ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು

1 ಸಾವಿರ ಪೊಲೀಸರ ನಿಯೋಜನೆ

ವಾರಾಣಸಿ (ಉತ್ತರ ಪ್ರದೇಶ) – ಇಲ್ಲಿ ಜೂನ್ 2 ರ ಮಧ್ಯರಾತ್ರಿ ಆಡಳಿತ ಮಂಡಳಿಯು ಬುಲ್ಡೋಜರ್ ಮೂಲಕ ‘ಅಜಗೈಬ್ ಶಹೀದ್ ಮಸೀದಿ’ಯನ್ನು ಕೆಡವಿತು. ಕೇವಲ 22 ನಿಮಿಷಗಳಲ್ಲಿ 5 ಬುಲ್ಡೋಜರ್ಗಳು 42 ಅಡಿ ಎತ್ತರದ ಮಸೀದಿಯನ್ನು ನೆಲಸಮಗೊಳಿಸಿದವು. ಸಂಪೂರ್ಣ ಅವಶೇಷಗಳನ್ನು ಸಹ ರಾತ್ರಿಯ ಕತ್ತಲಲ್ಲೇ ಟ್ರಕ್ ಗಳಲ್ಲಿ ತುಂಬಿಸಿ ತೆರವುಗೊಳಿಸಲಾಯಿತು. ಈ ಸಮಯದಲ್ಲಿ 1 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಮಸೀದಿಯು 200 ವರ್ಷಗಳಷ್ಟು ಹಳೆಯದಾಗಿತ್ತು ಎಂದು ಪ್ರತಿಪಾದಿಸಲಾಗುತ್ತಿದ್ದರೂ, ಸ್ಥಳೀಯರ ಪ್ರಕಾರ ಈ ಮಸೀದಿಯನ್ನು ಕಳೆದ ಕೆಲವು ದಶಕಗಳಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಮಸೀದಿಯನ್ನು ರೈಲ್ವೆಯ ಜಾಗದಲ್ಲಿ ನಿರ್ಮಿಸಲಾಗಿತ್ತು ಎಂದು ಆಡಳಿತ ಮಂಡಳಿ ಹೇಳಿದೆ. ಪ್ರಕರಣವು ನ್ಯಾಯಾಲಯಕ್ಕೆ ಹೋಗಿತ್ತು, ಅಲ್ಲಿಂದ ತೀರ್ಪು ರೈಲ್ವೆಯ ಪರವಾಗಿ ಬಂದಿತು. ಭೂಮಿಯನ್ನು ಖಾಲಿ ಮಾಡಲು ರೈಲ್ವೆಯು 3 ಬಾರಿ ನೋಟಿಸ್ ನೀಡಿತ್ತು; ಆದರೆ ಭೂಮಿಯನ್ನು ಖಾಲಿ ಮಾಡಿರಲಿಲ್ಲ. ಅದರ ನಂತರ ಈ ಕ್ರಮ ಕೈಗೊಳ್ಳಲಾಗಿದೆ. (ಇದರಿಂದ ದೇಶದಲ್ಲಿ ಕಾನೂನನ್ನು ಯಾರು ಪಾಲಿಸುವುದಿಲ್ಲ ಎಂಬುದು ತಿಳಿಯುತ್ತದೆ ! ಇಂತವರನ್ನು ಭಾರತದಿಂದ ಓಡಿಸುವುದೇ ಈಗ ಉಳಿದಿರುವ ಶಾಶ್ವತ ಪರಿಹಾರವಾಗಿದೆ ! -ಸಂಪಾದಕರು) ಇಲ್ಲಿ ಕಾಶಿ ರೈಲ್ವೆ ನಿಲ್ದಾಣದ ವಿಸ್ತರಣೆ ಮಾಡಲಾಗುತ್ತಿದೆ. ಇದೇ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. (ಇದರರ್ಥ ವಿಸ್ತರಣಾ ಕಾರ್ಯದ ಉದ್ದೇಶ ಇರದೇ ಇರುತ್ತಿದ್ದರೆ, ಅನಧಿಕೃತ ಮಸೀದಿಯನ್ನು ಹಾಗೆಯೇ ಉಳಿಯಲು ಬಿಡಲಾಗುತ್ತಿತ್ತೇ ? ಈ ಸ್ಥಿತಿಯು ಆಡಳಿತಾತ್ಮಕ ನಿರ್ಲಕ್ಷ್ಯದ ಭಾಗವೇ ಆಗಿದೆ ಎಂದು ಹೇಳಬೇಕಾಗುತ್ತದೆ ! –ಸಂಪಾದಕರು)

ಸಂಪಾದಕೀಯ ನಿಲುವು

  • ಅನಧಿಕೃತ ಮಸೀದಿಯನ್ನು ಕೆಡವಲು 1 ಸಾವಿರ ಪೊಲೀಸರನ್ನು ನಿಯೋಜಿಸಬೇಕಾಗುತ್ತದೆ ಇದು ದೇಶದಲ್ಲಿ ಯಾರು ಹಿಂಸಾಚಾರ ಮಾಡುತ್ತಾರೆ ಎಂಬುದು ತಿಳಿಯುತ್ತದೆ !
  • ರೈಲ್ವೆಯ ಜಾಗದಲ್ಲಿ ನಿರ್ಮಿಸಲಾದ ಅಕ್ರಮ ಮಸೀದಿಯನ್ನು ರಕ್ಷಿಸಲು ಕಾನೂನು ಉಲ್ಲಂಘಿಸುವವರು ನ್ಯಾಯಾಲಯಕ್ಕೆ ಹೋಗಲು ಅವಕಾಶ ಸಿಗಬಾರದು ಎಂದೇ ಜನತೆ ಬಯಸುತ್ತದೆ !