ಲೋಕಸಭೆ ಮತ್ತು ರಾಜ್ಯಸಭೆಗಳು ಅಂಗೀಕರಿಸಿದ ವಕ್ಫ್ ತಿದ್ದುಪಡಿ ಕಾನೂನಿಗೆ ರಾಷ್ಟ್ರಪತಿಗಳ ಅಂಕಿತವಾದ ನಂತರ ಅದು ಕಾನೂನಾಗಿ ಜಾರಿಗೆ ಬಂದಿದೆ. ವಕ್ಫ್ ತಿದ್ದುಪಡಿ ಕಾನೂನು ಅಂಗೀಕಾರಗೊಂಡ ನಂತರ ಕೆಲವು ನಾಯಕರು ಇದನ್ನು ಪಾರದರ್ಶಕತೆ ಮತ್ತು ತಿದ್ದುಪಡಿಯ ಕಡೆಗೆ ಇಟ್ಟ ಹೆಜ್ಜೆ ಎಂದು ಕರೆದಿದ್ದರೂ, ವಿಮರ್ಶಕರು ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ. ಈ ತಿದ್ದುಪಡಿ ಕಾನೂನಿನಿಂದ ವಕ್ಫ್ ಆಸ್ತಿಯ ಸ್ವಾಯತ್ತತೆ ಮತ್ತು ನಿರ್ವಹಣೆಯ ಮೇಲೆ ನಿರ್ಬಂಧಗಳು ಬರಲಿವೆ ಎಂಬುದು ಅವರ ವಾದ. ಬೆರಳು ತೋರಿಸಿದರೆ ಆ ಜಾಗವನ್ನು ವಕ್ಫ್ ವ್ಯಾಪ್ತಿಗೆ ಸೇರಿಸಿಕೊಳ್ಳುವ ವಕ್ಫ್ ಮಂಡಳಿಯ ಕಾರ್ಯಾಚರಣೆಯಿಂದ ಕಳೆದ ೨-೩ ವರ್ಷಗಳಿಂದ ಭಾರತ ತಲ್ಲಣಗೊಂಡಿದೆ. ಮಾಹಿತಿ ಹಕ್ಕಿನಿಂದ ಪಡೆದ ಮಾಹಿತಿ, ಸ್ವತಃ ಕೇಂದ್ರ ಗೃಹ ಸಚಿವರು, ಅನೇಕ ಸಚಿವರು, ಹಿಂದುತ್ವವಾದಿ ಸಂಘಟನೆಗಳು, ಅವರ ಕಾರ್ಯಕರ್ತರು ವಕ್ಫ್ ಕಾನೂನಿನಲ್ಲಿ ಪಾರದರ್ಶಕತೆ ಇಲ್ಲ ಮತ್ತು ಅದು ಮುಸ್ಲಿಂ ಸಮುದಾಯವನ್ನು ಓಲೈಸುವಂತಿದೆ ಎಂಬುದರ ಕುರಿತಾದ ಅನೇಕ ಸತ್ಯಗಳನ್ನು ಭಾರತದ ಜನರ ಮುಂದೆ ಬಹಿರಂಗಪಡಿಸಿದರು. ವಕ್ಫ್ ಮಂಡಳಿಯು ದೇಶಾದ್ಯಂತದ ಅನೇಕ ಭೂಮಿಗಳನ್ನು ಕಬಳಿಸಿದೆ ಎಂಬ ಅನೇಕ ದೂರುಗಳು ಬಂದವು. ರೈಲ್ವೆ, ಸೇನೆಯ ನಂತರ ಭಾರತದಲ್ಲಿ ಅತಿ ಹೆಚ್ಚು ಭೂಮಿಯನ್ನು ಹೊಂದಿರುವ ವಕ್ಫ್ ಮಂಡಳಿಯ ಬಳಿ ಅನೇಕ ಲಕ್ಷ ಎಕರೆ ಭೂಮಿ ಇದ್ದರೂ ಅದರಿಂದ ಬರುವ ಆದಾಯವು ಅತ್ಯಲ್ಪವಾಗಿದೆ, ಇದು ಪ್ರತಿಯೊಬ್ಬ ಭಾರತೀಯನನ್ನು ಗೊಂದಲಕ್ಕೀಡು ಮಾಡಿದೆ.
