
ನವದೆಹಲಿ – ಯಾವುದೇ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದ ನಂತರ, ಅದನ್ನು ಮೂರು ತಿಂಗಳ ಒಳಗಾಗಿ ನೀಡಬೇಕು. ಒಂದು ವೇಳೆ ಹಾಗಾಗದಿದ್ದರೆ, ‘ರಜಿಸ್ಟ್ರಾರ್ ಜನರಲ್’ ಅವರು ಆ ಪ್ರಕರಣವನ್ನು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಮಂಡಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ದೇಶದ ಉಚ್ಚ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ.
ಜಾಮೀನು ಪ್ರಕರಣಗಳಲ್ಲಿ ಅದೇ ದಿನ ಆದೇಶ ನೀಡಬೇಕೆಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಒಂದು ವೇಳೆ ತೀರ್ಪನ್ನು ಕಾಯ್ದಿರಿಸಿದರೆ, ಮರುದಿನ ಅದನ್ನು ಖಂಡಿತವಾಗಿಯೂ ನೀಡಬೇಕು. ಮೊಕದ್ದಮೆಗಳ ವಾದ-ಪ್ರತಿವಾದ ಮುಗಿದ ನಂತರ ತೀರ್ಪು ಕಾಯ್ದಿರಿಸಿದ ದಿನಾಂಕವನ್ನು ಎಲ್ಲಾ ಉಚ್ಚ ನ್ಯಾಯಾಲಯಗಳು ತಮ್ಮ ಅಧಿಕೃತ ಜಾಲತಾಣಗಳಲ್ಲಿ ಪ್ರಸಾರ ಮಾಡಬೇಕು ಎಂದೂ ಹೇಳಿದೆ.
ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯಗಳಿಗೆ ನೀಡಿರುವ ಕೆಲವು ನಿರ್ದೇಶನಗಳು
1. ಜಾಮೀನು ಅಥವಾ ಶಿಕ್ಷೆಯ ತಡೆಯಾಜ್ಞೆ ಆದೇಶ ಹೊರಬಿದ್ದ ತಕ್ಷಣ, ಅದರ ಮಾಹಿತಿಯನ್ನು ತಡಮಾಡದೆ ಕಾರಾಗೃಹ ಆಡಳಿತ ಮಂಡಳಿಗೆ ಕಳುಹಿಸಬೇಕು. ಇದರಿಂದಾಗಿ ಆರೋಪಿಯು ಬೇರೆ ಯಾವುದೇ ಪ್ರಕರಣದಲ್ಲಿ ಸಿಲುಕಿಕೊಳ್ಳದಿದ್ದರೆ ಅಥವಾ ಜಾಮೀನಿನ ನಿಯಮಗಳನ್ನು ಉಲ್ಲಂಘಿಸದಿದ್ದರೆ, ಆತನನ್ನು ಸಾಧ್ಯವಾದಷ್ಟು ಅದೇ ದಿನ ಅಥವಾ ಹೆಚ್ಚೆಂದರೆ ಮರುದಿನವೇ ಬಿಡುಗಡೆ ಮಾಡಲು ಸಾಧ್ಯವಾಗುತ್ತದೆ.
2. ಒಂದು ವೇಳೆ ಯಾವುದೇ ಕ್ರಿಮಿನಲ್ ಅಪೀಲು ಅಥವಾ ಮರಣದಂಡನೆ ಶಿಕ್ಷೆಗೆ ಸಂಬಂಧಿಸಿದಂತೆ ತೀರ್ಪನ್ನು ಕಾಯ್ದಿರಿಸಲಾಗಿದ್ದರೆ ಮತ್ತು ಅಪೀಲುದಾರನು ಕಸ್ಟಡಿಯಲ್ಲಿದ್ದರೆ, ನ್ಯಾಯಪೀಠವು ತೀರ್ಪು ಕಾಯ್ದಿರಿಸಿದ ದಿನಾಂಕದಿಂದ 7 ದಿನಗಳ ಒಳಗೆ ಸಂಬಂಧಪಟ್ಟ ಪಕ್ಷದಿಂದ ಸ್ಪಷ್ಟೀಕರಣ ಕೇಳಬಹುದು. ಇತರ ಪ್ರಕರಣಗಳಲ್ಲಿ ಈ ಸಮಯದ ಮಿತಿ ಗರಿಷ್ಠ ಒಂದು ತಿಂಗಳು ಇರಲಿದೆ.
3. ಪ್ರತಿ ತಿಂಗಳ ಕೊನೆಯಲ್ಲಿ ಉಚ್ಚ ನ್ಯಾಯಾಲಯಗಳ ಜಾಲತಾಣಗಳ ಮೂಲಕ ಮುಖ್ಯ ನ್ಯಾಯಮೂರ್ತಿಗಳಿಗೆ ಸ್ವಯಂಚಾಲಿತ ಈ-ಮೇಲ್ ಒಂದನ್ನು ಕಳುಹಿಸಬೇಕು. ಅದರಲ್ಲಿ ತೀರ್ಪು ಕಾಯ್ದಿರಿಸಲಾದ ಎಲ್ಲಾ ಪ್ರಕರಣಗಳ ಸಂಪೂರ್ಣ ವಿವರಗಳಿರಬೇಕು. ಇದರ ಪ್ರತಿಯನ್ನು ಸಂಬಂಧಪಟ್ಟ ನ್ಯಾಯಪೀಠಕ್ಕೂ ಕಳುಹಿಸಬೇಕು.
