‘ಆನ್ಲೈನ್ ಗೇಮಿಂಗ್ ಈಗ ಭಾರತದಲ್ಲಿ ವೇಗವಾಗಿ ಹೆಚ್ಚುತ್ತಿರುವ ಉದ್ಯಮವಾಗಿದೆ. ‘ಪೋಕರ್, ‘ರಮೀ, ‘ಫ್ಯಾಂಟಸಿ ಸ್ಪೋರ್ಟ್ಸ್ ಮತ್ತು ‘ಬೆಟ್ಟಿಂಗ್ ಗೇಮ್ಸ್ ಇಂತಹ ಆಟಗಳಲ್ಲಿ ಜನರು ಸಿಕ್ಕಾಪಟ್ಟೆ ಹಣ ಹೂಡುತ್ತಿದ್ದಾರೆ; ಆದರೆ ಈ ಆಟ ಆಡುವವರು ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಅಡಚಣೆಗಳನ್ನು ಎದುರಿಸಬೇಕಾಗುತ್ತಿದೆ. ಇಂದಿನ ಪರಿಸ್ಥಿತಿ ಹೇಗಿದೆಯೆಂದರೆ, ಅನೇಕ ಜನರು ಸಾಲದಲ್ಲಿ ಮುಳುಗಿದ್ದಾರೆ. ಅನೇಕ ಕುಟುಂಬಗಳು ಹಾಳಾಗಿವೆ. ಕೆಲವರು ಮಾನಸಿಕ ಒತ್ತಡದಲ್ಲಿ ಆತ್ಮಹತ್ಯೆಯನ್ನೂ ಮಾಡಿಕೊಂಡಿ ದ್ದಾರೆ; ಆದರೆ ಇವೆಲ್ಲಕ್ಕೂ ಇದುವರೆಗೆ ರಾಷ್ಟ್ರೀಯ ಸ್ತರದಲ್ಲಿ ಯಾವುದೇ ಕಠಿಣ ಕಾನೂನು ಇಲ್ಲ. ಆದ್ದರಿಂದ ಈ ದಂಧೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು ಜನರನ್ನು ಆರ್ಥಿಕ ಸಂಕಟಕ್ಕೆ ಸಿಲುಕಿಸುತ್ತಿದೆ.

೧. ಭಾರತದಲ್ಲಿ ಆನ್ಲೈನ್ ಜೂಜಿನ ಅಪಾಯ – ಕೆಲವು ಮಹತ್ವದ ಅಂಕಿಅಂಶಗಳು
ಅ. ಭಾರತದಲ್ಲಿನ ಆನ್ಲೈನ್ ಜೂಜಿನ ಗೇಮಿಂಗ್ನ ವಾರ್ಷಿಕ ಉತ್ಪನ್ನ ೧೫ ಸಾವಿರ ಕೋಟಿ ರೂಪಾಯಿ. (ಮೂಲ : ‘ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ನ ವರದಿ)
ಆ. ಪ್ರತಿದಿನ ೯೦ ಲಕ್ಷ ಜನರು ಆನ್ಲೈನ್ ಜೂಜು ಆಡುತ್ತಾರೆ.
ಇ. ಕಳೆದ ೩ ವರ್ಷಗಳಲ್ಲಿ ಆರ್ಥಿಕ ಸಂಕಟ ಹಾಗೂ ಜೂಜಿನ ವ್ಯಸನದಿಂದ ೧೦೦ ಕ್ಕಿಂತಲೂ ಹೆಚ್ಚು ಆತ್ಮಹತ್ಯೆಗಳಾಗಿವೆ. ತಮಿಳುನಾಡಿನಲ್ಲಿ ಕೇವಲ ಗೇಮಿಂಗ್ನಿಂದ ಆತ್ಮಹತ್ಯೆಯ ಘಟನೆಗಳ ಸಂಖ್ಯೆ ೩೫ ಕ್ಕಿಂತಲೂ ಹೆಚ್ಚಾಗಿದೆ.
ಈ. ಶೇ. ೪೦ ರಷ್ಟು ಜನರು ಸಾಲದಲ್ಲಿ ಸಿಲುಕಿದ್ದಾರೆ. ಅನೇಕ ಜನರು ಸಾಲ ತೆಗೆದು ಗೇಮಿಂಗ್ನಲ್ಲಿ ಕಳೆದುಕೊಂಡಿದ್ದಾರೆ.
