ಅಗ್ಗದ ಪ್ರಚಾರಕ್ಕಾಗಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಉತ್ತರ ಪ್ರದೇಶದ ಉಚ್ಚ ನ್ಯಾಯಾಲಯದ ಕಪಾಳಮೋಕ್ಷ

೧. ಪ್ರಯಾಗರಾಜದ ಮಹಾಕುಂಭಮೇಳದಿಂದ ಸುಮಾರು ೩ ಲಕ್ಷ ಕೋಟಿ ರೂಪಾಯಿಗಳ ವಹಿವಾಟು

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

ಪ್ರಯಾಗರಾಜದ ಪವಿತ್ರ ತ್ರಿವೇಣಿ ಸಂಗಮದಲ್ಲಿ ೧೩.೧.೨೦೨೫ ರಿಂದ ೨೫.೨.೨೦೨೫ ರ ಕಾಲಾವಧಿಯಲ್ಲಿ ಭವ್ಯ ದಿವ್ಯ ಸ್ವರೂಪದಲ್ಲಿ ಭಾರತದ ಸಾಂಸ್ಕ್ರತಿಕ ಗುರುತನ್ನು ಜಗತ್ತಿಗೆ ಪರಿಚಯಿಸುವ ಮಹಾಕುಂಭಮೇಳ ನಡೆಯಿತು. ಈ ೪೫ ದಿನಗಳಲ್ಲಿ ೧೦೦ ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, ಗಣ್ಯ ವ್ಯಕ್ತಿಗಳು ಮತ್ತು ಪ್ರಸಿದ್ಧ ವ್ಯಕ್ತಿಗಳು ಪವಿತ್ರ ಸ್ನಾನದ ಲಾಭ ಪಡೆದರು. ಅತ್ಯಂತ ಮುಖ್ಯ ವಿಷಯವೆಂದರೆ, ಭಾರತದಾದ್ಯಂತದ ೬೫ ಕೋಟಿ ಹಿಂದೂ ಭಕ್ತರು ಗಂಗಾ ನದಿಯಲ್ಲಿ ಸ್ನಾನ ಮಾಡಿದರು. ಪ್ರಯಾಗರಾಜ ಮಾತ್ರವಲ್ಲ, ಅವರಲ್ಲಿ ಅನೇಕರು ಕಾಶಿ ಮತ್ತು ಅಯೋಧ್ಯೆಗೂ ಭೇಟಿ ನೀಡಿದರು. ಈ ಅವಧಿಯಲ್ಲಿ ೩ ಲಕ್ಷ ಕೋಟಿ ರೂಪಾಯಿಗಳ ವಹಿವಾಟು ನಡೆಯಿತು. ಇದರ ಆರ್ಥಿಕ ಲಾಭ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೂ ದೊರೆಯಿತು. ಈ ಘಟನೆಯ ಧಾರ್ಮಿಕ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣಗಳನ್ನು ತಿಳಿದುಕೊಳ್ಳಲು ಜಗತ್ತಿನಾದ್ಯಂತದ ಸಂಶೋಧಕರು ಮತ್ತು ವಿದ್ಯಾರ್ಥಿಗಳು ಬಂದಿದ್ದರು. ಇವೆಲ್ಲ ಕಾರಣಗಳಿಂದ ಈ ಮಹಾಕುಂಭ ಮೇಳವು ಜಗತ್ತಿನಾದ್ಯಂತ ಮೆಚ್ಚುಗೆಗೆ ಪಾತ್ರವಾಯಿತು.

