ತಾನು 'ಹಿಂದೂ' ಎಂದು ಗುರುತಿಸಿಕೊಂಡು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ !

ಮುಂಬಯಿ, ಜೂನ್ ೫ (ವಾರ್ತೆ) – ನವಿ ಮುಂಬಯಿನ ಖಾರ್ಘರ್ನಲ್ಲಿ ‘ಹೇರ್ ಸ್ಪಾ’ (ಕೂದಲಿನ ಸೌಂದರ್ಯವರ್ಧಕ ಚಿಕಿತ್ಸೆ) ಗಾಗಿ ಬಂದಿದ್ದ ಹಿಂದೂ ಮಹಿಳೆಗೆ ಕೂದಲಿನ ಚಿಕಿತ್ಸೆ ನೀಡುವಾಗ ಕಣ್ಣು ಮುಚ್ಚಲು ಹೇಳಿ, ಸಮೀರ್ ಖಾನ್ ಎಂಬ ಮುಸ್ಲಿಂ ಯುವಕ ಆಕೆಯ ತುಟಿಗೆ ಮುತ್ತಿಕ್ಕಿದ್ದಾನೆ. ಈ ಘಟನೆಯ ನಂತರ ಹಿಂದೂ ಮಹಿಳೆ ತಕ್ಷಣವೇ ಕೂದಲಿನ ಚಿಕಿತ್ಸೆಯನ್ನು ನಿಲ್ಲಿಸಲು ಹೇಳಿದರು. ಹಿಂದೂ ಮಹಿಳೆ ಈ ವಿಷಯವನ್ನು ತನ್ನ ಪತಿಗೆ ತಿಳಿಸಿ ಖಾರ್ಘರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಮೀರ್ ಖಾನ್ನನ್ನು ಬಂಧಿಸಿದ್ದಾರೆ.
ಖಾರ್ಘರ್ನ ಸೆಕ್ಟರ್ ನಂ. ೨ ರಲ್ಲಿರುವ ‘ಸಿಎಮ್ಸಿ ಸಲೂನ್’ಗೆ ತನ್ನ ತಂಗಿಯ ಪರಿಚಯದ ಸಮೀರ್ ಖಾನ್ನ ಬ್ಯೂಟಿ ಪಾರ್ಲರ್ಗೆ ಈ ಹಿಂದೂ ಮಹಿಳೆ ಕೂದಲಿನ ಚಿಕಿತ್ಸೆಗಾಗಿ ಹೋಗಿದ್ದರು. ಇದರ ನಂತರ ಚಿಕಿತ್ಸೆಯ ಹಣವನ್ನು ಆನ್ಲೈನ್ನಲ್ಲಿ ಪಾವತಿಸಿ ಹಿಂದೂ ಮಹಿಳೆ ಅಲ್ಲಿಂದ ಹೊರಟುಹೋದರು.
ಹೆಸರು ‘ಶಮೀಮ್’; ಆದರೆ ಹೇಳುವುದು ‘ಸಮೀರ್’ !
ಹಿಂದೂ ಮಹಿಳೆಯ ಲೈಂಗಿಕ ಕಿರುಕುಳ ಮಾಡಿದ ಈ ಯುವಕ ತನ್ನ ಹೆಸರನ್ನು ‘ಸಮೀರ್’ ಎಂದು ಹೇಳಿಕೊಳ್ಳುತ್ತಾನೆ. ಹಿಂದೂ ಮಹಿಳೆ ಆನ್ಲೈನ್ನಲ್ಲಿ ಹಣವನ್ನು ಕಳುಹಿಸಿದಾಗ ಆತನ ಹೆಸರು ‘ಶಮೀಮ್ ಶಕೀರ್ ಸಲ್ಮಾನಿ’ ಎಂದು ಬಂದಿದೆ. ಇದರರ್ಥ ‘ಶಮೀಮ್ ಸಲ್ಮಾನಿ’ ತನ್ನ ಹೆಸರನ್ನು ‘ಸಮೀರ್’ ಎಂದು, ಅಂದರೆ ‘ಹಿಂದೂ’ ಎಂದು ಬಿಂಬಿಸಿಕೊಂಡು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾನೆ.
ಇತರ ಮಹಿಳೆಯರಿಗೆ ಕಿರುಕುಳ ಆಗಬಾರದು ಎಂಬ ಕಾರಣಕ್ಕೆ ದೂರು! – ಸಂತ್ರಸ್ತ ಮಹಿಳೆ
ಸಂತ್ರಸ್ತ ಮಹಿಳೆ ‘ಸನಾತನ ಪ್ರಭಾತ’ ಪ್ರತಿನಿಧಿಯೊಂದಿಗೆ ಮಾತನಾಡುವಾಗ, “ಈ ಘಟನೆಯ ನಂತರ ನನಗೆ ತುಂಬಾ ಭಯವಾಗಿತ್ತು; ಆದರೆ ನಡೆದ ವಿಷಯವನ್ನು ಪತಿಗೆ ತಿಳಿಸಿದಾಗ ಅವರು ‘ಪೊಲೀಸರಿಗೆ ದೂರು ನೀಡೋಣ’ ಎಂದು ಹೇಳಿದರು. ನನ್ನೊಂದಿಗೆ ನಡೆದ ಘಟನೆ ಇತರ ಯುವತಿಯರು ಅಥವಾ ಮಹಿಳೆಯರೊಂದಿಗೂ ನಡೆಯಬಹುದು. ಹಾಗೆ ಆಗಬಾರದು ಎಂಬ ಕಾರಣಕ್ಕಾಗಿ ನಾನು ಪೊಲೀಸರಿಗೆ ದೂರು ನೀಡುವ ಧೈರ್ಯ ಮಾಡಿದೆ,” ಎಂದು ಹೇಳಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಸ್ವಂತ ಪಕ್ಷ ಸ್ಥಾಪಿಸಲು ಮುಂದಾದ ಭಾಜಪ ತಮಿಳುನಾಡಿನ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ!