ಪಂಚಕುಲಾ (ಹರಿಯಾಣ): ಮೇಯರ್ ಕಚೇರಿ ಸೇರಿದಂತೆ ಹರಿಯಾಣ ಮತ್ತು ದೆಹಲಿಯ ದೇವಸ್ಥಾನಗಳನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಬೆದರಿಕೆ

​ಪಂಚಕುಲಾ (ಹರಿಯಾಣ) – ಪಂಚಕುಲಾದ ಮೇಯರ್ ಕಚೇರಿ ಮತ್ತು ಮಹಾನಗರ ಪಾಲಿಕೆಗೆ ಇ-ಮೇಲ್ ಒಂದನ್ನು ಕಳುಹಿಸಲಾಗಿದ್ದು, ಪಂಚಕುಲಾ ಮೇಯರ್ ಕಚೇರಿ, ಉತ್ತರ ಭಾರತದ ಹಲವು ಪ್ರಸಿದ್ಧ ದೇವಸ್ಥಾನಗಳು ಮತ್ತು ದೆಹಲಿ-ಅಂಬಾಲಾ-ಚಂಡೀಗಢ ರೈಲು ಮಾರ್ಗವನ್ನು ಬಾಂಬ್ ಮೂಲಕ ಸ್ಫೋಟಿಸುವುದಾಗಿ ಇ-ಮೇಲ್ ನಲ್ಲಿ ಬೆದರಿಕೆ ಹಾಕಲಾಗಿದೆ. ಈ ಇ-ಮೇಲ್‌ನಲ್ಲಿ ‘ಖಲಿಸ್ತಾನ್ ನ್ಯಾಷನಲ್ ಆರ್ಮಿ’ ಮತ್ತು ‘ಹರಿಯಾಣ ಬನೇಗಾ ಖಲಿಸ್ತಾನ್’ ನಂತಹ ಆಕ್ಷೇಪಾರ್ಹ ಘೋಷಣೆಗಳನ್ನು ಬರೆಯಲಾಗಿದೆ. ಇದರ ನಂತರ ಭದ್ರತಾ ಸಂಸ್ಥೆಗಳು ಜಾಗರೂಕರಾಗಿದ್ದು, ತನಿಖೆಯನ್ನು ಪ್ರಾರಂಭಿಸಿವೆ.

ಜೂನ್ ೫ ಮತ್ತು ೬ರ ರಂದು ರೈಲು ಮಾರ್ಗದಲ್ಲಿ ಸ್ಫೋಟಗಳನ್ನು ಮಾಡಲಾಗುವುದು, ಆದ್ದರಿಂದ ಯಾರೂ ಪ್ರಯಾಣಿಸಬಾರದು ಎಂದು ​ಇ-ಮೇಲ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

​ಇ-ಮೇಲ್‌ನಲ್ಲಿ ನೀಡಲಾದ ದೇವಸ್ಥಾನಗಳ ಹೆಸರುಗಳು

​ಕಾಲ್ಕಾ ಜಿ ದೇವಸ್ಥಾನ (ದೆಹಲಿ)

​ಭೀಮಾ ದೇವಿ ದೇವಸ್ಥಾನ (ಪಿಂಜೋರ್)

​ಕಾರ್ತಿಕೇಯ ದೇವಸ್ಥಾನ (ಪಿಹೋವಾ)

​ಸ್ಥಾಣೇಶ್ವರ ಮಹಾದೇವ ದೇವಸ್ಥಾನ (ಕುರುಕ್ಷೇತ್ರ)

​ಗೌರಿ ಶಂಕರ ದೇವಸ್ಥಾನ (ಚಾಂದಿನಿ ಚೌಕ್, ದೆಹಲಿ)

​ಯೋಗಮಾಯಾ ದೇವಸ್ಥಾನ (ಮೆಹ್ರೌಲಿ, ದೆಹಲಿ)

ಸಂಪಾದಕೀಯ ನಿಲುವು

ಮಸೀದಿ ಅಥವಾ ಚರ್ಚ್‌ಗಳಿಗೆ ಇಂತಹ ಬೆದರಿಕೆಗಳು ಬರುವುದಿಲ್ಲ, ಎಂಬುದನ್ನು ಗಮನದಲ್ಲಿಡಿ!