ಕಾಮನೆಗಳನ್ನು ತ್ಯಜಿಸುವುದರಲ್ಲೇ ಮನುಷ್ಯನ ಹಿತ !

ಪ.ಪೂ. ಸ್ವಾಮಿ ವರದಾನಂದ ಭಾರತಿಯವರ ಧರ್ಮದ ಬಗ್ಗೆ ಅಮೂಲ್ಯ ಮಾರ್ಗದರ್ಶನ !

ಪ.ಪೂ. ಸ್ವಾಮಿ ವರದಾನಂದ ಭಾರತಿ

ಪ್ರಶ್ನೆ : ಕಿಂ ನು ಹಿತ್ವಾ ಅರ್ಥವಾನ್‌ ಭವತಿ ?
ಅರ್ಥ : ಮನುಷ್ಯನ ಹಿತಕ್ಕಾಗಿ ಯಾವುದನ್ನು ತ್ಯಜಿಸಬೇಕು ?
ಉತ್ತರ : ಕಾಮಂ ಹಿತ್ವಾ ಅರ್ಥವಾನ್‌ ಭವತಿ |
ಕಾಮನೆಗಳನ್ನು ತ್ಯಾಗ ಮಾಡು ವುದರಲ್ಲೇ ಮನುಷ್ಯನ ಹಿತವಿದೆ.

‘ಕಾಮ’ ಎಂಬ ಪದವನ್ನು ಸಾಮಾನ್ಯವಾಗಿ ಅರ್ಥೈಸಿದಂತೆ ಕೇವಲ ಲೈಂಗಿಕತೆಗೆ ಸೀಮಿತಗೊಳಿಸಬಾರದು. ಯಾವುದೇ ಇಚ್ಛೆ, ಕಾಮನೆ, ವಾಸನಾ ಇವು ಕಾಮ ಶಬ್ದದ ವ್ಯಾಪಕ ಅರ್ಥದಲ್ಲಿ ಸೇರಿಕೊಳ್ಳುತ್ತದೆ. ಪಂಚಜ್ಞಾನೇಂದ್ರಿಯಗಳಿಗೆ ಸುಖವೆನಿಸುವ ಶಬ್ದ-ಸ್ಪರ್ಶ-ರೂಪ-ರಸ-ಗಂಧ ಮುಂತಾದವುಗಳ ಬಗೆಗಿನ ಆಸೆಯೇ ಕಾಮ. ಕಾಮದ ನಿಜವಾದ ಸ್ವರೂಪವು ಅಗತ್ಯಕ್ಕಿಂತ ಹೆಚ್ಚಿನ ಕಾಮನೆಗಳಿಂದ ವ್ಯಕ್ತವಾಗುತ್ತದೆ ಮತ್ತು ಈ ರೀತಿಯ ಕಾಮವು ಎಂದಿಗೂ ತೃಪ್ತವಾಗುವುದಿಲ್ಲ.

ನ ಜಾತು ಕಾಮಃ ಕಾಮಾನಾಮ್‌ ಉಪಭೋಗೇನ ಶಾಮ್ಯತಿ |
ಹವಿಷಾ ಕೃಷ್ಣವರ್ತ್ಮೇವ ಭೂಯ ಏವಾಭಿವರ್ಧತೇ ||
– ಶ್ರೀಮದ್ಭಾಗವತ, ಸ್ಕಂಧ ೯, ಅಧ್ಯಾಯ ೧೯, ಶ್ಲೋಕ ೧೪

ಅರ್ಥ : ಸುಖಗಳನ್ನು ಉಪಭೋಗಿಸುವುದರಿಂದ ವಿಷಯಾಸಕ್ತಿಯ ತೃಪ್ತಿಯಾಗುವುದಿಲ್ಲ, ಆದರೆ ಹವನದ್ರವ್ಯದಿಂದ ಹೇಗೆ ಅಗ್ನಿ ಪ್ರಜ್ವಲಿಸುತ್ತದೆಯೋ, ಅದೇ ರೀತಿ ಉಪಭೋಗದಿಂದ ವಿಷಯವಾಸನಾ ಮತ್ತಷ್ಟು ಹೆಚ್ಚಾಗುತ್ತದೆ.

ಈ ರೀತಿಯ ಕಾಮಪ್ರವೃತ್ತಿಯು ಮನುಷ್ಯನ ದೈಹಿಕ, ಮಾನಸಿಕ, ಕೌಟುಂಬಿಕ ಮತ್ತು ಸಾಮಾಜಿಕ ಹಿತವನ್ನು ನಾಶಪಡಿಸುತ್ತದೆ. ಕಾಮವು ವ್ಯಸನವಾಗಿ ಬದಲಾಗುತ್ತದೆ, ಹಾಗೆ ಆದರೆ ಸಂಪತ್ತಿನ ನಾಶವೂ ಆಗುತ್ತದೆ.

– ಪ.ಪೂ. ಸ್ವಾಮಿ ವರದಾನಂದ ಭಾರತಿ

(ಸಂಗ್ರಹ: ಗ್ರಂಥ ‘ಯಕ್ಷಪ್ರಶ್ನೆ’)