೧೯೮೪ ರಲ್ಲಿ ದೆಹಲಿಯಲ್ಲಿ ನಡೆದ ಶಿಖ್ಖ ವಿರೋಧಿ ಗಲಭೆ
ನವದೆಹಲಿ – ಇಲ್ಲಿಯ ರಾವುಸ್ ಅವೆನ್ಯೂ ನ್ಯಾಯಾಲಯವು ದೆಹಲಿಯಲ್ಲಿನ ೧೯೮೪ ರಲ್ಲಿ ನಡೆದಿರುವ ಶಿಖ್ಖ ವಿರೋಧಿ ಗಲಭೆಯ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಮಾಜಿ ಸಂಸದ ಸಜ್ಜನ್ ಕುಮಾರ್ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಸಂತ್ರಸ್ತರು ಸಜ್ಜನ್ ಕುಮಾರ್ ಇವರಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿದ್ದರು. ಈ ಪ್ರಕರಣ ಗಲಭೆಯ ಸಮಯದಲ್ಲಿ ಸರಸ್ವತಿ ವಿಹಾರದಲ್ಲಿ ಜಸ್ವಂತ ಸಿಂಹ ಮತ್ತು ಅವರ ಪುತ್ರ ತರುಣ ದೀಪ ಸಿಂಹ ಇವರ ಹತ್ಯೆಗೆ ಸಂಬಂಧಪಟ್ಟದ್ದಾಗಿದೆ. ಸಜ್ಜನ ಕುಮಾರ್ ಇವರು ಪ್ರಸ್ತುತ ಗಲಭೆಯ ಎರಡನೆಯ ಪ್ರಕರಣದಲ್ಲಿ ತಿಹಾರ ಜೈಲಿನಲ್ಲಿ ಜೀವಾವಧಿಶಿಕ್ಷೆ ಭೋಗಿಸುತ್ತಿದ್ದಾರೆ.
🚨 1984 Sikh Riots: Ex-Congress MP Sajjan Kumar Gets Second Life Sentence! 🚨
🔹 Sajjan Kumar sentenced to life imprisonment in another 1984 anti-Sikh riots case
🔹 Already serving a life term for his role in the Delhi Cantonment riots
🔹 Court cites old age & illness as… pic.twitter.com/ZgkqLBk5Fu
— Sanatan Prabhat (@SanatanPrabhat) February 25, 2025
ಸಜ್ಜನ ಕುಮಾರ್ ಇವರ ಮೇಲಿನ ಇತರ ಎರಡು ಮೊಕದ್ದಮೆ
೧. ದೆಹಲಿ ಕ್ಯಾಂಟ್ ದಲ್ಲಿ ಪಾಲಂ ಕಾಲೋನಿಯಲ್ಲಿ ೫ ಸಿಖ್ಖರ ಹತ್ಯೆಯ ನಂತರ ಗುರುದ್ವಾರ ಸುಡಲಾಗಿತ್ತು. ಈ ಪ್ರಕರಣದಲ್ಲಿ ಸಜ್ಜನ ಕುಮಾರ್ ತಪ್ಪಿತಸ್ಥರಾಗಿದ್ದರು. ಡಿಸೆಂಬರ್ ೧೭, ೨೦೧೮ ರಂದು ದೆಹಲಿ ಉಚ್ಚ ನ್ಯಾಯಾಲಯವು ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿತು.
೨. ದೆಹಲಿಯ ಸುಲತಾನಪುರಿ ಇಲ್ಲಿ ನಡೆದಿರುವ ೩ ಶಿಖ್ಖ ರ ಹತ್ಯೆಯ ಪ್ರಕಾರಣದಲ್ಲಿ ರಾವುಸ್ ಅವೆನ್ಯೂ ನ್ಯಾಯಾಲಯವು ಅವರನ್ನು ಅಪರಾಧ ಮುಕ್ತಗೊಳಿಸಿತು.
ಏನಿದು ಶಿಖ್ಖ ವಿರೋಧಿ ಗಲಭೆ ?
ಅಕ್ಟೋಬರ್ ೩೦, ೧೯೮೪ ರಂದು ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಇವರನ್ನು ಅವರ ಅಂಗರಕ್ಷಕನು ಹತ್ಯೆಗೈದನು. ಅದರ ನಂತರ ದೆಹಲಿಯಲ್ಲಿ ಗಲಭೆ ಭುಗಿಲೆದ್ದಿತು. ಈ ಶಿಖ್ಖ ವಿರೋಧಿ ಗಲಭೆಯ ವಿಚಾರಣೆಗಾಗಿ ಸ್ಥಾಪಿಸಲಾಗಿರುವ ನಾನಾವಟಿ ಆಯೋಗದ ವರದಿಯ ಪ್ರಕಾರ ದೆಹಲಿ ಒಂದರಲ್ಲಿಯೇ ೫೮೭ ದೂರುಗಳು ದಾಖಲಾಗಿದ್ದವು, ಅದರಲ್ಲಿ ೨ ಸಾವಿರದ ೭೩೩ ಜನರು ಸಾವನ್ನಪ್ಪಿದ್ದರು. ದೇಶಾದ್ಯಂತ ಸಾವನ್ನಪ್ಪಿರುವ ಸಂಖ್ಯೆ ಸುಮಾರು ೩ ಸಾವಿರದ ೫೦೦ ರಷ್ಟು ಇತ್ತು. ಒಟ್ಟು ಪ್ರಕರಣಗಳಲ್ಲಿ ಸುಮಾರು ೨೪೦ ಪ್ರಕರಣಗಳು ಮುಚ್ಚಲಾದವು. ಹಾಗೂ ೨೫೦ ಪ್ರಕರಣಗಳಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು.
ಸಂಪಾದಕೀಯ ನಿಲುವು
|