ದೇಶದ ಇಂದಿನ ಪರಿಸ್ಥಿತಿಯಲ್ಲಿ ಭೂಮಿ ಯಾರ ಬಳಿ ಇದೆಯೋ ಅವರನ್ನು ಶ್ರೀಮಂತ ಎಂದು ಪರಿಗಣಿಸಲಾಗುತ್ತದೆ. ಅನೇಕ ಜಮೀನುದಾರರು ತಮ್ಮ ಭೂಮಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ಅವುಗಳನ್ನು ಮಾರಾಟ ಮಾಡಿ ಅಪಾರ ಸಂಪತ್ತನ್ನು ಗಳಿಸಿದ್ದಾರೆ. ಪಂಢರಪುರ ದೇವಸ್ಥಾನಕ್ಕೆ ಸೇರಿದ ಭೂಮಿಯನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಮತ್ತು ಅದರಿಂದ ಆದಾಯ ಬರುತ್ತಿಲ್ಲ ಎಂಬ ದೂರು ಇತ್ತೀಚೆಗೆ ಬಂದಿತ್ತು ಮತ್ತು ಇದರಿಂದ ಪಂಢರಪುರ ದೇವಸ್ಥಾನದ ಬಳಿ ೧ ಸಾವಿರದ ೨೦೦ ಎಕರೆ ಭೂಮಿ ಇರುವುದು ಬೆಳಕಿಗೆ ಬಂದಿತ್ತು. ‘ಪಂಢರಪುರದ ವಿಠ್ಠಲ ದೇವಸ್ಥಾನಕ್ಕೆ ಇಷ್ಟೊಂದು ಭೂಮಿ ಇದ್ದರೆ, ಅದು ತಿರುಪತಿಯಷ್ಟು ಶ್ರೀಮಂತವಾಗುತ್ತಿತ್ತು ಎಂದು ಊಹಿಸುವವರು ವಕ್ಫ್ ಬಳಿ ಇರುವ ಭೂಮಿಯ ಅಂಕಿಅಂಶಗಳನ್ನು ನೋಡಿ ವಕ್ಫ್ ಬೋರ್ಡ್ ಎಷ್ಟು ದೊಡ್ಡ ಭ್ರಷ್ಟಾಚಾರ ಮಾಡುತ್ತಿದೆ ಎಂಬುದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಕರ್ನಾಟಕದಲ್ಲಿ ೪೭ ಸಾವಿರದ ೬೩೪ ವಕ್ಫ್ ಆಸ್ತಿಗಳಿವೆ. ರಾಜ್ಯ ಸರ್ಕಾರ ಕಳೆದ ೫ ವರ್ಷಗಳಲ್ಲಿ ವಕ್ಫ್ ಮಂಡಳಿಗೆ ಅನುದಾನವನ್ನು ನೀಡಿದೆ. ೨೦೧೯-೨೦ ರಲ್ಲಿ ೧.೨೫ ಕೋಟಿ ಅನುದಾನ ಕೊಟ್ಟಿದೆ. ಇನ್ನು ೨೦೨೦-೨೧ ರಲ್ಲಿ ೮.೭೨ ಕೋಟಿ, ೨೦೨೧-೨೨ ರಲ್ಲಿ ೯.೬೯ ಕೋಟಿ, ೨೦೨೨-೨೩ ರಲ್ಲಿ ೯.೩೪ ಕೋಟಿ ಹಾಗೂ ೨೦೨೩-೨೪ ರಲ್ಲಿ ೧೨.೭೧ ಕೋಟಿ ಅನುದಾನ ನೀಡಿದೆ. ಇನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧೀನದಲ್ಲಿ ಬರುವ ವಕ್ಫ್ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸುವ ವಿಚಾರವಾಗಿ ಈವರೆಗೆ ೪೧೦೮ ಪ್ರಕರಣಗಳ ದಾಖಲಾಗಿವೆ. ಅದೇ ರೀತಿಯಲ್ಲಿ ಕಬಳಿಕೆ ಮಾಡಿರುವ ಹಾಗೂ ಒತ್ತುವರಿ ಮಾಡಿ ಕೊಂಡಿರುವ ಒಟ್ಟು ೩೭೧ ಎಕರೆ ೩೫ ಗುಂಟೆ ಹಾಗೂ ೧೭.೫ ಸೆಂಟ್ಸ್ ಆಸ್ತಿಯ ಒತ್ತುವರಿ ತೆರವು ಮಾಡಲಾಗಿದೆ. ಇಂತಹ ಅನೇಕ ದುರಾಡಳಿತಗಳಿಂದ ವಕ್ಫ್ ಬೋರ್ಡ್ ಮತ್ತು ಅದರ ಆಸ್ತಿಯ ವಿಷಯವು ಸುದ್ದಿಯಾಯಿತು. ವಕ್ಫ್ ಬಗ್ಗೆ ಜನರು ಬಹಿರಂಗವಾಗಿ ಚರ್ಚಿಸಲು ಅವಕಾಶ ನೀಡಲಾಯಿತು ಮತ್ತು ಅಂತಹ ಚರ್ಚೆಗಳು ನಡೆದವು. ದೇಶದ ಈ ಚಿತ್ರಣವು ಶ್ಲಾಘನೀಯವಾಗಿದೆ ಮತ್ತು ಜನರ ಒತ್ತಡದಿಂದ ಅಂತಿಮವಾಗಿ ತಿದ್ದುಪಡಿ ಕಾನೂನು ಅಂಗೀಕಾರಗೊಂಡಿತು.