೨. ಮಹಾಕುಂಭ ಮೇಳದ ವಿರುದ್ಧ ಹಿಂದೂದ್ವೇಷಿಗಳ ಆಕ್ರೋಶ

ಭಾರತದ ಹಿಂದೂದ್ವೇಷಿಗಳಿಗೆ ಹಿಂದೂಗಳ ಏಕತೆ ಮತ್ತು ಸಾಂಸೃತಿಕಶ್ರೇಷ್ಠತೆಯನ್ನು ಸಹಿಸಲು ಆಗುವುದಿಲ್ಲ. ಆದ್ದರಿಂದ ಅವರು ಕುಂಭಮೇಳವನ್ನು ಟೀಕಿಸಲು ಪ್ರಾರಂಭಿಸಿದರು. ‘ತ್ರಿವೇಣಿ ಸಂಗಮದ ನೀರು ಅಶುದ್ಧವಾಗಿದೆ ಮತ್ತು ಮನುಕುಲಕ್ಕೆ ಅಪಾಯಕಾರಿ’ ಆಗಿದೆ ಎನ್ನುವ ಶಬ್ದಗಳಲ್ಲಿ ಟೀಕೆಯನ್ನು ಪ್ರಾರಂಭಿಸಿದರು. ಒಂದು ಅಮೃತ ಸ್ನಾನದ ದಿನದಂದು ಹೆಚ್ಚಿನ ಜನಸಂದಣಿ ಯಿಂದ ಕಾಲ್ತುಳಿತ ಸಂಭವಿಸಿ ಕೆಲವು ಭಕ್ತರು ಮೃತಪಟ್ಟರು ಮತ್ತು ಕೆಲವರು ಗಾಯಗೊಂಡರು. ವಾಸ್ತವದಲ್ಲಿ ಈ ಸಮಯದಲ್ಲಿ ಆಡಳಿತದಿಂದ ತಕ್ಷಣ ಸಹಾಯ ದೊರೆಯಿತು. ಒಂದೆರಡು ಕಡೆ ಬೆಂಕಿ ಕಾಣಿಸಿಕೊಂಡ ದುರದೃಷ್ಟಕರ ಘಟನೆಗಳು ಸಂಭವಿಸಿದವು; ಆದರೆ ಅಲ್ಪಾವಧಿಯಲ್ಲಿ ಅಗ್ನಿಶಾಮಕ ದಳದ ನೂರಾರು ವಾಹನಗಳು ಸ್ಥಳಕ್ಕೆ ಬಂದವು. ಇದರಿಂದ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಹಾನಿ ಸಂಭವಿಸಲಿಲ್ಲ. ಈ ಕುಂಭಮೇಳದಲ್ಲಿ ಸ್ವಚ್ಛತಾ ಕಾರ್ಮಿಕರು ನಿರ್ವಹಿಸಿದ ಸ್ವಚ್ಛತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗಿದೆ. ಪೊಲೀಸರು, ಆಡಳಿತ ಮತ್ತು ಸಾರಿಗೆ ಇಲಾಖೆಗಳು ಮಾಡಿದ ಅಸಾಧಾರಣ ಕಾರ್ಯವನ್ನು ಇತಿಹಾಸದಲ್ಲಿ ಹೋಲಿಸಲಾಗದು, ಎಂಬಂತಹ ಚಿತ್ರಣವಿತ್ತು. ಹೀಗಿದ್ದರೂ, ಕಣಕಣದಲ್ಲಿಯೂ ಹಿಂದೂದ್ವೇಷವನ್ನು ತುಂಬಿಕೊಂಡಿರುವ ಈ ಹಿಂದೂದ್ವೇಷಿಗಳು ಈ ಮಹಾಕುಂಭದ ಪ್ರತಿಷ್ಠೆಯನ್ನು ಹಾಳು ಮಾಡಲು ನಿರಂತರ ಪ್ರಯತ್ನ ಮಾಡಿದರು.

