
ಭಾರತೀಯ ಮೂಲದ ‘ನಾಸಾ’ದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹೋದ್ಯೋಗಿ ಬುಚ್ ಇವರು ೨೮೬ ದಿನಗಳ ಕಾಲ ಬಾಹ್ಯಾಕಾಶದಲ್ಲಿ ಅಕ್ಷರಶಃ ಸಿಲುಕಿದ್ದರು. ಅವರು ಹಲವಾರು ತೊಂದರೆಗಳನ್ನು ಎದುರಿಸಿದರು. ಹೊರಬರಲು ಯಾವುದೇ ದಾರಿ ಇರಲಿಲ್ಲ. ‘ಮನೆಗೆ ಯಾವಾಗ ಮರಳಲು ಸಾಧ್ಯವಿದೆಯಾ ?’ ಅಥವಾ ಇಲ್ಲವಾ ? ಇದರ ಭರವಸೆ ಇರಲಿಲ್ಲ. ಭಯಾನಕ, ಅಪಾಯಕಾರಿ, ಅಸಹನೀಯ, ಒತ್ತಡದಾಯಕ ಆಧಾರವಿಲ್ಲದ ಸ್ಥಿತಿ ! ಅವರು ಭೂಮಿಗೆ ೪ ಸಾವಿರದ ೫೭೬ ಪ್ರದಕ್ಷಿಣೆಗಳನ್ನು ಹಾಕಿದರು, ಅಂದರೆ ೧೨ ಕೋಟಿ ಮೈಲುಗಳಿಗಿಂತಲೂ ಹೆಚ್ಚು ಪ್ರಯಾಣ ಮಾಡಿದರು; ಆದರೆ ಅವರು ಕೊನೆಯವರೆಗೂ ಎದೆಗುಂದಲಿಲ್ಲ. ಅಪೂರ್ಣತೆಯ ಬಗ್ಗೆ ದೂರು ನೀಡದೆ ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ಸಿಲುಕಿದ್ದರೂ ಶಾಂತವಾಗಿ ಕೆಲಸವನ್ನು ಮಾಡುತ್ತಿದ್ದರು. ಅಲ್ಲಿ ಯಾವುದೇ ಆಧಾರ ಇಲ್ಲದಿದ್ದರೂ, ಈ ಗಗನಯಾತ್ರಿಗಳು ತಮ್ಮ ಮಾನಸಿಕ ಬಲದ ಆಧಾರದಲ್ಲಿ ಪರಿಸ್ಥಿತಿಯನ್ನು ಸ್ವೀಕರಿಸಿ ಧೈರ್ಯದಿಂದ, ಶಾಂತವಾಗಿ ಮತ್ತು ಸಂಯಮದಿಂದ ಕಾಯುತ್ತಿದ್ದರು. ಅವರು ತಮ್ಮ ತಾಳ್ಮೆ ಮತ್ತು ಮನೋಧೈರ್ಯವನ್ನು ಕುಂದಲು ಬಿಡಲಿಲ್ಲ. ಅದೇ ಸಮಯದಲ್ಲಿ, ಭೂಮಿಯ ಮೇಲೆ ಅನೇಕ ವಿಜ್ಞಾನಿಗಳು ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಪಣಕ್ಕಿಟ್ಟು ಗಗನನೌಕೆಯನ್ನು ಮರಳಿ ತರಲು ಪ್ರಯತ್ನಿಸುತ್ತಿದ್ದರು. ಕೊನೆಗೆ ಅವರಿಗೆ ಬಿಡುಗಡೆಯ ಮಾರ್ಗ ಸಿಕ್ಕಿತು.
ಧೈರ್ಯದಿಂದ ಇರಬೇಕು !
ಸಮಸ್ತ ಮಾನವಕುಲಕ್ಕ್ಕೆ ಈ ಪ್ರಸಂಗವು ಬಹಳಷ್ಟನ್ನು ಕಲಿಸುತ್ತದೆ. ಸುನಿತಾ ವಿಲಿಯಮ್ಸ್ ಅವರ ಉದಾಹರಣೆಯೊಂದಿಗೆ ಪ್ರತಿಯೊಬ್ಬ ಮನುಷ್ಯನು ತನ್ನ ಆತ್ಮನಿರೀಕ್ಷಣೆ ಮಾಡಿಕೊಳ್ಳಬೇಕು, ಮನೋಧೈರ್ಯವನ್ನು ಪರೀಕ್ಷಿಸಿಕೊಳ್ಳಬೇಕು. ನಾವು ನಮ್ಮ ಸಮಸ್ಯೆಗಳ ಬಗ್ಗೆ ಗೊಣಗುತ್ತಾ ಅದರಲ್ಲಿ ಸಿಲುಕಿದ್ದೇವೆಯೇ ? ನಮ್ಮ ಮುಂದಿರುವ ಜೀವನ, ಉದ್ಭವಿಸಿದ ಪರಿಸ್ಥಿತಿಯನ್ನು ನಮಗೆ ಶಾಂತ ವಾಗಿ ಸ್ವೀಕರಿಸಲು ಸಾಧ್ಯವಾಗುತ್ತಿದೆಯೇ ? ನಾವು ಎಲ್ಲಿ ಸಿಲುಕಿದ್ದೇವೆ ? ಮತ್ತು ಏಕೆ ? ಎಂಬುದರ ಬಗ್ಗೆ ವಿಚಾರ ಮಾಡಬೇಕು. ನಾವು ೧೦ ನಿಮಿಷಗಳ ಕಾಲ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದರೂ ನಮಗೆ ಕಿರಿಕಿರಿ ಆಗುತ್ತದೆ, ೫ ನಿಮಿಷಗಳ ಕಾಲ ವಿದ್ಯುತ್ ಹೋದರೂ ಬೇಸರವಾಗುತ್ತದೆ. ಮನಸ್ಸಿಗೆ ವಿರುದ್ಧವಾದದ್ದು ನಡೆದರೆ ತಾಳ್ಮೆ ತಪ್ಪುತ್ತದೆ. ಜೀವನದಲ್ಲಿ ನಕಾರಾತ್ಮಕ ಪರಿಸ್ಥಿತಿ ಉದ್ಭವಿಸಿದರೆ ನಿರಾಶೆ ಬರುತ್ತದೆ. ೫-೧೦ ನಿಮಿಷಗಳ ಕಾಲ ಯಾವುದಾದರೂ ಕೆಲಸಕ್ಕಾಗಿ ಸಾಲಿನಲ್ಲಿ ನಿಲ್ಲ ಬೇಕಾದರೂ ಅಸ್ವಸ್ಥತೆ ಉಂಟಾಗುತ್ತದೆ. ಇಂತಹ ಒಂದು ಅಥವಾ ಅನೇಕ ಉದಾಹರಣೆಗಳನ್ನು ನೀಡಬಹುದು. ‘ನನ್ನ ಸುಖಕರ ವಾತಾವರಣ (ಕಂಫರ್ಟ್ ಝೋನ್) ಹೇಗೆ ಸುರಕ್ಷಿತವಾಗಿರಬಹುದು ?’ ಹೀಗೆ ಪ್ರತಿಯೊಬ್ಬರೂ ನೋಡುತ್ತಾರೆ; ಏಕೆಂದರೆ ನಿಜ ಹೇಳಬೇಕೆಂದರೆ, ನಾವು ಕೇವಲ ಮತ್ತು ಕೇವಲ ಸಿಲುಕಿಕೊಂಡಿರುವುದು ನಮ್ಮ ಮನಸ್ಸಿನ ೪ ಗೋಡೆಗಳ ಮಧ್ಯೆ ! ಆ ಚೌಕಟ್ಟನ್ನು ಮುರಿಯುವುದರ ಅವಶ್ಯಕತೆ ಇದೆ’ !
