Bengal Bakri Eid : ಬಂಗಾಳದಲ್ಲಿ ಈ ಬಾರಿ ಬಕ್ರೀದ್‌ ಹಬ್ಬಕ್ಕೆ ಕೇವಲ ಒಂದು ದಿನದ ರಜೆ!

  • ಸುವೇಂದು ಅಧಿಕಾರಿ ಸರಕಾರದ ನಿರ್ಧಾರ

  • ​ಇದುವರೆಗೆ ಎರಡು ದಿನಗಳ ರಜೆ ನೀಡುತ್ತಿದ್ದ ಹಿಂದಿನ ತೃಣಮೂಲ ಕಾಂಗ್ರೆಸ್ ಸರಕಾರ !

​ಕೋಲ್ಕತಾ (ಬಂಗಾಳ) – ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಂಗಾಳ ಸರಕಾರವು ಈಗ ಮತ್ತೊಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡು ಬಕ್ರೀದ್ ಹಬ್ಬದ ರಜೆಯಲ್ಲಿ ಕಡಿತ ಮಾಡಿದೆ. ಈಗ ಈ ಹಬ್ಬಕ್ಕೆ ಕೇವಲ ಒಂದು ದಿನ ಅಂದರೆ ಮೇ ೨೮ ರಂದು ಮಾತ್ರ ರಜೆ ಇರಲಿದೆ. ತೃಣಮೂಲ ಕಾಂಗ್ರೆಸ್ ಸರಕಾರವು ಈ ಹಬ್ಬಕ್ಕೆ ಎರಡು ದಿನಗಳ ರಜೆ ನೀಡುತ್ತಿತ್ತು.

ಕಾನೂನಿನಿಂದ ನಿಷೇಧಿಸಲ್ಪಟ್ಟ ಪ್ರಾಣಿಗಳ ಬಲಿ ನೀಡುವುದರಿಂದ ಸಂಪೂರ್ಣವಾಗಿ ದೂರವಿರಿ! – ಜಮೀಯತ್ ಉಲೇಮಾ-ಎ-ಹಿಂದ್‌ನಿಂದ ಬಂಗಾಳದ ಮುಸ್ಲಿಮರಿಗೆ ಕರೆ

​ಜಮೀಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ ಅವರು ಬಕ್ರೀದ್ ಹಬ್ಬದ ಸಂದರ್ಭದಲ್ಲಿ ನಡೆಯುತ್ತಿರುವ ವಿವಾದದ ಹಿನ್ನೆಲೆಯಲ್ಲಿ ಮುಸ್ಲಿಮರಿಗೆ ಕರೆ ನೀಡಿದ್ದಾರೆ. ಬಲಿ ಕೊಡುವ ಪ್ರಕ್ರಿಯೆಯು ಇಸ್ಲಾಂನ ಒಂದು ಪ್ರಮುಖ ಆರಾಧನೆಯಾಗಿದೆ. ಪ್ರತಿಯೊಬ್ಬ ಮುಸ್ಲಿಮನು ಬಲಿ ಅರ್ಪಿಸಲು ಪ್ರಯತ್ನಿಸಬೇಕು. ಆದಾಗ್ಯೂ ಸರಕಾರವು ನೀಡಿರುವ ಎಲ್ಲಾ ಮಾರ್ಗಸೂಚಿಗಳನ್ನು ಮತ್ತು ಸ್ಥಳೀಯ ಆಡಳಿತದ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಬೇಕು. ಕಾನೂನಿನಿಂದ ನಿಷೇಧಿಸಲ್ಪಟ್ಟ ಪ್ರಾಣಿಗಳ ಬಲಿ ನೀಡುವುದರಿಂದ ಸಂಪೂರ್ಣವಾಗಿ ದೂರವಿರಬೇಕೆಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಬಂಗಾಳದ ಬಿಜೆಪಿ ಸರಕಾರದ ಇಂತಹ ಹೊಸ ಹೊಸ ಆದೇಶಗಳಿಂದ ತೃಣಮೂಲ ಕಾಂಗ್ರೆಸ್ ಯಾವ ಮಟ್ಟದವರೆಗೆ ಹೋಗಿ ಮುಸ್ಲಿಮರ ಓಲೈಕೆ ಮಾಡಿತ್ತು,ಎಂಬುದು ಸ್ಪಷ್ಟವಾಗುತ್ತಾ ಹೋಗುತ್ತದೆ!