೩. ಉತ್ತರ ಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ೨ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು

ಈ ಮಹಾಕುಂಭ ಮೇಳಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ೨ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ವಾಸ್ತವದಲ್ಲಿ ಇವುಗಳನ್ನು ಅರ್ಜಿಯೆಂದು ಕರೆಯುವ ಬದಲು ‘ಚೀಪ್‌ ಪಬ್ಲಿಸಿಟಿ ಲಿಟಿಗೇಶನ್’ (‘ಅಗ್ಗದ ಪ್ರಚಾರಕ್ಕಾಗಿ ಮಾಡಿದ ದಾವೆಗಳು) ಎಂದು ಕರೆಯುವುದು ಸೂಕ್ತವಾಗಿದೆ. ಅದರಲ್ಲಿ ಮುಖ್ಯವಾಗಿ ‘ಕೇಂದ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು, ಆಡಳಿತದಲ್ಲಿನ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಕಾಲ್ತುಳಿತದಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರ ಸಂಖ್ಯೆಯನ್ನು ರಾಜ್ಯ ಸರಕಾರ ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂಬಂತಹ ಬೇಡಿಕೆಗಳನ್ನು ಇಡಲಾಗಿತ್ತು.

೪. ಉಚ್ಚ ನ್ಯಾಯಾಲಯದಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ತಿರಸ್ಕಾರ

ಇದರಲ್ಲಿನ ಒಂದು ಅರ್ಜಿಯ ವಿಚಾರಣೆಯ ಸಮಯದಲ್ಲಿ, ಉತ್ತರ ಪ್ರದೇಶದ ಅಡ್ವೊಕೇಟ್‌ ಜನರಲ್‌ ‘ಈ ಅರ್ಜಿಯನ್ನು ದುರುದ್ದೇಶದಿಂದ ಸಲ್ಲಿಸಲಾಗಿದೆ ಎಂದು ಹೇಳಿದರು. ಸರಕಾರವು ‘ಕಮಿಷನ್‌ ಆಫ್‌ ಎನ್‌ ಕ್ವೈರಿ ಆಕ್ಟ್‌’ ಅಡಿಯಲ್ಲಿ (ತನಿಖಾ ಆಯೋಗ ಕಾನೂನು ಅಡಿ) ತನಿಖಾ ಸಮಿತಿಯನ್ನು ನೇಮಿಸಿದ್ದು, ಕಾರ್ಯ ಪ್ರಗತಿಯಲ್ಲಿದೆ. ಆದ್ದರಿಂದ, ಸಮಾನಾಂತರ ಸ್ವತಂತ್ರ ತನಿಖೆಯ ಅಗತ್ಯವಿಲ್ಲ’ ಎಂದು ಹೇಳಿದರು. ನಂತರ, ಉತ್ತರ ಪ್ರದೇಶ ಉಚ್ಚ ನ್ಯಾಯಾಲಯದ ದ್ವಿಸದಸ್ಯ ವಿಭಾಗೀಯ ಪೀಠವು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿತು. ಈ ಹಿಂದೆ ಸುರೇಶ ಚಂದ್ರ ಪಾಂಡೆ ಅವರು ಇದೇ ರೀತಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು ಮತ್ತು ಅದನ್ನು ಉತ್ತರ ಪ್ರದೇಶ ಉಚ್ಚ ನ್ಯಾಯಾಲಯ ತಿರಸ್ಕರಿಸಿತ್ತು. ಈ ರೀತಿ ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವ ಮತ್ತು ಕೇವಲ ಹಿಂದೂದ್ವೇಷವನ್ನು ವ್ಯಕ್ತಪಡಿಸುವ ವ್ಯಕ್ತಿಗಳಿಗೆ ‘ಎಕ್ಸಂಪ್ಲರಿ ಕಾಸ್ಟ’ (ನ್ಯಾಯಾಲಯದ ಪ್ರಕ್ರಿಯೆ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ದಂಡ ವಿಧಿಸುವುದು) ವಿಧಿಸುವುದು ಅವಶ್ಯಕವಾಗಿದೆ.

ಶ್ರೀ ಕೃಷ್ಣಾರ್ಪಣಮಸ್ತು

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೨೨.೩.೨೦೨೫)