ಸುನಿತಾ ವಿಲಿಯಮ್ಸ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗುವಾಗ ತಮ್ಮೊಂದಿಗೆ ಶ್ರೀ ಗಣೇಶನ ವಿಗ್ರಹವನ್ನು ತೆಗೆದುಕೊಂಡು ಹೋಗಿದ್ದರು. ಇದರಿಂದ ಅವರ ಶ್ರೀ ಗಣೇಶನ ಮೇಲಿನ ಶ್ರದ್ಧೆ ಎದ್ದು ಕಾಣುತ್ತದೆ. ಆ ಶ್ರದ್ಧೆಯಿಂದಲೇ ಅವರು ೨೮೬ ದಿನಗಳ ಅನಿಶ್ಚಿತ ಅವಧಿಯನ್ನು ಯಶಸ್ವಿಯಾಗಿ ಪೂರೈಸಿರಬೇಕು !
ಈ ಗಗನಯಾತ್ರಿಗಳು ೮ ದಿನಗಳ ಬಾಹ್ಯಾಕಾಶ ಯಾನಕ್ಕೆ ಹೋಗಿ ೯ ತಿಂಗಳು ಬಾಹ್ಯಾಕಾಶದಲ್ಲಿ ಉಳಿಯಲು ಸಾಧ್ಯವಾದರೆ, ನಾವು ನಮ್ಮ ಜೀವನದ ಕೆಲವು ಸಣ್ಣ ಪ್ರಸಂಗಗಳು, ವಿಳಂಬಗಳು ಮತ್ತು ಹೋರಾಟಗಳನ್ನು ಖಂಡಿತವಾಗಿಯೂ ಯಶಸ್ವಿಯಾಗಿ ನಿಭಾಯಿಸಬಹುದು !
ನಾವು ಸಹ ತೊಂದರೆಗಳನ್ನು ಜಯಿಸಬಹುದು ! ಅದಕ್ಕಾಗಿ ಏನು ಮಾಡಬೇಕು ? ನಮ್ಮ ಆಯೋಜನೆಯ ಪ್ರಕಾರ ಎಲ್ಲವೂ ನಡೆಯುತ್ತದೆ ಎಂದೇನಿಲ್ಲ; ಆದರೆ ತಾಳ್ಮೆ ಇದ್ದರೆ ದಾರಿ ಸಿಗುತ್ತದೆ. ಕೆಲವು ಬಾರಿ ಪರಿಸ್ಥಿತಿ ನಮ್ಮ ಕೈಯಲ್ಲಿ ಇರುವುದಿಲ್ಲ; ಆದರೆ ನಮ್ಮ ಪ್ರತಿಕ್ರಿಯೆ ಮಾತ್ರ ನಮ್ಮ ಕೈಯಲ್ಲಿರುತ್ತದೆ ! ಶಾಂತವಾಗಿ ‘ಮುಂದೇನು ಮಾಡಬಹುದು ?’ ಎಂಬುದರ ಮೇಲೆ ಗಮನ ಕೊಡಬೇಕು. ಅಂತಿಮ ಗುರಿಯನ್ನು ಕಣ್ಣುಗಳ ಮುಂದೆ ಇಟ್ಟುಕೊಂಡು ‘ಕಷ್ಟದ ಪರಿಸ್ಥಿತಿಯಲ್ಲಿಯೂ ದಾರಿ ಕಂಡು ಕೊಳ್ಳಲೇಬೇಕು’ ಎಂಬ ದೃಢ ನಿಶ್ಚಯ ಮಾಡಬೇಕು. ಅದಕ್ಕಾಗಿಯೇ ಹೇಳುತ್ತಾರೆ, ‘ಪ್ರಾಪ್ತ ಪರಿಸ್ಥಿತಿಯನ್ನು ಎದುರಿಸುವುದು ಕೇವಲ ಶ್ರದ್ಧೆ ಮತ್ತು ಸಮಾಧಾನದಿಂದ ಮಾತ್ರ ಸಾಧ್ಯವಾಗುತ್ತದೆ’ !
– ಶ್ರೀಮತಿ ಧನಶ್ರೀ ದೇಶಪಾಂಡೆ, ಸನಾತನ ಆಶ್ರಮ, ರಾಮನಾಥಿ, ಗೋವಾ.