ಕೊಲಕಾತಾ: ತೃಣಮೂಲ ಕಾಂಗ್ರೆಸ್‌ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ

​ಕೊಲಕಾತಾ (ಬಂಗಾಳ) – ತೃಣಮೂಲ ಕಾಂಗ್ರೆಸ್ ನಾಯಕ ಫಿರ್ಹಾದ್ ಹಕೀಮ್ ಕೊಲಕಾತಾದ ಮೇಯರ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹಕೀಮ್ ಅವರು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರಿಗೆ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ಪಕ್ಷದ ನಾಯಕತ್ವವು ಪಕ್ಷದ ಎಲ್ಲಾ ಸಮಿತಿಗಳನ್ನು ವಿಸರ್ಜಿಸಿದೆ.

ಫಿರ್ಹಾದ್ ಹಕೀಮ್ ಅವರ ರಾಜೀನಾಮೆಯ ಕುರಿತು ಭಾಜಪ ನಾಯಕ ಅಮಿತ್ ಮಾಳವೀಯ ಅವರು ಮಾತನಾಡಿ, ಫಿರ್ಹಾದ್ ಹಕೀಮ್ ಅವರ ಅಧಿಕಾರಾವಧಿಯು ಓಲೈಕೆ ರಾಜಕಾರಣದ ಅತ್ಯಂತ ಕೆಟ್ಟ ಕಾಲವಾಗಿತ್ತು ಎಂದು ಹೇಳಿದ್ದಾರೆ. ಹಕೀಮ್ ಅವರ ನಿರ್ಗಮನದಿಂದ ಕೊಲಕಾತಾದ ಆಡಳಿತದಲ್ಲಿದ್ದ ಒಂದು ವಿಭಜನಕಾರಿ ಅಧ್ಯಾಯ ಕೊನೆಗೊಂಡಿದೆ ಎಂದು ಮಾಳವೀಯ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಫಿರ್ಹಾದ್ ಹಕೀಮ್ ನಿರಂತರವಾಗಿ ಹಿಂದೂ ವಿರೋಧಿ ಮತ್ತು ದೇಶವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದರು. ಹಕೀಮ್ ಅವರು ತಮ್ಮ ಹುದ್ದೆ ತೊರೆಯಬೇಕಾಗಿ ಬಂದಿರುವುದು, ಹಿಂದೂಗಳಿಗೆ ಸಂತೋಷದ ಸಂಗತಿಯೇ ಆಗಿದೆ. ಇಂತಹವರನ್ನು ಕೇವಲ ರಾಜೀನಾಮೆಯೊಂದಿಗೆ ಬಿಡದೆ ಕಾರಾಗೃಹಕ್ಕೆ ತಳ್ಳುವುದು ಅವಶ್ಯಕವಾಗಿದೆ!