸಾಹವೆನಿಸುತ್ತಿರಲಿಲ್ಲ.
೩ ಎ. ನಾನು ಸತ್ಸಂಗಗಳಿಗೆ ನಿಯಮಿತವಾಗಿ ಉಪಸ್ಥಿತವಾಗದಿರುವುದರಿಂದ ಅದರಿಂದ ಸಿಗುವ ಚೈತನ್ಯವನ್ನು ಪಡೆಯಲು ಸಾಧ್ಯವಾಗಲಿಲ್ಲ.
೩ ಐ. ಪ್ರಸಾರದಲ್ಲಿನ ಅಡಚಣೆಗಳ ಬಗ್ಗೆ ಕೇಳಿಕೊಳ್ಳದಿರುವುದರಿಂದ ಸಾಧನೆಯ ಒಂದೇ ಹಂತದಲ್ಲಿ ಸಿಲುಕಿರುವುದು : ನಾನು ಸಮಯಕ್ಕೆ ಸರಿಯಾಗಿ ಪ್ರಸಾರದ ವರದಿಯನ್ನು ಕೊಡಲಿಲ್ಲ ಅಥವಾ ಪ್ರಸಾರ, ಅಡೆತಡೆಗಳು ಇತ್ಯಾದಿಗಳ ಬಗ್ಗೆ ಆಶ್ರಮದಿಂದ ಮಾರ್ಗದರ್ಶನವನ್ನೂ ತೆಗೆದುಕೊಳ್ಳಲಿಲ್ಲ. ಆದ್ದರಿಂದ ನನಗೆ ಯಾವುದೇ ಪರಿಹಾರೋಪಾಯಗಳು ದೊರಕಲಿಲ್ಲ ಮತ್ತು ನಾನು ನನ್ನ ಸಾಧನೆಯ ಒಂದೇ ಹಂತದಲ್ಲಿ ಸಿಲುಕಿದೆನು. ಅದರಿಂದ ನನಗೆ ಹೊರಗೆ ಬರಲು ಸಾಧ್ಯವಾಗಲಿಲ್ಲ.
೩ ಓ. ಈ ಹಿಂದೆ ಸತ್ಸೇವೆಯನ್ನು ಮಾಡುವಾಗ ನನಗೆ ತುಂಬಾ ಆಧ್ಯಾತ್ಮಿಕ ಶಕ್ತಿ ಸಿಗುತ್ತಿತ್ತು; ಆದರೆ ಈಗ ನನ್ನ ಸತ್ಸೇವೆಯು ಏಕಾಗ್ರತೆ ಯಿಂದ ಆಗದಿರುವುದರಿಂದ ನನಗೆ ತಕ್ಷಣ ದಣಿವಾಗಿ ನಿದ್ರೆ ಬರುತ್ತದೆ.
೩ ಔ. ಆಶ್ರಮದಲ್ಲಿದ್ದು ಸೇವೆ ಮಾಡುವುದರಿಂದ ಶುದ್ಧಿಯಾಗಿ ಹೊಸ ಶಕ್ತಿ ಸಿಗುವುದು, ಬದಲಾಗಿ ಮನೆಯಲ್ಲಿದ್ದು ಸೇವೆ ಮಾಡಿದ ನಂತರ ಹಾಗೆ ಆಗದರಿವುದು : ಈ ಹಿಂದೆ ನಾನು ಸೇವೆ ಮಾಡುವಾಗ ವಾರವಿಡೀ ಆಶ್ರಮದಲ್ಲಿ ಇರುತ್ತಿದ್ದೆನು. ಆ ಅವಧಿಯಲ್ಲಿ ನಾನು ಬಹಳಷ್ಟು ಮಟ್ಟಿಗೆ ನನ್ನ ಆಧ್ಯಾತ್ಮಿಕದೃಷ್ಟಿಯಲ್ಲಿ ಶುದ್ಧಿಯಾಗಿರುವುದನ್ನು ಅನುಭವಿಸಿ ಹೊಸ ಊರ್ಜೆಯೊಂದಿಗೆ ಮನೆಗೆ ಮರಳುತ್ತಿದ್ದೆನು; ಆದರೆ ಕೊರೋನಾ ಮಹಾಮಾರಿಯಿಂದ ಮತ್ತು ಇತರ ಕೆಲವು ಕಾರಣಗಳಿಂದ ನಾನು ಮನೆಯಲ್ಲಿಯೇ ಇದ್ದು ಈ ಸೇವೆಯನ್ನು ಆನ್ಲೈನ್ ಗಣಕಯಂತ್ರತಂತ್ರಾಂಶದ ಮಾಧ್ಯಮದಿಂದ ಮಾಡುತ್ತಿದ್ದೇನೆ.
೪. ಗುರುದೇವರ ಕೃಪೆಯಿಂದ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಲೇಖನವು ಕಣ್ಣಿಗೆ ಬೀಳುವುದು ಮತ್ತು ಅದರಲ್ಲಿನ ಬರವಣಿಗೆಯನ್ನು ಓದಿ ‘ಈ ಲೇಖನವು ಕೇವಲ ನನಗಾಗಿಯೇ ಬರೆದಿದ್ದಾರೆ’, ಎಂದೆನಿಸುವುದು
ಧರ್ಮಾಭಿಮಾನಿಗಳಿಗೆ ಓದಲು ಆಂಗ್ಲ ಜಾಲತಾಣದಲ್ಲಿ ಕೆಲವು ಲೇಖನಗಳನ್ನು ಸ್ಥಳೀಯ ಭಾಷೆಗಳಲ್ಲಿ ಅನುವಾದ ಮಾಡಲಾಗುತ್ತದೆ. ಅದಕ್ಕಾಗಿ ನಾನು ಲೇಖನಗಳನ್ನು ಹುಡುಕುತ್ತಿದ್ದೆನು. ಆ ಸಮಯದಲ್ಲಿ ಪ.ಪೂ. ಗುರುದೇವರ ಕೃಪೆಯಿಂದ ನನಗೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಎಲ್ಲ ಆಧ್ಯಾತ್ಮಿಕ ಸ್ತರದಲ್ಲಿನ ಸಾಧಕರಿಗೆ ಮಾರ್ಗದರ್ಶನ ಮಾಡುವ ಲೇಖನ ಕಣ್ಣಿಗೆ ಬಿದ್ದಿತು. ಈ ಲೇಖನದಲ್ಲಿ ಅವರು ಮಹತ್ವದ್ದಾಗಿ ಶೇ. ೬೦ ಕ್ಕಿಂತಲೂ ಮುಂದಿನ ಆಧ್ಯಾತ್ಮಿಕ ಮಟ್ಟದಲ್ಲಿನ ಸಾಧಕರಿಗೆ ಅವರಿಗೆ ತಿಳಿಯದೇ ಸಾಧನೆಯಲ್ಲಿ ಬರುವ ಅಡೆತಡೆಗಳ ಬಗ್ಗೆ ಜಾಗರೂಕತೆಯಿಂದಿರಲು ಸೂಚನೆ ಇತ್ತು. ನನಗೆ ‘ಈ ಲೇಖನವು ಕೇವಲ ನನಗಾಗಿಯೇ ಬರೆದಿದ್ದಾರೆ’, ಎಂದೆನಿಸಿತು. ನನಗೆ ‘ನಮ್ಮೆಲ್ಲ ಸಾಧಕರಿಗಾಗಿ ಈ ಮಾರ್ಗದರ್ಶನ ಎಷ್ಟು ಆವಶ್ಯಕ ವಾಗಿದೆ !’, ಎಂಬ ಅರಿವಾಯಿತು; ಆದ್ದರಿಂದ ನಾನು ಎಲ್ಲರಿಗೂ ಉಪಯುಕ್ತವಾಗಲಿ ಎಂದು ಅದರ ಅನುವಾದ ಮಾಡಿದೆನು.
೫. ಪ್ರಾರ್ಥನೆ
ಈ ಅಂಶಗಳನ್ನು ಬರೆದ ನಂತರ ನನಗೆ ಹಗುರವೆನಿಸಿತು ಮತ್ತು ಉತ್ಸಾಹವೆನಿಸಿತು. ನನಗೆ ‘ನನ್ನ ತಲೆಯ ಮೇಲಿನ ಅತೀ ದೊಡ್ಡ ಭಾರವು ಇಳಿಯಿತು’, ಎಂದೆನಿಸಿತು. ‘ಹೇ ಪರಮೇಶ್ವರಾ, ನಾನು ಮಾಡಿದ ಎಲ್ಲ ತಪ್ಪುಗಳಿಗಾಗಿ ನೀನು ಕ್ಷಮಿಸಬೇಕು, ಅದಕ್ಕಾಗಿ ನಾನು ನಿನಗೆ ಶರಣಾಗಿದ್ದೇನೆ. ನಿನ್ನ ರೂಪ ಮತ್ತು ನಿನ್ನ ಶಬ್ದಗಳು ನಿರಂತರ ನನ್ನ ಸ್ಮರಣೆಯಲ್ಲಿರಲಿ ಮತ್ತು ನಿನಗೆ ಅಪೇಕ್ಷಿತ ಇರುವ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ಮಾಡಲು ನನ್ನ ಪ್ರಯತ್ನಗಳನ್ನು ಹೆಚ್ಚಿಸಲು ನನಗೆ ಶಕ್ತಿ ಮತ್ತು ಚೈತನ್ಯ ಸಿಗಲಿ.’
– ಓರ್ವ ಸಂತರು (೧೯.೫.೨೦೨೩)