(1 ಕೋಸು ಎಂದರೆ ಅಂದಾಜು 3 ಕಿಲೋಮೀಟರ್)

ಭರತ್ಪುರ (ರಾಜಸ್ಥಾನ) – ಒಂದು ಕಡೆ ಅತ್ತೆ-ಸೊಸೆಯರ ಸಂಬಂಧದಲ್ಲಿ ಹೆಚ್ಚಾಗಿ ಜಗಳ ಮತ್ತು ಕಹಿ ನೆನಪುಗಳನ್ನೇ ಕಾಣಲು ಸಿಗುತ್ತಿರುವಾಗ ಇನ್ನೊಂದೆಡೆ ರಾಜಸ್ಥಾನದ ಭರತಪುರದ ಬ್ರಜಭೂಮಿ ಪ್ರದೇಶದಲ್ಲಿ ಅತ್ಯಂತ ವಿಶಿಷ್ಟ ಮತ್ತು ಹೃದಯಸ್ಪರ್ಶಿ ದೃಶ್ಯವೊಂದು ಮುನ್ನಲೆಗೆ ಬಂದಿದೆ. ಇಲ್ಲಿ ಹರಿಯಾಣದ ಹತಾನಾ ಗ್ರಾಮದ ನಿವಾಸಿಯಾದ ಕಾಜಲ ಚೌಧರಿ ಎಂಬ ಸೊಸೆ, ತನ್ನ 90 ವರ್ಷದ ವಯೋವೃದ್ಧ ಅತ್ತೆಯನ್ನು ಪ್ಲಾಸ್ಟಿಕ್ ಟಬ್ನಲ್ಲಿ ಕುಳ್ಳಿರಿಸಿ, ಅದನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು, ಅತ್ಯಂತ ಕಠಿಣ ಮತ್ತು ದುರ್ಗಮವಾದ 84 ಕೋಸ್ (ಅಂದಾಜು 252 ಕಿಲೋಮೀಟರ್) ಪ್ರದಕ್ಷಿಣೆಯನ್ನು ಕಾಲ್ನಡಿಗೆಯಲ್ಲೇ ಪೂರ್ಣಗೊಳಿಸುತ್ತಿದ್ದಾರೆ. ಕಾಜಲ ಚೌಧರಿಯವರು ಅತ್ಯಂತ ಜನಪ್ರಿಯ ಮತ್ತು ಪ್ರಸಿದ್ಧ ಜಾನಪದ ಗಾಯಕಿಯಾಗಿದ್ದಾರೆ.
1.ಕಾಜಲರವರ ಅತ್ತೆ ಚಂದ್ರೀ ದೇವಿಯವರಿಗೆ ಬ್ರಜಭೂಮಿಯ ಪ್ರಸಿದ್ಧ 84 ಕೋಸ್ ಪ್ರದಕ್ಷಿಣೆ ಮಾಡಬೇಕೆಂಬ ಬಹುಕಾಲದ ಆಸೆಯಿತ್ತು; ಆದರೆ ದೈಹಿಕ ಮಿತಿಗಳ ಕಾರಣದಿಂದಾಗಿ ಅವರು ಅಸಹಾಯಕರಾಗಿದ್ದರು. ಇದನ್ನು ತಿಳಿದ ತಕ್ಷಣ, ಅತ್ತೆಯ ಈ ಕನಸನ್ನು ನನಸು ಮಾಡುವುದನ್ನೇ ಕಾಜಲ ತಮ್ಮ ಜೀವನದ ಮುಖ್ಯ ಗುರಿಯನ್ನಾಗಿ ಮಾಡಿಕೊಂಡರು.
2.ಕಾಜಲರವರು ತಮ್ಮ ಅತ್ತೆಯನ್ನು ದೊಡ್ಡ ಪ್ಲಾಸ್ಟಿಕ್ ಟಬ್ನಲ್ಲಿ ಕುಳ್ಳಿರಿಸಿ, ಆ ಟಬ್ ಅನ್ನು ತಲೆಯ ಮೇಲೆ ಹೊತ್ತುಕೊಂಡು, ಬನಾಚಾರಿ ಗ್ರಾಮದಿಂದ ಈ ಅತ್ಯಂತ ಕಠಿಣ ಕಾಲ್ನಡಿಗೆಯ ತೀರ್ಥಯಾತ್ರೆಯನ್ನು ಪ್ರಾರಂಭಿಸಿದರು.
3.ಕಾಜಲರವರು ಈ ಮಾರ್ಗವನ್ನು ಕ್ರಮಿಸುತ್ತಾ ಭರತಪುರದ ಗಡಿಯಿಂದ ಮುನ್ನಡೆಯುತ್ತಿದ್ದಂತೆ, ಸ್ಥಳೀಯ ಗ್ರಾಮಸ್ಥರು ಮತ್ತು ಭಕ್ತರು ಈ ಆದರ್ಶ ಸೊಸೆಯನ್ನು ಹೂವು, ಹಾರ ಮತ್ತು ಆರತಿ ಬೆಳಗುವ ಮೂಲಕ ಭವ್ಯವಾಗಿ ಸ್ವಾಗತಿಸುತ್ತಿದ್ದಾರೆ. ಕಾಜಲ ರವರ ಈ ಯಾತ್ರೆ ಇನ್ನು ಕೂಡ ಮುಂದುವರಿಯುತ್ತಿದೆ.
ಸ್ವಂತ ಪಕ್ಷ ಸ್ಥಾಪಿಸಲು ಮುಂದಾದ ಭಾಜಪ ತಮಿಳುನಾಡಿನ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ!
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