ಕಾನೂನಿನಲ್ಲಿ ಪೂರ್ಣತೆ ಇರಬೇಕು, ಇದೇ ಹಿಂದೂಗಳ ನಿರೀಕ್ಷೆ !
ತಿದ್ದುಪಡಿ ಕಾನೂನಿನ ಮೂಲಕ ವಕ್ಫ್ನ ಅನಿಯಂತ್ರಿತ ಅಧಿಕಾರಗಳನ್ನು ಮೊಟಕುಗೊಳಿಸಲು ಅನೇಕ ನಿಬಂಧನೆಗಳನ್ನು ತರಲಾಗಿದೆ. ಈ ಕಾನೂನು ೧೯೯೫ ರ ಕಾನೂನಿಗೆ ತಿದ್ದುಪಡಿ ಮಾಡುವ ಮತ್ತು ಭಾರತದಲ್ಲಿನ ವಕ್ಫ್ ಆಸ್ತಿಗಳ ಆಡಳಿತ ಮತ್ತು ನಿರ್ವಹಣೆಯನ್ನು ಸುಧಾರಿಸುವ ದೃಷ್ಟಿಯಿಂದ ಕೂಡಿದೆ. ಹಿಂದಿನ ಕಾನೂನಿನ ಲೋಪದೋಷಗಳನ್ನು ನಿವಾರಿಸುವುದು ಮತ್ತು ವಕ್ಫ್ ಬೋರ್ಡ್ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು, ನೋಂದಣಿ ಪ್ರಕ್ರಿಯೆಯನ್ನು ಸುಧಾರಿಸುವುದು ಮತ್ತು ವಕ್ಫ್ ದಾಖಲೆಗಳನ್ನು ನಿರ್ವಹಿಸುವಲ್ಲಿ ತಂತ್ರಜ್ಞಾನದ ಪಾತ್ರವನ್ನು ಹೆಚ್ಚಿಸುವುದು ಈ ಕಾನೂನಿನ ಉದ್ದೇಶ ಎಂದು ಹೇಳಲಾಗುತ್ತದೆ. ತಿದ್ದುಪಡಿ ಕಾನೂನಿನ ಪ್ರಕಾರ ವಕ್ಫ್ನ ವ್ಯಾಖ್ಯಾನದಲ್ಲಿ ಬದಲಾವಣೆ ಮಾಡಲಾಗಿದೆ. ವಕ್ಫ್ನ ಸಮೀಕ್ಷೆ ಮತ್ತು ನೋಂದಣಿಯಲ್ಲಿ ಅನೇಕ ನಿಯಂತ್ರಣಗಳನ್ನು ತರಲಾಗಿದೆ. ವಕ್ಫ್ ನ್ಯಾಯಾಧಿಕರಣದ ರಚನೆಯನ್ನು ಬದಲಾಯಿಸಲಾಗಿದೆ. ಕಲಂ ೪೦, ೧೦೭ ಮತ್ತು ೧೦೮ ನ್ನು ರದ್ದುಪಡಿಸಲಾಗಿದೆ. ಹೀಗಿದ್ದರೂ, ಹಿಂದುತ್ವವಾದಿಗಳು ಎತ್ತಿ ಹಿಡಿದ ಕೆಲವು ವಿಷಯಗಳು ನಿರ್ಲಕ್ಷಿಸಲ್ಪಟ್ಟಿವೆ. ವಕ್ಫ್ ಆಸ್ತಿ ಎಂದು ತಪ್ಪಾಗಿ ಘೋಷಿಸಲ್ಪಟ್ಟ ಆಸ್ತಿಗಳನ್ನು ಮರಳಿ ಪಡೆಯಲು ಯಾವುದೇ ನಿಬಂಧನೆ ಇಲ್ಲ. ಕಲಂ ೬ ರಲ್ಲಿ ಕಲಂ ೨೮, ೨೯ ಮತ್ತು ‘ಸಂತ್ರಸ್ತ ವ್ಯಕ್ತಿಯಂತಹ ಕೆಲವು ಕಠಿಣ ನಿಬಂಧನೆಗಳು ಇನ್ನೂ ಇವೆ, ಅವುಗಳನ್ನು ತೆಗೆದುಹಾಕಲಾಗಿಲ್ಲ. ಈ ಕಾನೂನನ್ನು ಹಿಂದಿನ ದಿನಾಂಕದಿಂದ ಜಾರಿಗೆ ಬರುವಂತೆ ಮಾಡಲಾಗಿಲ್ಲ. ಆದ್ದರಿಂದ ಇಲ್ಲಿಯವರೆಗೆ ವಕ್ಫ್ ವಶಪಡಿಸಿಕೊಂಡ ಭೂಮಿಗಳನ್ನು ಮರಳಿ ಪಡೆಯಲು ಪ್ರಯತ್ನಿಸಲು ಸಾಧ್ಯವಿಲ್ಲ; ಅದಕ್ಕಾಗಿಯೇ ವಕ್ಫ್ ತಿದ್ದುಪಡಿ ಕಾನೂನಿನಲ್ಲಿನ ತಿದ್ದುಪಡಿಗಳಿಗೆ ಇನ್ನೂ ಅವಕಾಶವಿದೆ ಮತ್ತು ಈ ಕಾನೂನಿನಲ್ಲಿ ಪೂರ್ಣತೆ ಇರಬೇಕು ಎಂಬುದು ಹಿಂದೂಗಳ ನಿರೀಕ್ಷೆಯಾಗಿದೆ.
ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನಗಳ ಹೆಚ್ಚಿದ ಸಾಧ್ಯತೆ
‘ಭಾರತ-ಪಾಕ್ ವಿಭಜನೆಯ ಸಮಯದಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಹೋದ ಮುಸ್ಲಿಮರ ಭೂಮಿಯನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಭಾರತ ಸರಕಾರ ಹೇಳಿತು ಮತ್ತು ಅವು ವಕ್ಫ್ ಬೋರ್ಡ್ಗೆ ಜಮೆಯಾದವು. ಅದೇ ಸಮಯದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಹಿಂದೂಗಳ ಆಸ್ತಿಗಳನ್ನು ಕಬಳಿಸಲಾಯಿತು. ಆ ಪಾಕಿಸ್ತಾನದಲ್ಲಿ ಉಳಿದ ಹಿಂದೂಗಳಿಗೂ ಅವು ಸಿಗಲಿಲ್ಲ. ಭಾರತ ಸರಕಾರವು ಸ್ವಾತಂತ್ರ್ಯದಿಂದ ವಕ್ಫ್ನ ಈ ಭೂಮಿಗಳನ್ನು ಇಲ್ಲಿಯವರೆಗೆ ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದೆ ಮತ್ತು ಅದರಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ‘ವಕ್ಫ್ ತಿದ್ದುಪಡಿ ಕಾನೂನನ್ನು ಧರ್ಮದ ದೃಷ್ಟಿಕೋನದಿಂದ ನೋಡಬೇಡಿ, ಅದು ಭ್ರಷ್ಟಾಚಾರವನ್ನು ತಡೆಯುವ ಮಾರ್ಗ ಎಂದು ಹೇಳಲಾಗುತ್ತಿದ್ದರೂ, ಅದನ್ನು ಧರ್ಮದ ದೃಷ್ಟಿಕೋನದಿಂದ ನೋಡುವುದು ಅತ್ಯಂತ ಅವಶ್ಯಕ; ಏಕೆಂದರೆ ವಕ್ಫ್ ತಿದ್ದುಪಡಿ ಕಾನೂನನ್ನು ‘ಇಸ್ಲಾಂ ಮೇಲಿನ ನೇರ ಆಕ್ರಮಣ ಎಂದು ಕರೆಯಲಾಗುತ್ತಿದೆ. ಎಷ್ಟು ದೊಡ್ಡ ಪ್ರಮಾಣದಲ್ಲಿ ಇಸ್ಲಾಮಿ ಚಿಂತಕರು ಮತ್ತು ಸಮಸ್ತ ಮುಸ್ಲಿಂ ಸಮುದಾಯವು ಈ ಕಾನೂನನ್ನು ತೀವ್ರವಾಗಿ ವಿರೋಧಿಸಿದರೋ, ಅಷ್ಟೇ ಪ್ರಮಾಣದಲ್ಲಿ ಈಗ ಅದರ ಪರಿಣಾಮಗಳು ಕಾಣಿಸಿಕೊಳ್ಳಲಿವೆ. ಇದರ ಮೊದಲ ಘಟನೆ ಸಂಭಲ್ನಲ್ಲಿ ನಡೆದಿದೆ. ಜಾಹಿದ್ ಸೈಫಿ ಎಂಬ ಮುಸ್ಲಿಂ ವ್ಯಕ್ತಿಯು ಈ ತಿದ್ದುಪಡಿ ಕಾನೂನನ್ನು ಬೆಂಬಲಿಸಿದ್ದಕ್ಕಾಗಿ ದೊಣ್ಣೆಗಳು, ಕೋಲುಗಳು ಮತ್ತು ಮಾರಕಾಸ್ತ್ರಗಳನ್ನು ಹೊಂದಿದ್ದ ಡಜನ್ ಗೂಂಡಾಗಳು ಅವನ ಮೇಲೆ ಹಲ್ಲೆ ಮಾಡಿದರು, ಅದರಲ್ಲಿ ಅವನು ಗಂಭೀರವಾಗಿ ಗಾಯಗೊಂಡಿದ್ದಾನೆ. ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ನ ಪ್ರಧಾನ ಕಾರ್ಯದರ್ಶಿ ಫಜಲುರ್ ರಹೀಮ್ ಮುಜದ್ದಿದಿ ಅವರು ‘ವಕ್ಫ್ ತಿದ್ದುಪಡಿ ಕಾನೂನನ್ನು ಜಾರಿಗೊಳಿಸಿದರೆ ದೇಶಾದ್ಯಂತ ಶಾಹೀನ್ ಬಾಗ್ನಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಬೆದರಿಕೆಯನ್ನೂ ನೀಡಿದ್ದರು.
ಸಮಾಜವಾದಿ ಪಕ್ಷ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಮುಸ್ಲಿಮರನ್ನು ಓಲೈಸುವ ಇತರ ಪಕ್ಷಗಳೊಂದಿಗೆ ಕಾಂಗ್ರೆಸ್ ವಕ್ಫ್ ತಿದ್ದುಪಡಿ ಕಾನೂನನ್ನು ನಿರಂತರವಾಗಿ ‘ಸಂವಿಧಾನವಿರೋಧಿ, ‘ಮುಸ್ಲಿಂವಿರೋಧಿ ಮತ್ತು ‘ಪ್ರಜಾಪ್ರಭುತ್ವವಿರೋಧಿ ಎಂದು ಕರೆದಿದೆ. ಅವರ ಈ ಆಕ್ಷೇಪಣೆಗಳ ಹಿಂದೆ ಯಾವುದೇ ವಿಶ್ವಾಸಾರ್ಹ ವಾದವಿಲ್ಲದಿದ್ದರೂ, ಪ್ರಚೋದನಕಾರಿ ಹೇಳಿಕೆಗಳು, ಸುಳ್ಳು ಕಥೆಗಳು ಮತ್ತು ಮುಸ್ಲಿಮರಿಗೆ ತೋರಿಸಲಾಗುವ ಭಯ ಅವರ ತಂತ್ರಗಾರಿಕೆಯನ್ನು ನೋಡಿದರೆ ೨೦೨೦ ರಲ್ಲಿ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಸಮಯದಲ್ಲಿ ದೆಹಲಿಯಲ್ಲಿ ನಡೆದ ಹಿಂದೂವಿರೋಧಿ ಗಲಭೆಗಳು ಅಥವಾ ಹಿಂಸಾತ್ಮಕ ರೈತ ಹೋರಾಟಗಳನ್ನು ಮರೆಯಲು ಸಾಧ್ಯವಿಲ್ಲ. ಅದಕ್ಕಾಗಿಯೇ ದೇಶಾದ್ಯಂತ ಶಾಂತಿ ಸ್ಥಾಪನೆಯಾಗಲು ವಕ್ಫ್ ತಿದ್ದುಪಡಿ ಕಾನೂನಿಗೆ ಹಿಂದೂಗಳ ಪರವಾಗಿ ಪೂರ್ಣತೆ ನೀಡಬೇಕು ಎಂಬುದು ಹಿಂದೂಗಳ ನಿರೀಕ್ಷೆಯಾಗಿದೆ.