ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !

ನಾಗಪುರ – ಇಲ್ಲಿನ ಧಂತೋಲಿ ಪರಿಸರದಲ್ಲಿರುವ ಶ್ರೀ ದುರ್ಗಾದೇವಿಯ ದೇವಸ್ಥಾನವನ್ನು ಪ್ರವೇಶಿಸಿ, ದೇವಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಳ್ಳತನ ಮಾಡಿದ ಪ್ರಕರಣದಲ್ಲಿ ಪೊಲೀಸರು ಮೊಹಮ್ಮದ್ ಗಜನ್ವಿ, ಇರ್ಫಾನ್ ಶೇಖ್ ಮತ್ತು ಶೋಯೆಬ್ ಶೇಖ್ ಅವರನ್ನು ಬಂಧಿಸಿದ್ದಾರೆ. ಪೂಜೆಗಾಗಿ ಬಂದ ಅರ್ಚಕರಿಗೆ ಸ್ವಚ್ಛತೆ ಮಾಡುವಾಗ ಮೂರ್ತಿಯ ಸಮೀಪ ಕೆಲವು ಮಣಿಗಳು ಬಿದ್ದಿರುವುದು ಕಂಡಿದೆ. ಆಗ ಈ ಘಟನೆ ಬೆಳಕಿಗೆ ಬಂದಿದೆ.

ಕೆಲವು ದಿನಗಳ ಹಿಂದೆ ಇದೇ ಆರೋಪಿಗಳು ದೇವಸ್ಥಾನದ ಆವರಣದಲ್ಲಿ ಸಂದೇಹಾಸ್ಪದವಾಗಿ ಓಡಾಡುತ್ತಿದ್ದು, ಪರಿಸರದ ಪರಿಶೀಲನೆ ನಡೆಸುತ್ತಿರುವುದು ಕಂಡುಬಂದಿತ್ತು.

ಸಂಪಾದಕೀಯ ನಿಲುವು

  • ​ದೇವಸ್ಥಾನದಲ್ಲಿ ಕಳ್ಳತನ ಮಾಡುವ ಮತಾಂಧರಿಗೆ ಜೀವಾವಧಿ ಶಿಕ್ಷೆಯಾಗಬೇಕು !
  • ದೇವಸ್ಥಾನಗಳು ಸುರಕ್ಷಿತವಾಗಿರಲು ಹಿಂದೂ ರಾಷ್ಟ್ರದ ಸ್ಥಾಪನೆ ಅನಿವಾರ್ಯವಾಗಿದೆ !