ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !

  • ಸಂತ ಕಬೀರ್‌ನಗರ (ಉತ್ತರ ಪ್ರದೇಶ) ಇಲ್ಲಿನ ಘಟನೆ

  • ಬಂಧನದ ವೇಳೆಯೂ ಅಪರಾಧದ ಬಗ್ಗೆ ಹೆಮ್ಮೆಯ ಭಾವನೆ !

ಸಂತ ಕಬೀರ್‌ನಗರ (ಉತ್ತರ ಪ್ರದೇಶ) – ಇಲ್ಲಿ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡ ಪ್ರಕರಣದಲ್ಲಿ ಪೊಲೀಸರು ಮೊಹಮ್ಮದ್ ಕಾಮಿಲ್ ಮತ್ತು ಮೊಹಮ್ಮದ್ ಅಹ್ಮದ್ ಅವರನ್ನು ಬಂಧಿಸಿದ್ದಾರೆ. ಆರೋಪಿಗಳು ಮಹಿಳೆಯ ಬಳಿ ಕುಡಿಯಲು ನೀರು ಕೇಳುವ ನೆಪದಲ್ಲಿ ಆಕೆಯ ಕುತ್ತಿಗೆಯಲ್ಲಿದ್ದ ಸರವನ್ನು ಎಳೆದರು. ಈ ಕುರಿತು ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದಾಳೆ.

ಬಂಧನದ ನಂತರ ಆರೋಪಿಗಳು ಪೊಲೀಸರ ಮುಂದೆಯೇ ತಮ್ಮ ಮೀಸೆಯನ್ನು ತಿರುವಿದ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ‘ಚಿನ್ನದ ಸರ ಎಲ್ಲಿದೆ ?’ ಎಂದು ಕೇಳಿದಾಗ, ಅದನ್ನು ೨೫ ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿರುವುದಾಗಿ ಹೇಳಿದರು. ಕಳ್ಳರ ಮುಖದಲ್ಲಿ ಯಾವುದೇ ಪಶ್ಚಾತ್ತಾಪದ ಲಕ್ಷಣ ಇರಲಿಲ್ಲ. ಪೊಲೀಸರ ಭಯವೂ ಅವರ ಮುಖದಲ್ಲಿ ಕಾಣಿಸುತ್ತಿರಲಿಲ್ಲ.

ಇಬ್ಬರದ್ದೂ ಅಪರಾಧ ಹಿನ್ನೆಲೆಯಾಗಿದೆ. ಒಬ್ಬನ ಮೇಲೆ ಕೊಲೆ ಮತ್ತು ‘ಗ್ಯಾಂಗ್‌ಸ್ಟರ್ ಆಕ್ಟ್’ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಂಧನದ ವೇಳೆ ಆರೋಪಿಗಳ ಬಳಿ ೨ ಕಿಲೋ ಗಾಂಜಾ, ೧ ದ್ವಿಚಕ್ರ ವಾಹನ, ೪ ಮೊಬೈಲ್, ಮೆಣಸಿನ ಪುಡಿ ಮತ್ತು ಸಿಮ್ ಕಾರ್ಡ್‌ ಪತ್ತೆಯಾಗಿವೆ. ಈ ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ದೇಶದಲ್ಲಿ ಅಲ್ಪಸಂಖ್ಯಾತರಾಗಿರುವವರು ಅಪರಾಧದ ಪ್ರತಿಯೊಂದು ಕ್ಷೇತ್ರದಲ್ಲಿ ಮಾತ್ರ ಬಹುಸಂಖ್ಯಾತರು ! ಇಂತವರ ಮನಸ್ಸಿನಲ್ಲಿ ಕಾನೂನಿನ ಭಯವೂ ಇಲ್ಲ ಎಂಬುದನ್ನು ಗಮನಿಸಬೇಕು !