೨. ಗೃಹಸಚಿವಾಲಯ ಸ್ಥಾಪಿಸಿದ ಸಮಿತಿ
ಭಾರತ ಸರಕಾರದ ಗೃಹಸಚಿವಾಲಯ ಆನ್ಲೈನ್ ಜೂಜನ್ನು ನಿಯಂತ್ರಿಸಲು ಉನ್ನತ ಮಟ್ಟದ ಒಂದು ಸಮಿತಿಯನ್ನು ಸ್ಥಾಪಿಸಿದೆ. ಈ ಸಮಿತಿ ಗೃಹಸಚಿವಾಲಯದ ಅಧಿಕಾರಿಗಳು, ಕಾನೂನುತಜ್ಞರು, ಧೋರಣೆ ಮಾಡುವವರು ಮತ್ತು ಗೇಮಿಂಗ್ ಉದ್ಯೋಗದಲ್ಲಿನ ತಜ್ಞರನ್ನೊಳಗೊಂಡಿದೆ. ಸಮಿತಿಯ ಉದ್ದೇಶ ಆನ್ಲೈನ್ ಜೂಜಿಗಾಗಿ ರಚನಾತ್ಮಕವಾಗಿ ಹೊಂದಾಣಿಕೆಯಾಗುವ ರಾಷ್ಟ್ರೀಯ ಕಾನೂನನ್ನು ಸಿದ್ಧಪಡಿಸುವುದು ಹಾಗೂ ಪ್ರಸ್ತುತ ಕಾನೂನಿನಲ್ಲಿ ಸುಧಾರಣೆ ಮಾಡುವುದಾಗಿದೆ.
ಅ. ಒಂದು ರಾಷ್ಟ್ರೀಯ ನಿಯಂತ್ರಕ ಸಂಸ್ಥೆಯನ್ನು ಸ್ಥಾಪಿಸುವುದು.
ಆ. ಗೇಮಿಂಗ್ ದಂಧೆಗೆ ಕಠಿಣ ನಿಯಂತ್ರಣವನ್ನು ತರುವುದು.
ಇ. ಆರ್ಥಿಕ ಮೋಸಗಾರಿಕೆಯ ವಿರುದ್ಧ ಕ್ರಮ ತೆಗೆದುಕೊಳ್ಳುವುದು
ಈ. ಕಾನೂನು ಮತ್ತು ಅನುಷ್ಠಾನಕ್ಕಾಗಿ ರಾಜ್ಯ ಸರಕಾರಗಳಿಗೆ ಮಾರ್ಗದರ್ಶನ ಮಾಡುವುದು
ಈ ಸಮಿತಿ ಶೀಘ್ರದಲ್ಲಿಯೆ ಅದರ ವರದಿಯನ್ನು ಗೃಹಸಚಿವಾಲಯಕ್ಕೆ
ಪ್ರಸ್ತುತಪಡಿಸಲಿಕ್ಕಿದ್ದು ಅನಂತರ ಸರಕಾರ ಆನ್ಲೈನ್ ಜೂಜಿಗೆ ಹೊಸ ಕಾನೂನು ಮಾಡುವ ಸಾಧ್ಯತೆ ಇದೆ.