4. ಒಂದು ವೇಳೆ ಕೇವಲ ತೀರ್ಪಿನ ಭಾಗವನ್ನು ಮಾತ್ರ ಪ್ರಕಟಿಸಿ, 15 ದಿನಗಳವರೆಗೆ ವಿವರವಾದ ತೀರ್ಪನ್ನು ಪ್ರಸಾರ ಮಾಡದಿದ್ದರೆ, ‘ರಜಿಸ್ಟ್ರಾರ್ ಜನರಲ್’ ಅವರು ಈ ವಿಷಯವನ್ನು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರಬೇಕು. ಮುಂದಿನ ಎರಡು ದಿನಗಳಲ್ಲಿ ಇದನ್ನು ಸಂಬಂಧಪಟ್ಟ ನ್ಯಾಯಪೀಠಕ್ಕೆ ತಿಳಿಸಲಾಗುವುದು.
5. ತೀರ್ಪನ್ನು ಕಾಯ್ದಿರಿಸಿದ ಮೂರು ತಿಂಗಳ ನಂತರವೂ ತೀರ್ಪು ನೀಡದಿದ್ದರೆ, ಯಾವುದೇ ಪಕ್ಷದವರು ತೀರ್ಪು ನೀಡುವಂತೆ ಕೋರಿ ಅರ್ಜಿ ಸಲ್ಲಿಸಬಹುದು. ಅಂತಹ ಅರ್ಜಿಯನ್ನು ಎರಡು ದಿನಗಳ ಒಳಗಾಗಿ ಪಟ್ಟಿಗೆ ಸೇರಿಸಲಾಗುವುದು.
6. ಒಂದು ವೇಳೆ ಮೂರು ತಿಂಗಳು + 1 ತಿಂಗಳು (ಒಟ್ಟು 4 ತಿಂಗಳು) ಕಳೆದರೂ ತೀರ್ಪು ನೀಡದಿದ್ದರೆ, ಯಾವುದೇ ಪಕ್ಷದವರು ಮುಖ್ಯ ನ್ಯಾಯಮೂರ್ತಿಗಳಿಗೆ ವಿನಂತಿ ಮಾಡಬಹುದು. ಆ ಪ್ರಕರಣವನ್ನು ಸದರಿ ನ್ಯಾಯಪೀಠದಿಂದ ಹಿಂಪಡೆದು, ಹೊಸದಾಗಿ ವಿಚಾರಣೆ ನಡೆಸಲು ಮತ್ತೊಂದು ನ್ಯಾಯಪೀಠಕ್ಕೆ ವಹಿಸುವಂತೆ ಕೋರಬಹುದು.
7. ಮುಂದಿನ ಒಂದು ತಿಂಗಳ ಒಳಗೂ ವಿವರವಾದ ತೀರ್ಪು ಬಾರದಿದ್ದರೆ, ಪಕ್ಷಕಾರರು ಪ್ರಕರಣವನ್ನು ಬೇರೆ ಪೀಠಕ್ಕೆ ವರ್ಗಾಯಿಸುವಂತೆ ಮುಖ್ಯ ನ್ಯಾಯಮೂರ್ತಿಗಳಿಗೆ ವಿನಂತಿಸಬಹುದು.
ಸರ್ವೋಚ್ಚ ನ್ಯಾಯಾಲಯದಲ್ಲಿ 92,೦೦೦ಕ್ಕೂ ಹೆಚ್ಚು ಪ್ರಕರಣಗಳು ಬಾಕಿ!
ಸರ್ವೋಚ್ಚ ನ್ಯಾಯಾಲಯದಲ್ಲಿ ಸದ್ಯಕ್ಕೆ 92,385 ಪ್ರಕರಣಗಳು ಬಾಕಿ ಇವೆ. ಕೇಂದ್ರ ಸರಕಾರವು ಡಿಸೆಂಬರ್ 11, 2025 ರಂದು ರಾಜ್ಯಸಭೆಯಲ್ಲಿ ಮಾಹಿತಿ ನೀಡುತ್ತಾ, ದೇಶದಾದ್ಯಂತದ ನ್ಯಾಯಾಲಯಗಳಲ್ಲಿ ಒಟ್ಟು 5 ಕೋಟಿ 49 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ ಎಂದು ತಿಳಿಸಿತ್ತು. ಇದರಲ್ಲಿ ದೇಶದ 25 ಉಚ್ಚ ನ್ಯಾಯಾಲಯಗಳಲ್ಲೇ 63 ಲಕ್ಷದ 63 ಸಾವಿರದ 406 ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಇವೆ.
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