ವಿಶ್ವವಿದ್ಯಾಲಯದಲ್ಲಿ ದೇವಸ್ಥಾನ ವ್ಯವಸ್ಥಾಪನೆಯ ಬಗ್ಗೆ ಪಠ್ಯಕ್ರಮ ಅಳವಡಿಕೆ !

ಶ್ರೀ. ರಾಹುಲ ದೇವೀದಾಸ

ಪುಣೆ ವಿಶ್ವವಿದ್ಯಾಲಯವು ದೇವಸ್ಥಾನಗಳ ವ್ಯವಸ್ಥಾಪನೆಗಾಗಿ ಒಂದು ವಿಶೇಷ ಪಠ್ಯಕ್ರಮವನ್ನು ಆರಂಭಿಸಲಿದೆ. ವಿಶ್ವವಿದ್ಯಾಲಯದ ಈ ನಿರ್ಣಯದಿಂದ ಸನಾತನ ಭಾರತೀಯ ಸಂಸ್ಕೃತಿಯ ಜೋಪಾನ ಮತ್ತು ಸಂವರ್ಧನೆಯಾಗಲಿದೆ. ವಿಶ್ವವಿದ್ಯಾಲಯದಿಂದ ದೇವಸ್ಥಾನ ವ್ಯವಸ್ಥಾಪನೆಯ ಪಾಠಗಳನ್ನು ನೀಡಿದರೆ ಭವಿಷ್ಯದಲ್ಲಿ ಕೌಶಲ್ಯವುಳ್ಳ ದೇವಸ್ಥಾನ ವ್ಯವಸ್ಥಾಪಕರು ರೂಪುಗೊಳ್ಳುವರು, ಎಂಬುದು ಖಚಿತ ! ಈ ಪಠ್ಯಕ್ರಮದ ಮೂಲಕ ದೇವಸ್ಥಾನಗಳ ಚಲ-ಅಚಲ ಆಸ್ತಿಗಳ ನಿರ್ವಹಣೆ ಮಾಡುವ ಪಾಠಗಳು ವಿದ್ಯಾರ್ಥಿಗಳಿಗೆ ಸಿಗುವವು. ಹಿಂದಿನ ಕಾಲದ ರಾಜ-ಮಹಾರಾಜರು ದೇವಸ್ಥಾನಗಳ ದೈನಂದಿನ ವ್ಯವಸ್ಥಾಪನೆಗಾಗಿ ಭೂಮಿಯನ್ನು ದಾನ ಮಾಡಿದ್ದಾರೆ. ಸಾವಿರಾರು ವರ್ಷಗಳಿಂದ ದೇವಸ್ಥಾನಗಳಿಗೆ ಸಿಕ್ಕಿದ ಈ ಭೂಮಿಯ ಮೇಲೆ ಧರ್ಮದ್ರೋಹಿಗಳು ಅನಧಿಕೃತ ಅತಿಕ್ರಮಣ ಮಾಡಿದ್ದಾರೆ. ಕೆಲವೊಂದು ಸ್ಥಳಗಳಲ್ಲಿ ಆರ್ಥಿಕ ಭ್ರಷ್ಟಾಚಾರ, ದೇವನಿಧಿಯ ಲೂಟಿ ಇಂತಹ ಹಗರಣಗಳೂ ಬೆಳಕಿಗೆ ಬಂದಿವೆ.

ನಿಜವಾಗಿ ನೋಡಿದರೆ ದೇವಸ್ಥಾನಗಳ ಭೂಮಿಯಿಂದ ಸಿಗುವ ವಾರ್ಷಿಕ ಉತ್ಪನ್ನ ಹಾಗೂ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ದೇವನಿಧಿಯನ್ನು ಧರ್ಮಕಾರ್ಯಕ್ಕಾಗಿಯೆ ಉಪಯೋಗಿಸಬೇಕು ಎಂಬುದು ಮೂಲ ಉದ್ದೇಶವಾಗಿತ್ತು; ಆದರೆ ಕಾಲದ ಪ್ರವಾಹದಲ್ಲಿ ಈ ಉದ್ದೇಶ ನಶಿಸಿ ಹೋಗಿರುವುದು ಕಾಣಿಸುತ್ತದೆ. ಕಾನೂನು ಪ್ರಭಾವಪೂರ್ಣವಾಗಿ ಅನುಷ್ಠಾನವಾಗದ ಕಾರಣ ದೇವಸ್ಥಾನ ವ್ಯವಸ್ಥಾಪನೆಗೆ ಸಾಕಷ್ಟು ಅಡಚಣೆಗಳನ್ನು ಎದುರಿಸಬೇಕಾಗುತ್ತಿದೆ. ಇದರಲ್ಲಿ ಆರ್ಥಿಕ ಅವ್ಯವಹಾರ, ದೇವಸ್ಥಾನಗಳಂತಹ ಧಾರ್ಮಿಕ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ರಾಜಕೀಯ ಹಸ್ತಕ್ಷೇಪ ಇತ್ಯಾದಿಗಳ ಸಮಾವೇಶವಿದೆ. ಪುಣೆ ವಿಶ್ವವಿದ್ಯಾಲಯ ಆರಂಭಿಸಿದ ಈ ಪಠ್ಯಕ್ರಮದಲ್ಲಿ ಅದು ದೇವಸ್ಥಾನ ವ್ಯವಸ್ಥಾಪನೆಯ ಈ ಮೇಲಿನ ಅಡಚಣೆಗಳನ್ನು ಸಮಾವೇಶಗೊಳಿಸಬೇಕು. ಒಬ್ಬ ತಜ್ಞ ದೇವಸ್ಥಾನ ವ್ಯವಸ್ಥಾಪಕ ಪುಣೆ ವಿಶ್ವವಿದ್ಯಾಲಯದಿಂದ ಪದವಿ (ಡಿಗ್ರಿ) ಅಥವಾ ಡಿಪ್ಲೋಮಾ ಪಡೆದು ಹೊರಗೆ ಬರಬಹುದು ಎಂಬುದು ಖಚಿತ ! ಸದ್ಯ ದೇವಸ್ಥಾನ ಸರಕಾರೀಕರಣದಿಂದಾಗಿ ‘ನೌಕರಿ’ ಎಂದು ದೇವಸ್ಥಾನಗಳ ವ್ಯವಸ್ಥಾಪನೆಯನ್ನು ನಡೆಸಲಾಗುತ್ತದೆ. ಇದರ ಜೊತೆಗೆ ವಿಶ್ವವಿದ್ಯಾಲಯದ ದೇವಸ್ಥಾನ ವ್ಯವಸ್ಥಾಪನೆಯ ಪಠ್ಯಕ್ರಮವನ್ನು (ಸಿಲೆಬಸ್) ನಿರ್ಧರಿಸುವಾಗ ಒಂದು ಸಮಿತಿಯನ್ನು ನೇಮಕ ಮಾಡಬೇಕು. ಈ ಸಮಿತಿಯಲ್ಲಿ ಕೆಲವು ದೇವಸ್ಥಾನಗಳ ಧರ್ಮದರ್ಶಿಗಳು, ಕರ್ನಾಟಕ ದೇವಸ್ಥಾನ ಮಹಾಸಂಘದ ಪದಾಧಿಕಾರಿಗಳು, ಸಂತ-ಮಹಾತ್ಮರು ಕೂಡ ಇರಬೇಕು. ಹೀಗೆ ಮಾಡಿದರೆ ವಿದ್ಯಾರ್ಥಿಗಳಿಗೆ ಕೇವಲ ತಾತ್ತ್ವಿಕ ಅಭ್ಯಾಸವಾಗದೆ, ಪ್ರಾಯೋಗಿಕ ಅಂಗಗಳ ಅಭ್ಯಾಸವೂ ಪೂರ್ಣವಾಗುವುದು. ದೇವಸ್ಥಾನ ವ್ಯವಸ್ಥಾಪನೆಯ ಕಾರ್ಯವನ್ನು ‘ದೇವರ ಭಕ್ತಿ’ಗಾಗಿ ಮಾಡಬೇಕು’, ಎಂಬ ಸಂಸ್ಕಾರ ವಿದ್ಯಾರ್ಥಿಗಳ ಮೇಲಾಗುವುದು ಆವಶ್ಯಕವಾಗಿದೆ ಹಾಗೂ ಇದೇ ದೇವಸ್ಥಾನ ವ್ಯವಸ್ಥಾಪನೆಯ ಮೂಲ ಅಡಿಪಾಯವಾಗಿದೆ.

ಶ್ರೀ. ರಾಹುಲ ದೇವೀದಾಸ ಕೊಲ್ಹಾಪುರೆ, ಸಾತಾರಾ, ಮಹಾರಾಷ್ಟ್ರ.