೩. ಜೂಜು ಕಂಪನಿಗಳಿಂದ ಕಾನೂನಿನ ದುರುಪಯೋಗ
ಭಾರತದ ‘ಸಾರ್ವಜನಿಕ ಜೂಜು ಕಾನೂನು, ೧೮೬೭ ಇದು ಹಳೆಯ ಕಾಲದ್ದಾಗಿದೆ ಹಾಗೂ ಅದರಲ್ಲಿ ಇಂಟರ್ನೆಟ್ನಲ್ಲಿ ಆಡುವ ಆಟಗಳ ಸಮಾವೇಶವಿಲ್ಲ. ಆದ್ದರಿಂದ ಇಂದು ಆನ್ಲೈನ್ ಜೂಜಾಟ ನಡೆಸುವ ಕಂಪನಿಗಳು ಈ ಹಳೆಯ ಕಾನೂನಿನ ಲಾಭ ಪಡೆದು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಡೆಸುತ್ತಿವೆ. ಕೆಲವು ರಾಜ್ಯಗಳು ಈ ಜೂಜಾಟಗಳ ಮೇಲೆ ನಿರ್ಬಂಧ ಹೇರಿವೆ, ಉದಾ. ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ; ಆದರೆ ಇನ್ನಿತರ ರಾಜ್ಯಗಳಲ್ಲಿ ಈ ಉದ್ಯೋಗ ಇಂದು ಕೂಡ ನಡೆಯುತ್ತಿದೆ. ಇದರಲ್ಲಿ ಈ ಆಟಗಳಲ್ಲಿ ಜನರನ್ನು ಹಾಗೂ ಯುವಕರನ್ನು ಸಿಲುಕಿಸಲಾಗುತ್ತದೆ. ತಮಿಳುನಾಡು ಸರಕಾರ ಈಗ ಆನ್ಲೈನ್ ಜೂಜಾಟಕ್ಕೆ ನಿರ್ಬಂಧ ಹೇರುವ ಕಠೋರ ನಿರ್ಣಯ ತೆಗೆದುಕೊಂಡಿದೆ, ಹಾಗೆಯೇ ಅದು ೨೦೨೪ ರಲ್ಲಿ ಹೊಸ ಕಾನೂನು ತಂದು ಈಗ ಅದನ್ನು ಅನುಷ್ಠಾನಗೊಳಿಸುತ್ತಿದೆ.
೪. ಆನ್ಲೈನ್ ಜೂಜಿನಿಂದ ಜನರ ಮೇಲಾದ ಪರಿಣಾಮ
ಅ. ಸಾಲದಲ್ಲಿ ಸಿಲುಕುವ ಜನರು ಮತ್ತು ಹೆಚ್ಚುತ್ತಿರುವ ಅಪರಾಧಗಳು : ಯಾವಾಗ ಜನರು ಆನ್ಲೈನ್ ಜೂಜಾಟದಲ್ಲಿ ಹಣ ಹೂಡಿ ಸೋಲುತ್ತಾರೆಯೋ, ಆಗ ಅವರು ಈ ಹಣವನ್ನು ಹಿಂತಿರುಗಿ ಪಡೆಯಲು ಸಾಲ ತೆಗೆದುಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಈ ಸಾಲವನ್ನು ತೀರಿಸಲು ಸಾಧ್ಯವಾಗದಿರುವಾಗ ಜನರು ಅಪರಾಧ ಮಾಡಲು ಮುಂದಾಗುತ್ತಾರೆ. ೨೦೨೨ ರಲ್ಲಿ ಮುಂಬಯಿಯ ಒಬ್ಬ ವಿದ್ಯಾರ್ಥಿ ‘ರಮಿ ಗೇಮ್ನಲ್ಲಿ ೩ ಲಕ್ಷ ರೂಪಾಯಿ ಕಳೆದುಕೊಂಡು ನಂತರ ‘ಸೈಬರ್ ಹಗರಣ ಮಾಡಿ ಹಣ ಗಳಿಸಲು ಪ್ರಯತ್ನಿಸಿದನು. ೨೦೨೩ ರಲ್ಲಿ ದೆಹಲಿಯಲ್ಲಿನ ಒಬ್ಬ ೨೬ ವರ್ಷ ವಯಸ್ಸಿನ ಯುವಕ ‘ಪೋಕರ್ ಗೇಮ್ನಲ್ಲಿ ೬ ಲಕ್ಷ ರೂಪಾಯಿ ಕಳೆದುಕೊಂಡ ನಂತರ ಅವನು ತನ್ನ ಮಿತ್ರನ ಬ್ಯಾಂಕ್ ಖಾತೆಯಿಂದ ಹಣ ಕದ್ದನು.
ಆ. ಆತ್ಮಹತ್ಯೆ ಮತ್ತು ಮಾನಸಿಕ ಕಾಯಿಲೆಗಳಲ್ಲಿ ಹೆಚ್ಚಳ ! : ೨೦೨೨ ರಲ್ಲಿ ತೆಲಂಗಾಣದ ಒಬ್ಬ ೧೯ ವರ್ಷ ವಯಸ್ಸಿನ ವಿದ್ಯಾರ್ಥಿ ಜೂಜಾಟದಿಂದ ಸಂಪೂರ್ಣ ಕುಟುಂಬದ ಹಣ ವನ್ನು ಕಳೆದುಕೊಂಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡನು. ೨೦೨೩ ರಲ್ಲಿ ತಮಿಳುನಾಡಿನಲ್ಲಿ ಒಬ್ಬ ೨೪ ವರ್ಷ ವಯಸ್ಸಿನ ಯುವಕನು ಆನ್ಲೈನ್ ಗೇಮಿಂಗ್ನಲ್ಲಿ ೧೦ ಲಕ್ಷ ರೂಪಾಯಿ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡನು.
