ಗೆದ್ದಲು ಹಿಡಿದ ನೋಟುಗಳು

ಕೊಲಕಾತಾ (ಬಂಗಾಳ) – ಇಲ್ಲಿನ ಸುರೇಂದ್ರನಾಥ್ ಕಾಲೇಜಿನಲ್ಲಿರುವ ತೃಣಮೂಲ ಕಾಂಗ್ರೆಸ್ ಛಾತ್ರ ಪರಿಷತ್ತಿನ ಕಚೇರಿಯಿಂದ ಲಕ್ಷಾಂತರ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ನೋಟುಗಳ ಬಹುದೊಡ್ಡ ಭಾಗವು ಗೆದ್ದಲು ಮತ್ತು ಕೀಟಗಳಿಂದಾಗಿ ಸಂಪೂರ್ಣವಾಗಿ ನಾಶವಾಗಿದೆ. ಬಹಳ ದಿನಗಳಿಂದ ಮುಚ್ಚಲ್ಪಟ್ಟಿದ್ದ ಈ ಕಚೇರಿಯನ್ನು ಆಡಳಿತಾತ್ಮಕ ಸೂಚನೆಗಳ ಮೇರೆಗೆ ತೆರೆದಾಗ ಈ ವಿಷಯ ಬೆಳಕಿಗೆ ಬಂದಿದೆ.
೧. ವಿದ್ಯಾರ್ಥಿ ಚುನಾವಣೆಗಳು ನಡೆಯದ ಕಾರಣ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಕಾಲೇಜಿನ ಈ ಕಚೇರಿಯನ್ನು ಹಲವು ವರ್ಷಗಳ ಹಿಂದೆ ಮುಚ್ಚಲಾಗಿತ್ತು. ಇತ್ತೀಚೆಗಷ್ಟೇ ಸ್ವಚ್ಛತೆ ಮತ್ತು ನಿರ್ವಹಣಾ ಕಾರ್ಯಗಳಿಗಾಗಿ ಅಧಿಕಾರಿಗಳು ಕೊಠಡಿಯಲ್ಲಿದ್ದ ಕಪಾಟು ಒಂದನ್ನು ತೆರೆದರು. ಕಪಾಟಿನಲ್ಲಿ ತೃಣಮೂಲ ಕಾಂಗ್ರೆಸ್ನ ಬ್ಯಾನರ್ಗಳು ಮತ್ತು ಭಿತ್ತಿಚಿತ್ರಗಳು, ಹಾಗೂ ಎರಡು ‘ಟ್ರಾಲಿ ಬ್ಯಾಗ್’ಗಳು ಸಹ ಪತ್ತೆಯಾದವು. ಅವುಗಳನ್ನು ತೆರೆದಾಗ ೫೦೦ ಮತ್ತು ೧೦೦ ರೂಪಾಯಿ ನೋಟುಗಳ ಕಂತೆಗಳು ತುಂಬಿದ್ದವು. ದೀರ್ಘಕಾಲದವರೆಗೆ ಕಪಾಟಿನಲ್ಲಿಟ್ಟಿದ್ದರಿಂದ ಬಹುತೇಕ ನೋಟುಗಳು ಗೆದ್ದಲಿಗೆ ಹಾಳಾಗಿದ್ದವು.
೨. ಭಾಜಪ ಶಾಸಕ ಸಜಲ್ ಘೋಷ್ ಅವರು ತೃಣಮೂಲ ಕಾಂಗ್ರೆಸ್ ಅನ್ನು ಟೀಕಿಸುತ್ತಾ, ಈ ಜನ್ಮದಲ್ಲಿ ನಾನು ಇನ್ನೂ ಏನೇನನ್ನು ನೋಡುವುದು ಬಾಕಿ ಇದೆ? ನಾವು ತೃಣಮೂಲ ನಾಯಕರ ಮನೆಯಲ್ಲಿ ಹಣದ ರಾಶಿಗಳನ್ನು ನೋಡಿದ್ದೇವೆ. ತೃಣಮೂಲ ನಾಯಕರ ಸೆಣಬಿನ ಗದ್ದೆಯಲ್ಲಿ ಹಣದ ಕಂತೆ ನೋಡಿದ್ದೇವೆ. ಇಂದು ತೃಣಮೂಲದ ವಿದ್ಯಾರ್ಥಿ ನಾಯಕರು ಕಪಾಟುಗಳಲ್ಲಿ ಲಕ್ಷಾಂತರ ರೂಪಾಯಿಗಳನ್ನು ಇಟ್ಟಿರುವುದನ್ನು ನಾನು ನೋಡಿದ್ದೇನೆ ಮತ್ತು ಆ ಹಣವೂ ಹಾಳಾಗಿದೆ ಎಂದು ಹೇಳಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !