ಸ್ವಂತ ಪಕ್ಷ ಸ್ಥಾಪಿಸಲು ಮುಂದಾದ ಭಾಜಪ ತಮಿಳುನಾಡಿನ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ!

2031 ರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ!

ಚೆನ್ನೈ (ತಮಿಳುನಾಡು) – ಭಾಜಪ ತಮಿಳುನಾಡಿನ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಸ್ವಂತ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲಿದ್ದಾರೆ. ಈ ಕುರಿತು ಅವರು ಇತ್ತೀಚೆಗೆ ವಿಡಿಯೋ ಸಂದೇಶದ ಮೂಲಕ ಘೋಷಣೆ ಮಾಡಿದ್ದಾರೆ. ಅದರಲ್ಲಿ ಅವರು, “ಇಂದು ನಾವು ಒಂದು ಚಳುವಳಿಯನ್ನು ಆರಂಭಿಸುತ್ತಿದ್ದೇವೆ. ನಮ್ಮ ರಾಜಕೀಯ ಪಕ್ಷವು ತಮಿಳುನಾಡಿನಲ್ಲಿ 2031 ರಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ” ಎಂದು ಹೇಳಿದ್ದಾರೆ.

ಅಣ್ಣಾಮಲೈ ಮಾತು ಮುಂದುವರೆಸುತ್ತಾ, “ಭಾಜಪ ಸದಸ್ಯನಾಗಿ ಉಳಿಯುವುದು ಮತ್ತು ತಮಿಳು ಹಿತಾಸಕ್ತಿಯ ವಿಷಯಗಳೊಂದಿಗೆ ಜೋಡಿಸಿಕೊಂಡಿರುವುದು, ಈ ಎರಡು ವಿಷಯಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಕಠಿಣವಾಗಿತ್ತು. ನಾನು 4 ಡಿಸೆಂಬರ್ 2025 ರಂದು ಭಾಜಪಯ ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದೆ. ಪಕ್ಷವನ್ನು ತೊರೆಯುವ ಮುನ್ನ ಚುನಾವಣೆಗಳನ್ನು ಪೂರ್ಣಗೊಳಿಸುವಂತೆ ಪಕ್ಷವು ನನಗೆ ತಿಳಿಸಿತ್ತು” ಎಂದು ಹೇಳಿದ್ದಾರೆ.

ಅಣ್ಣಾಮಲೈ ಅವರು ಜೂನ್ 2 ರಂದು ಭಾಜಪಗೆ ರಾಜೀನಾಮೆ ನೀಡಿದರು. ಇದರ ಹಿಂದಿನ ಕಾರಣವನ್ನೂ ಅವರು ಸ್ಪಷ್ಟಪಡಿಸಿದ್ದಾರೆ. “ಕಳೆದ 18 ತಿಂಗಳುಗಳಿಂದ ಹಿರಿಯ ನಾಯಕತ್ವದೊಂದಿಗೆ ನನ್ನ ಸಿದ್ಧಾಂತಗಳು ಹೊಂದಾಣಿಕೆಯಾಗುತ್ತಿರಲಿಲ್ಲ” ಎಂದು ಅವರು ತಿಳಿಸಿದ್ದಾರೆ.

ಅಣ್ಣಾಮಲೈ ರಾಜ್ಯಾಧ್ಯಕ್ಷರಾಗಿದ್ದಾಗ ಭಾಜಪಯ ಮತಗಳು ಸುಮಾರು 5 ಪಟ್ಟು ಹೆಚ್ಚಳ!

ಅಣ್ಣಾಮಲೈ ಅವರು ಕಳೆದ 6 ವರ್ಷಗಳಿಂದ ಭಾಜಪ ನಾಯಕರಾಗಿದ್ದರು. ಅವರ ನೇತೃತ್ವದಲ್ಲಿ ಪಕ್ಷವು 2021 ಮತ್ತು 2026 ರ ವಿಧಾನಸಭಾ ಚುನಾವಣೆಗಳನ್ನು ಎದುರಿಸಿತ್ತು. ಇದರಲ್ಲಿ ಭಾಜಪದ ಮತಗಳ ಪ್ರಮಾಣವು ಶೇಕಡಾ 2.62 ರಿಂದ ಶೇಕಡಾ 11.3 ಕ್ಕೆ ತಲುಪಿದೆ.