ಇ. ಸುಳ್ಳು ಹಾಗೂ ದಾರಿ ತಪ್ಪಿಸುವ ಜಾಹೀರಾತುಗಳು : ‘ಬಿಗ್ ಕ್ಯಾಶ್ ಪೋಕರ್ ಈ ಗೇಮಿಂಗ್ನ ಜಾಹೀರಾತಿನಲ್ಲಿ ನಟ ನವಾಜುದ್ದೀನ ಸಿದ್ದಿಕೀ ಮುಂಬಯಿ ಪೊಲೀಸರ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾನೆ, ಅದರಿಂದ ಜನರಿಗೆ ಈ ಆಟ ಕಾನೂನು ಬದ್ಧವಿದೆ ಹಾಗೂ ‘ಸರಕಾರದ ಮನ್ನಣೆಯಿದೆಯೆಂದು ಅನಿಸಿತು. ದೊಡ್ಡ ದೊಡ್ಡ ಕ್ರಿಕೇಟಿಗರು ಮತ್ತು ಬಾಲಿವುಡ್ನ ನಟರು ಈ ಗೇಮ್ಸ್ನ ಜಾಹೀರಾತು ಮಾಡುತ್ತಿದ್ದಾರೆ, ಅದರ ಪರಿಣಾಮದಿಂದ ಸಾವಿರಾರು ಜನರು ಇದರಲ್ಲಿ ಮೋಸಹೋಗುತ್ತಾರೆ.
ತಮಿಳುನಾಡು ಸರಕಾರದ ಹೊಸ ಕಾನೂನು
ತಮಿಳುನಾಡು ಸರಕಾರ ೨೦೨೪ ರಲ್ಲಿ ‘ತಮಿಳುನಾಡು ಆನ್ ಲೈನ್ ಗೇಮಿಂಗ್ (ನಿಯಂತ್ರಕ) ಕಾನೂನನ್ನು ಅನ್ವಯಗೊಳಿಸಿತು. ಅದರಲ್ಲಿ ೧೮ ವರ್ಷದ ಕೆಳಗಿನ ಮಕ್ಕಳು ಆಡುವ ಹಾಗಿಲ್ಲ, ಕಾನೂನಿನ ದೃಷ್ಟಿಯಲ್ಲಿ ಕಡ್ಡಾಯವಾಗಿ ಗ್ರಾಹಕರ ಆಧಾರ ಕಾರ್ಡ್ ತಪಾಸಣೆ ಮಾಡುವುದು, ದೈನಂದಿನ ಜೂಜಾಟಕ್ಕೆ ಮಿತಿ, ರಾತ್ರಿ ೧೨ ರಿಂದ ಮುಂಜಾನೆ ೫ ಗಂಟೆಯ ವರೆಗೆ ಎಲ್ಲ ಗೇಮಿಂಗ್ಗಳು ಮುಚ್ಚುವುದು, ‘ಗೇಮಿಂಗ್ ವ್ಯಸನಾಧೀನವಾಗಿದೆ, ಎಂದು ಎಚ್ಚರಿಕೆ ನೀಡುವುದು ಕಡ್ಡಾಯವಾಗಿದೆ, ಇಂತಹ ಕೆಲವು ಅಂಶಗಳನ್ನು ಸಮಾವೇಶಗೊಳಿಸಲಾಗಿದೆ.
೬. ಸಂಪೂರ್ಣ ದೇಶದಲ್ಲಿ ಕಠಿಣ ಕಾನೂನಿನ ಆವಶ್ಯಕತೆ
ಭಾರತದ ಜನರನ್ನು ಈ ಜೂಜಿನ ಕಪಿಮುಷ್ಟಿಯಿಂದ ಬಿಡಿಸಲು ಸರಕಾರ ಒಂದು ರಾಷ್ಟ್ರೀಯ ಕಾನೂನನ್ನು ಅನ್ವಯಗೊಳಿಸುವುದು ಅತ್ಯಂತ ಮಹತ್ವದ್ದಾಗಿದೆ. ಆನ್ಲೈನ್ ಜೂಜಾಟವನ್ನು ಅತೀ ಹೆಚ್ಚು ಅಪಾಯಕಾರಿಯಾಗಿರುವ ಆರ್ಥಿಕ ವ್ಯವಹಾರದಲ್ಲಿ ಸಮಾವೇಶಗೊಳಿಸಬೇಕು.
ಕೇಂದ್ರ ಸರಕಾರ ಈ ಕಾನೂನಿನ ಮೂಲಕ
ಅ. ಮೋಸದ ಹಾಗೂ ದಾರಿತಪ್ಪಿಸುವ ಜಾಹೀರಾತುಗಳಿಗೆ ನಿರ್ಬಂಧ ಹೇರಬೇಕು.
ಆ. ವಯಸ್ಸನ್ನು ಪರಿಶೀಲನೆ ಮಾಡುವುದು, ‘ಗೇಮಿಂಗ್ನ ವಿಷಯಕ್ಕೆ ಸಂಬಂಧಿಸಿದ ಸೂಕ್ತ ಉಪಾಯವನ್ನು ಕಡ್ಡಾಯಗೊಳಿಸಬೇಕು.
ಇ. ಒಂದು ಕೇಂದ್ರೀಯ ನಿಯಂತ್ರಕ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಈ ಕಂಪೆನಿಗಳನ್ನು ನಿಯಂತ್ರಣದಲ್ಲಿಡಬೇಕು.
ಈ. ಗೇಮಿಂಗ್ ಕಂಪೆನಿಗಳು ಸಾಮಾಜಿಕ ಕಲ್ಯಾಣ ನಿಧಿಯನ್ನು ಕಡ್ಡಾಯವಾಗಿ ನೀಡುವಂತೆ ಮಾಡಬೇಕು.
೭. ನಿಷ್ಕರ್ಷ
ಆನ್ಲೈನ್ ಜೂಜು ಕೇವಲ ಒಂದು ‘ಆಟ ಅಥವಾ ಮನೋರಂಜನೆಗೆ ಸಂಬಂಧಿಸಿದ ಚರ್ಚೆಯಲ್ಲ, ಇದೊಂದು ಗಂಭೀರ ಸಾಮಾಜಿಕ ಸಮಸ್ಯೆಯಾಗಿದೆ, ಇದರಿಂದ ಲಕ್ಷಾಂತರ ಭಾರತೀಯ ಕುಟುಂಬಗಳು ಹಾಳಾಗುತ್ತಿವೆ. ಸರಕಾರ ಈಗಲೆ ಇದನ್ನು ನಿಯಂತ್ರಿಸದಿದ್ದರೆ, ಇನ್ನೂ ಸಾವಿರಾರು ಜನರು ಇದರಲ್ಲಿ ಸಿಲುಕುವರು. ‘ಒಂದು ದೇಶ, ಒಂದು ಕಾನೂನು ಈ ಧೋರಣೆಯ ಮೂಲಕ ಕೇಂದ್ರ ಸರಕಾರ ಸಂಪೂರ್ಣ ದೇಶದಾದ್ಯಂತ ಆನ್ಲೈನ್ ಜೂಜಾಟದ ವಿರುದ್ಧ ಕಠಿಣ ಕಾನೂನನ್ನು ತಂದರೆ ಮಾತ್ರ ಜನರ ಹಣ, ಕುಟುಂಬ ಹಾಗೂ ಭವಿಷ್ಯವನ್ನು ಕಾಪಾಡಬಹುದು.
– ಶ್ರೀ. ಅಭಿಷೇಕ ಮುರಕಟೆ, ಸುರಾಜ್ಯ ಅಭಿಯಾನ ಸಮನ್ವಯಕ ಮುಂಬಯಿ.
ಸುರಾಜ್ಯ ಅಭಿಯಾನ
ಅಂಚೆ ವಿಳಾಸ : ಶ್ರೀ. ಅಭಿಷೇಕ ಮುರಕಟೆ, ‘ಸುಖಠಣಕರ್ ರಿಟ್ರೀಟ್, ಫ್ಲ್ಯಾಟ್ ಕ್ರ. ಎಜಿ-೪, ಚಿತ್ತಾರ ಭಾಟ, ನಾಗೇಶಿ, ಫೋಂಡಾ, ಗೋವಾ – ೪೦೩೪೦೧ |